<p><strong>ಚಂಡೀಗಡ: </strong>ಒಲಿಂಪಿಯನ್ ಕುಸ್ತಿಪಟು ಸಾಕ್ಷಿ ಮಲಿಕ್ ಅವರ ಸನ್ಮಾನ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಚಹಾಕೂಟದ ₹ 4 ಲಕ್ಷ ಮೊತ್ತವನ್ನು ಕ್ರೀಡಾ ಇಲಾಖೆಯಿಂದ ಮಂಜೂರು ಮಾಡಲು ಹರಿಯಾಣ ಕ್ರೀಡಾ ಸಚಿವ ಅನಿಲ್ ವಿಜ್ ನಿರಾಕರಿಸಿದ್ದಾರೆ. ಆಲ್ಲದೇ ಬಿಲ್ ಮತ್ತು ಕಾರ್ಯಕ್ರಮದ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಲು ಆದೇಶಿಸಿದ್ದಾರೆ.</p>.<p>ಈಚೆಗೆ ರೋಹ್ಟಕ್ ನಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸಚಿವ ವಿಜ್ ಕೂಡ ಅತಿಥಿಯಾಗಿದ್ದರು. ಆ ಸಂದರ್ಭದಲ್ಲಿ ಸಾಕ್ಷಿ ಕುಟುಂಬದ ಸದಸ್ಯರೂ ಇದ್ದರು.</p>.<p>‘ಸಾಕ್ಷಿ ಮಲಿಕ್ ಅವರ ಕುಟುಂಬದ ಆಹ್ವಾನದ ಮೇರೆಗೆ ಚಹಾ ಕೂಟಕ್ಕೆ ಅತಿಥಿಯಾಗಿದ್ದೆ. ಆ ಕಾರಣಕ್ಕೆ ಬಿಲ್ ಮೊತ್ತ ಪಾವತಿಸಲು ಆಗದು’ ಎಂದು ವಿಜ್ ತಿಳಿಸಿದ್ದಾರೆ.</p>.<p>‘ಸನ್ಮಾನ ಸಮಾರಂಭವನ್ನು ನಾವು ಆಯೋಜಿಸಿರಲಿಲ್ಲ. ನಮಗೂ ಚಹಾಕೂಟಕ್ಕೂ ಯಾವುದೇ ಸಂಬಂಧವಿಲ್ಲ. ಕ್ರೀಡಾ ಇಲಾಖೆಯೇ ಕಾರ್ಯಕ್ರಮ ಆಯೋಜಿಸಿದ್ದರಿಂದ ಬಿಲ್ ಅನ್ನು ಸಚಿವರ ಅನುಮೋದನೆಗೆ ಕಳುಹಿಸಲಾಗಿದೆ’ ಎಂದು ಸಾಕ್ಷಿ ಮಲಿಕ್ ಕುಟುಂಬ ಸ್ಪಷ್ಟಪಡಿಸಿದೆ.</p>.<p>ಕಾರ್ಯಕ್ರಮದ ನಂತರ ಕ್ರೀಡಾ ಇಲಾಖೆಯ ಅಧಿಕಾರಿಗಳು ಬಿಲ್ ಅನ್ನು ಕ್ರೀಡಾ ಸಚಿವಾಲಯಕ್ಕೆ ಕಳಿಸಿದ್ದರು. ಬಿಲ್ಗೆ ಸಂಬಂಧಿಸಿದ ಕಡತವನ್ನು ಪರಿಶೀಲಿಸಿದ ಸಚಿವರು ಎರಡು ಬಾರಿ ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಂಡೀಗಡ: </strong>ಒಲಿಂಪಿಯನ್ ಕುಸ್ತಿಪಟು ಸಾಕ್ಷಿ ಮಲಿಕ್ ಅವರ ಸನ್ಮಾನ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಚಹಾಕೂಟದ ₹ 4 ಲಕ್ಷ ಮೊತ್ತವನ್ನು ಕ್ರೀಡಾ ಇಲಾಖೆಯಿಂದ ಮಂಜೂರು ಮಾಡಲು ಹರಿಯಾಣ ಕ್ರೀಡಾ ಸಚಿವ ಅನಿಲ್ ವಿಜ್ ನಿರಾಕರಿಸಿದ್ದಾರೆ. ಆಲ್ಲದೇ ಬಿಲ್ ಮತ್ತು ಕಾರ್ಯಕ್ರಮದ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಲು ಆದೇಶಿಸಿದ್ದಾರೆ.</p>.<p>ಈಚೆಗೆ ರೋಹ್ಟಕ್ ನಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸಚಿವ ವಿಜ್ ಕೂಡ ಅತಿಥಿಯಾಗಿದ್ದರು. ಆ ಸಂದರ್ಭದಲ್ಲಿ ಸಾಕ್ಷಿ ಕುಟುಂಬದ ಸದಸ್ಯರೂ ಇದ್ದರು.</p>.<p>‘ಸಾಕ್ಷಿ ಮಲಿಕ್ ಅವರ ಕುಟುಂಬದ ಆಹ್ವಾನದ ಮೇರೆಗೆ ಚಹಾ ಕೂಟಕ್ಕೆ ಅತಿಥಿಯಾಗಿದ್ದೆ. ಆ ಕಾರಣಕ್ಕೆ ಬಿಲ್ ಮೊತ್ತ ಪಾವತಿಸಲು ಆಗದು’ ಎಂದು ವಿಜ್ ತಿಳಿಸಿದ್ದಾರೆ.</p>.<p>‘ಸನ್ಮಾನ ಸಮಾರಂಭವನ್ನು ನಾವು ಆಯೋಜಿಸಿರಲಿಲ್ಲ. ನಮಗೂ ಚಹಾಕೂಟಕ್ಕೂ ಯಾವುದೇ ಸಂಬಂಧವಿಲ್ಲ. ಕ್ರೀಡಾ ಇಲಾಖೆಯೇ ಕಾರ್ಯಕ್ರಮ ಆಯೋಜಿಸಿದ್ದರಿಂದ ಬಿಲ್ ಅನ್ನು ಸಚಿವರ ಅನುಮೋದನೆಗೆ ಕಳುಹಿಸಲಾಗಿದೆ’ ಎಂದು ಸಾಕ್ಷಿ ಮಲಿಕ್ ಕುಟುಂಬ ಸ್ಪಷ್ಟಪಡಿಸಿದೆ.</p>.<p>ಕಾರ್ಯಕ್ರಮದ ನಂತರ ಕ್ರೀಡಾ ಇಲಾಖೆಯ ಅಧಿಕಾರಿಗಳು ಬಿಲ್ ಅನ್ನು ಕ್ರೀಡಾ ಸಚಿವಾಲಯಕ್ಕೆ ಕಳಿಸಿದ್ದರು. ಬಿಲ್ಗೆ ಸಂಬಂಧಿಸಿದ ಕಡತವನ್ನು ಪರಿಶೀಲಿಸಿದ ಸಚಿವರು ಎರಡು ಬಾರಿ ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>