ಬಸವನಬಾಗೇವಾಡಿಯ ಶಿವಪ್ರಕಾಶ ಸ್ವಾಮೀಜಿ ಮಾತನಾಡಿ, ‘ಸಮಾಜದಲ್ಲಿ ಗೊಂದಲ ಸೃಷ್ಟಿಸಿ, ಧರ್ಮದಲ್ಲಿ ಹುಳಿ ಹಿಂಡುವ ಕೆಲಸವನ್ನು ಕೆಲ ರಾಜಕೀಯ ನಾಯಕರು ಮಾಡುತ್ತಿದ್ದಾರೆ. ಸಂಸ್ಕಾರವನ್ನು ತಿರಸ್ಕರಿಸಿ ಬದುಕುವುದನ್ನು ಒಪ್ಪಿಕೊಳ್ಳಲಾಗುವುದಿಲ್ಲ, ಅಡ್ಡಪಲ್ಲಕ್ಕಿ ನಡೆದರೆ ಇಡೀ ಗ್ರಾಮವೇ ಸಂಸ್ಕಾರ ಪಡೆಯುತ್ತದೆ. ಶೋಭೆಯೂ ನೆಲೆಸುತ್ತದೆ’ ಎಂದು ಹೇಳಿದರು. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಉಪಸ್ಥಿತರಿದ್ದರು.