<p><strong>ನಿಡಗುಂದಿ (ವಿಜಯಪುರ ಜಿಲ್ಲೆ):</strong> ‘ಅಭಿನಯ ಬಾರದ ನಾನು, ರಾಜಕೀಯ ಎಂಬ ನಾಟಕದಲ್ಲಿ ದುರಂತ ನಾಯಕನಾದೆ’ ಎಂದು ಬಿಜೆಪಿ ಮುಖಂಡ ಗಾಲಿ ಜನಾರ್ದನ ರೆಡ್ಡಿ ಇಲ್ಲಿ ಹೇಳಿದರು.</p>.<p>ನೇರ ನಡೆ–ನುಡಿಯಿಂದಾಗಿ ಬಸನಗೌಡ ಪಾಟೀಲ ಯತ್ನಾಳ ಮತ್ತು ತಾವು ಕೆಲ ದಿಗ್ಗಜರ ವೈರತ್ವ ಕಟ್ಟಿಕೊಂಡು ರಾಜಕೀಯ ವನವಾಸ ಅನುಭವಿಸುತ್ತಿರುವುದಾಗಿ ಹೇಳಿದ ಅವರು, ನಾಟಕದ ಒಳಿತನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೇ ವಿನಾ ಬದುಕೇ ನಾಟಕವಾಗಬಾರದು ಎಂದರು.</p>.<p>‘ನಮ್ಮ ಪಾತ್ರ ಮುಗಿದೇ ಹೋಯಿತೆಂದು ಕೆಲವರು ಖುಷಿಪಟ್ಟಿದ್ದಾರೆ. ನೈಜ ಕಥೆ ಇನ್ನು ಮುಂದಷ್ಟೇ ಆರಂಭವಾಗಲಿದೆ. ಕಾದು ನೋಡಿ’ ಎಂದು ವಿಧಾನ ಪರಿಷತ್ ಸದಸ್ಯ ಯತ್ನಾಳ ಹೇಳಿದರು.</p>.<p>ಸಮೀಪದ ತೆಲಗಿ ಗ್ರಾಮದ ಮಾರುತೇಶ್ವರ ಜಾತ್ರಾ ಉತ್ಸವದಲ್ಲಿ ಸೋಮವಾರ ರಾತ್ರಿ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಇವರಿಬ್ಬರೂ ಭಾಗವಹಿಸಿದ್ದರು.</p>.<p><strong>ದೇವರ ಹಿಪ್ಪರಗಿಯಿಂದ ಸ್ಪರ್ಧೆ?</strong><br /> ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಕ್ಷೇತ್ರದಿಂದ ಜನಾರ್ದನ ರೆಡ್ಡಿ ಈ ಬಾರಿ ಸ್ಪರ್ಧಿಸಲಿದ್ದಾರೆ ಎಂಬ ಮಾತು ಇದೇ ಸಂದರ್ಭದಲ್ಲಿ ಕೇಳಿ ಬಂತು. ಈ ಕುರಿತ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ, ರೆಡ್ಡಿ ಮುಗುಳ್ನಕ್ಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಿಡಗುಂದಿ (ವಿಜಯಪುರ ಜಿಲ್ಲೆ):</strong> ‘ಅಭಿನಯ ಬಾರದ ನಾನು, ರಾಜಕೀಯ ಎಂಬ ನಾಟಕದಲ್ಲಿ ದುರಂತ ನಾಯಕನಾದೆ’ ಎಂದು ಬಿಜೆಪಿ ಮುಖಂಡ ಗಾಲಿ ಜನಾರ್ದನ ರೆಡ್ಡಿ ಇಲ್ಲಿ ಹೇಳಿದರು.</p>.<p>ನೇರ ನಡೆ–ನುಡಿಯಿಂದಾಗಿ ಬಸನಗೌಡ ಪಾಟೀಲ ಯತ್ನಾಳ ಮತ್ತು ತಾವು ಕೆಲ ದಿಗ್ಗಜರ ವೈರತ್ವ ಕಟ್ಟಿಕೊಂಡು ರಾಜಕೀಯ ವನವಾಸ ಅನುಭವಿಸುತ್ತಿರುವುದಾಗಿ ಹೇಳಿದ ಅವರು, ನಾಟಕದ ಒಳಿತನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೇ ವಿನಾ ಬದುಕೇ ನಾಟಕವಾಗಬಾರದು ಎಂದರು.</p>.<p>‘ನಮ್ಮ ಪಾತ್ರ ಮುಗಿದೇ ಹೋಯಿತೆಂದು ಕೆಲವರು ಖುಷಿಪಟ್ಟಿದ್ದಾರೆ. ನೈಜ ಕಥೆ ಇನ್ನು ಮುಂದಷ್ಟೇ ಆರಂಭವಾಗಲಿದೆ. ಕಾದು ನೋಡಿ’ ಎಂದು ವಿಧಾನ ಪರಿಷತ್ ಸದಸ್ಯ ಯತ್ನಾಳ ಹೇಳಿದರು.</p>.<p>ಸಮೀಪದ ತೆಲಗಿ ಗ್ರಾಮದ ಮಾರುತೇಶ್ವರ ಜಾತ್ರಾ ಉತ್ಸವದಲ್ಲಿ ಸೋಮವಾರ ರಾತ್ರಿ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಇವರಿಬ್ಬರೂ ಭಾಗವಹಿಸಿದ್ದರು.</p>.<p><strong>ದೇವರ ಹಿಪ್ಪರಗಿಯಿಂದ ಸ್ಪರ್ಧೆ?</strong><br /> ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಕ್ಷೇತ್ರದಿಂದ ಜನಾರ್ದನ ರೆಡ್ಡಿ ಈ ಬಾರಿ ಸ್ಪರ್ಧಿಸಲಿದ್ದಾರೆ ಎಂಬ ಮಾತು ಇದೇ ಸಂದರ್ಭದಲ್ಲಿ ಕೇಳಿ ಬಂತು. ಈ ಕುರಿತ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ, ರೆಡ್ಡಿ ಮುಗುಳ್ನಕ್ಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>