<p>ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸತನದ ಭಾಗವಾಗಬೇಕು. ಆ ಹೊಸತನದ ಗಡಿಯನ್ನು ಇನ್ನಷ್ಟು ವಿಸ್ತರಿಸಬೇಕು ಎಂಬ ಹಂಬಲದೊಂದಿಗೆ ರಾಘು ಶಿವಮೊಗ್ಗ ‘ಚೂರಿಕಟ್ಟೆ’ ಎನ್ನುವ ಸಿನಿಮಾ ಮಾಡಿದ್ದಾರೆ. ಇತ್ತೀಚೆಗೆ ಚೂರಿಕಟ್ಟೆಯ ಟೀಸರ್ ಬಿಡುಗಡೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.</p>.<p>ಚಿತ್ರತಂಡದ ಸಕಲರೂ ವೇದಿಕೆಯ ಮುಂದೆ ಇದ್ದರು. ಆದರೂ ಕಾರ್ಯಕ್ರಮ ಆರಂಭವಾಗುವ ಯಾವ ಲಕ್ಷಣಗಳೂ ಕಾಣಿಸುತ್ತಿರಲಿಲ್ಲ. ಕಾರಣ ಅತಿಥಿಯಾಗಿ ಬರಲಿದ್ದ ರಕ್ಷಿತ್ ಶೆಟ್ಟಿ ಅವರು ಇನ್ನೂ ಬಂದಿರಲಿಲ್ಲ. ಕಾದೂ ಕಾದೂ ಸಾಕಾಗಿ ಚಿತ್ರತಂಡ ವೇದಿಕೆ ಏರಿತು.</p>.<p>‘ಸಿನಿಮಾದ ಕಥೆ ತುಂಬ ಚೆನ್ನಾಗಿದೆ. ಬಿಗಿಯಾದ ಚಿತ್ರಕಥೆಯೇ ಈ ಸಿನಿಮಾದ ಶಕ್ತಿ’ ಎಂದರು ನಾಯಕ ಪ್ರವೀಣ್.</p>.<p>‘ರಾಘು ನೀನಾಸಮ್ ವಿದ್ಯಾರ್ಥಿಯಾಗಿ ರಂಗತರಬೇತಿ ಪಡೆದಿದ್ದಾರೆ. ನಂತರ ಕಿರುಚಿತ್ರಗಳನ್ನು ಮಾಡಿ ಸಿನಿಮಾ ಮಾಧ್ಯಮದ ಕುರಿತು ಅನುಭವ ಪಡೆದುಕೊಂಡಿದ್ದಾರೆ. ಈಗ ಪೂರ್ಣಪ್ರಮಾಣದ ಸಿನಿಮಾ ಮಾಡಿರುವುದು ಖುಷಿಯ ವಿಷಯ’ ಎಂದು ಚಿತ್ರದಲ್ಲಿ ಪೊಲೀಸ್ ಇನ್ಸ್ಟೆಕ್ಟರ್ ಪಾತ್ರ ಮಾಡಿರುವ ಅಚ್ಯುತ್ ಕುಮಾರ್ ಬೆನ್ನುತಟ್ಟಿದರು.</p>.<p>‘ರಾಘು ಅವರ ಕಿರುಚಿತ್ರವನ್ನು ನೋಡಿಯೇ ಅವರ ಪ್ರತಿಭೆ ತಿಳಿದುಕೊಂಡೆ. ಎರಡೇ ದಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರೂ ಅದು ನನಗೆ ಖುಷಿ ಕೊಟ್ಟಿದೆ. ತಮಗೆ ಬೇಕಾದಂಥ ನಟನೆಯನ್ನು ಕಲಾವಿದರಿಂದ ತೆಗೆದುಕೊಳ್ಳುವ ಶಕ್ತಿ ನಿರ್ದೇಶಕರಲ್ಲಿದೆ’ ಎಂದರು ದತ್ತಣ್ಣ.</p>.<p>ಪ್ರೇರಣಾ ಈ ಚಿತ್ರದ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಲೆನಾಡಿನಲ್ಲಿ ಚಿತ್ರೀಕರಣ ಮಾಡಿದ ಅನುಭವಗಳನ್ನು ಅವರು ಹಂಚಿಕೊಂಡರು. ಸಿನಿಮಾದ ಐದು ಹಾಡುಗಳಿಗೆ ವಾಸುಕೀ ವೈಭವ್ ಸಂಗೀತ ಸಂಯೋಜಿಸಿದ್ದಾರೆ.</p>.<p>‘ಚೂರಿಕಟ್ಟೆ ಎಂಬ ಚಿತ್ರದ ಶೀರ್ಷಿಕೆಗೂ ಬ್ರಿಟಿಷರ ಕಾಲಕ್ಕೂ ಸಂಬಂಧವಿದೆ. ಇದು ಸ್ಥಳವೊಂದರ ಹೆಸರು. ಆಗ ರೈಲಿನಲ್ಲಿ ಸಾಗಿಸುವ ವಸ್ತುಗಳಿಗೆ ತೆರಿಗೆ ಕಟ್ಟಬೇಕಾಗಿತ್ತು. ಆದರೆ ಅಧಿಕಾರಿಗಳು ಸುಂಕ ಪಾವತಿಸದೇ ಸರ್ಕಾರಕ್ಕೆ ನಷ್ಟ ಉಂಟುಮಾಡುತ್ತಿದ್ದರು. ಹೀಗೆ ಸುಂಕ ವಸೂಲಾತಿಯ ಜಾಗದಲ್ಲಿ ಒಂದು ಕಟ್ಟೆ ಇತ್ತು. ಆ ಸ್ಥಳದಲ್ಲಿ ಕಳ್ಳರ ಕಾಟವೂ ಇದ್ದುದರಿಂದ ಅವರಿಂದ ರಕ್ಷಿಸಲು ಅಂಗರಕ್ಷಕರು ಚೂರಿಯನ್ನು ಸದಾ ಇಟ್ಟುಕೊಂಡಿರುತ್ತಿದ್ದರು. ಆದ್ದರಿಂದ ಈ ಸ್ಥಳಕ್ಕೆ ಚೂರಿಕಟ್ಟೆ ಎಂಬ ಹೆಸರು ಬಂತು. ಈ ಹೆಸರು ಆಕರ್ಷಕವಾಗಿರುವುದರಿಂದ ಚಿತ್ರಕ್ಕೆ ಇದೇ ಶೀರ್ಷಿಕೆ ಮಾಡಿಕೊಳ್ಳಲಾಯ್ತು’ ಎಂದು ಹೇಳಿಕೊಂಡರು ರಾಘು ಶಿವಮೊಗ್ಗ.</p>.<p>ಇಷ್ಟು ಹೇಳಿ ಮುಗಿಸುವಷ್ಟರಲ್ಲಿ ರಕ್ಷಿತ್ ಶೆಟ್ಟಿ ಬಂದು ತಲುಪಿದರು. ಎಂದಿನಂತೆ ಟ್ರಾಫಿಕ್ ಅನ್ನು ದೂರಿ ವೇದಿಕೆಯೇರಿದ ಅವರು ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.</p>.<p>ಬಹುತೇಕ ರಂಗಭೂಮಿ ಕಲಾವಿದರೇ ನಟಿಸಿರುವುದು ಈ ಚಿತ್ರದ ವಿಶೇಷ. ಬಾಲಾಜಿ ಮನೋಹರ್ ಖಳನ ಪಾತ್ರದಲ್ಲಿ ನಟಿಸಿದ್ದಾರೆ. ಅರಣ್ಯ ಅಧಿಕಾರಿಯಾಗಿ ಮಂಜುನಾಥ ಹೆಗಡೆ ನಟಿಸಿದ್ದಾರೆ. ನೋಬಿನ್ ಪಾಲ್ ಹಿನ್ನೆಲೆ ಸಂಗೀತ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸತನದ ಭಾಗವಾಗಬೇಕು. ಆ ಹೊಸತನದ ಗಡಿಯನ್ನು ಇನ್ನಷ್ಟು ವಿಸ್ತರಿಸಬೇಕು ಎಂಬ ಹಂಬಲದೊಂದಿಗೆ ರಾಘು ಶಿವಮೊಗ್ಗ ‘ಚೂರಿಕಟ್ಟೆ’ ಎನ್ನುವ ಸಿನಿಮಾ ಮಾಡಿದ್ದಾರೆ. ಇತ್ತೀಚೆಗೆ ಚೂರಿಕಟ್ಟೆಯ ಟೀಸರ್ ಬಿಡುಗಡೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.</p>.<p>ಚಿತ್ರತಂಡದ ಸಕಲರೂ ವೇದಿಕೆಯ ಮುಂದೆ ಇದ್ದರು. ಆದರೂ ಕಾರ್ಯಕ್ರಮ ಆರಂಭವಾಗುವ ಯಾವ ಲಕ್ಷಣಗಳೂ ಕಾಣಿಸುತ್ತಿರಲಿಲ್ಲ. ಕಾರಣ ಅತಿಥಿಯಾಗಿ ಬರಲಿದ್ದ ರಕ್ಷಿತ್ ಶೆಟ್ಟಿ ಅವರು ಇನ್ನೂ ಬಂದಿರಲಿಲ್ಲ. ಕಾದೂ ಕಾದೂ ಸಾಕಾಗಿ ಚಿತ್ರತಂಡ ವೇದಿಕೆ ಏರಿತು.</p>.<p>‘ಸಿನಿಮಾದ ಕಥೆ ತುಂಬ ಚೆನ್ನಾಗಿದೆ. ಬಿಗಿಯಾದ ಚಿತ್ರಕಥೆಯೇ ಈ ಸಿನಿಮಾದ ಶಕ್ತಿ’ ಎಂದರು ನಾಯಕ ಪ್ರವೀಣ್.</p>.<p>‘ರಾಘು ನೀನಾಸಮ್ ವಿದ್ಯಾರ್ಥಿಯಾಗಿ ರಂಗತರಬೇತಿ ಪಡೆದಿದ್ದಾರೆ. ನಂತರ ಕಿರುಚಿತ್ರಗಳನ್ನು ಮಾಡಿ ಸಿನಿಮಾ ಮಾಧ್ಯಮದ ಕುರಿತು ಅನುಭವ ಪಡೆದುಕೊಂಡಿದ್ದಾರೆ. ಈಗ ಪೂರ್ಣಪ್ರಮಾಣದ ಸಿನಿಮಾ ಮಾಡಿರುವುದು ಖುಷಿಯ ವಿಷಯ’ ಎಂದು ಚಿತ್ರದಲ್ಲಿ ಪೊಲೀಸ್ ಇನ್ಸ್ಟೆಕ್ಟರ್ ಪಾತ್ರ ಮಾಡಿರುವ ಅಚ್ಯುತ್ ಕುಮಾರ್ ಬೆನ್ನುತಟ್ಟಿದರು.</p>.<p>‘ರಾಘು ಅವರ ಕಿರುಚಿತ್ರವನ್ನು ನೋಡಿಯೇ ಅವರ ಪ್ರತಿಭೆ ತಿಳಿದುಕೊಂಡೆ. ಎರಡೇ ದಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರೂ ಅದು ನನಗೆ ಖುಷಿ ಕೊಟ್ಟಿದೆ. ತಮಗೆ ಬೇಕಾದಂಥ ನಟನೆಯನ್ನು ಕಲಾವಿದರಿಂದ ತೆಗೆದುಕೊಳ್ಳುವ ಶಕ್ತಿ ನಿರ್ದೇಶಕರಲ್ಲಿದೆ’ ಎಂದರು ದತ್ತಣ್ಣ.</p>.<p>ಪ್ರೇರಣಾ ಈ ಚಿತ್ರದ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಲೆನಾಡಿನಲ್ಲಿ ಚಿತ್ರೀಕರಣ ಮಾಡಿದ ಅನುಭವಗಳನ್ನು ಅವರು ಹಂಚಿಕೊಂಡರು. ಸಿನಿಮಾದ ಐದು ಹಾಡುಗಳಿಗೆ ವಾಸುಕೀ ವೈಭವ್ ಸಂಗೀತ ಸಂಯೋಜಿಸಿದ್ದಾರೆ.</p>.<p>‘ಚೂರಿಕಟ್ಟೆ ಎಂಬ ಚಿತ್ರದ ಶೀರ್ಷಿಕೆಗೂ ಬ್ರಿಟಿಷರ ಕಾಲಕ್ಕೂ ಸಂಬಂಧವಿದೆ. ಇದು ಸ್ಥಳವೊಂದರ ಹೆಸರು. ಆಗ ರೈಲಿನಲ್ಲಿ ಸಾಗಿಸುವ ವಸ್ತುಗಳಿಗೆ ತೆರಿಗೆ ಕಟ್ಟಬೇಕಾಗಿತ್ತು. ಆದರೆ ಅಧಿಕಾರಿಗಳು ಸುಂಕ ಪಾವತಿಸದೇ ಸರ್ಕಾರಕ್ಕೆ ನಷ್ಟ ಉಂಟುಮಾಡುತ್ತಿದ್ದರು. ಹೀಗೆ ಸುಂಕ ವಸೂಲಾತಿಯ ಜಾಗದಲ್ಲಿ ಒಂದು ಕಟ್ಟೆ ಇತ್ತು. ಆ ಸ್ಥಳದಲ್ಲಿ ಕಳ್ಳರ ಕಾಟವೂ ಇದ್ದುದರಿಂದ ಅವರಿಂದ ರಕ್ಷಿಸಲು ಅಂಗರಕ್ಷಕರು ಚೂರಿಯನ್ನು ಸದಾ ಇಟ್ಟುಕೊಂಡಿರುತ್ತಿದ್ದರು. ಆದ್ದರಿಂದ ಈ ಸ್ಥಳಕ್ಕೆ ಚೂರಿಕಟ್ಟೆ ಎಂಬ ಹೆಸರು ಬಂತು. ಈ ಹೆಸರು ಆಕರ್ಷಕವಾಗಿರುವುದರಿಂದ ಚಿತ್ರಕ್ಕೆ ಇದೇ ಶೀರ್ಷಿಕೆ ಮಾಡಿಕೊಳ್ಳಲಾಯ್ತು’ ಎಂದು ಹೇಳಿಕೊಂಡರು ರಾಘು ಶಿವಮೊಗ್ಗ.</p>.<p>ಇಷ್ಟು ಹೇಳಿ ಮುಗಿಸುವಷ್ಟರಲ್ಲಿ ರಕ್ಷಿತ್ ಶೆಟ್ಟಿ ಬಂದು ತಲುಪಿದರು. ಎಂದಿನಂತೆ ಟ್ರಾಫಿಕ್ ಅನ್ನು ದೂರಿ ವೇದಿಕೆಯೇರಿದ ಅವರು ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.</p>.<p>ಬಹುತೇಕ ರಂಗಭೂಮಿ ಕಲಾವಿದರೇ ನಟಿಸಿರುವುದು ಈ ಚಿತ್ರದ ವಿಶೇಷ. ಬಾಲಾಜಿ ಮನೋಹರ್ ಖಳನ ಪಾತ್ರದಲ್ಲಿ ನಟಿಸಿದ್ದಾರೆ. ಅರಣ್ಯ ಅಧಿಕಾರಿಯಾಗಿ ಮಂಜುನಾಥ ಹೆಗಡೆ ನಟಿಸಿದ್ದಾರೆ. ನೋಬಿನ್ ಪಾಲ್ ಹಿನ್ನೆಲೆ ಸಂಗೀತ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>