<p><strong>ಚಿಕ್ಕಮಗಳೂರು: </strong>ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಕಳೆದ ವರ್ಷ ಹಲವಾರು ಸಿಹಿಕಹಿ ಸಂಗತಿಗಳು ನಡೆದಿವೆ. 2017ನೇ ವರ್ಷದ ಪ್ರಮುಖ ಸಂಗತಿಗಳ ಹಿನ್ನೋಟ...</p>.<p><strong>* ಜ.3: </strong>ನಗರದ ಹೊರವಲಯದ ಸೆರಾಯ್ ರೆಸಾರ್ಟ್ನಲ್ಲಿ ಸಹಕಾರ ಮತ್ತು ಸಕ್ಕರೆ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ತೀವ್ರ ಹೃದಯಾಘಾತದಿಂದ ಸಾವು.</p>.<p><strong>* ಜ.9:</strong> ಜಿಲ್ಲೆಯ ಗಾಲ್ಫ್ ಕ್ಲಬ್ನಲ್ಲಿ ನಡೆದ ಗಾಲ್ಫ್ ಟೂರ್ನಿಯ ದಿ ಬ್ರಿಗೇಡ್ ಕಪ್ ಓಪನ್ ವಿಭಾಗದಲ್ಲಿ ಆರ್.ಬಿ.ಸಿ.ನಾಯರ್ ಪ್ರಥಮ ಸ್ಥಾನ ಗಳಿಸಿದರು.</p>.<p><strong>* ಜ.29: </strong>ಜಿಲ್ಲೆಯಲ್ಲಿ ಸುಮಾರು 33 ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಡಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಮಾಜಿ ಮುಖಂಡ ಪ್ರವೀಣ್ ಖಾಂಡ್ಯ ಬಂಧನ.</p>.<p><strong>* ಫೆ.5: </strong>ಕ್ರಿಕೆಟ್ ಬೆಟ್ಟಿಂಗ್ ದಂದೆ ನಡೆಸುತ್ತಿದ್ದ ಆರೋಪದಡಿ 6 ಆರೋಪಿಗಳ ಬಂಧನ.</p>.<p><strong>* ಫೆ.21: </strong>ಭದ್ರಾ ಅಭಯಾರಣ್ಯ ಮುತ್ತೋಡಿ ವನ್ಯಜೀವಿ ವಲಯಕ್ಕೆ ಹೊಂದಿಕೊಂಡಂತಿರುವ ಮುತ್ತೋಡಿ ಪ್ರಾದೇಶಿಕ ವಲಯದ ಅತ್ತಿಗುಂಡಿ ವಿಭಾಗದಲ್ಲಿ ಕಾಳ್ಗಿಚ್ಚಿಗೆ ಅಪಾರ ಪ್ರಮಾಣದ ಹುಲ್ಲುಗಾವಲು ಆಹುತಿ.</p>.<p><strong>* ಫೆ 28: </strong>ಮೂಗತಿಹಳ್ಳಿ–ಶಿರಗುಂದ ಬಳಿ ಕಡೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಪಘಾತ; ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಜಟಾಪಟಿ, ಯುವಕರ ಗುಂಪಿನಿಂದ ಪಿಎಸ್ಐಗೆ ಥಳಿತ.</p>.<p><strong>* ಮಾ.13: </strong>ತಾಲ್ಲೂಕಿನ ಇನಾಂ ದತ್ತಾತ್ರೇಯ ಸ್ವಾಮಿ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಸಂದಲ್ ಉರೂಸ್ ಆಚರಣೆ.</p>.<p><strong>* ಮಾ.27: </strong> ಕನ್ನಡ ಮತ್ತು ಉರ್ದು ಸಾಹಿತ್ಯದ ಕೊಂಡಿಯಾಗಿದ್ದ ಉರ್ದು ಕವಿ, ರಾಜಕಾರಣಿ ಎಂ.ಬಿ.ಘನಿ ನಿಧನ.</p>.<p><strong>* ಮೇ 4: </strong>ಕಾಫಿ ಮಂಡಳಿಯ ಅಧ್ಯಕ್ಷರಾಗಿ ಕಾಫಿ ಬೆಳೆಗಾರ ಎಂ.ಎಸ್. ಭೋಜೇಗೌಡ ನೇಮಕ.</p>.<p><strong>* ಜೂನ್ 5: </strong>ನಕ್ಸಲ್ ಸಂಘಟನೆ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ಮೂಡಿಗೆರೆ ತಾಲ್ಲೂಕಿನ ಹಳುವಳ್ಳಿಯ ಕನ್ಯಾಕುಮಾರಿ ಅಲಿಯಾಸ್ ಸುವರ್ಣಾ, ಗದಗ ಜಿಲ್ಲೆಯ ಚೆನ್ನಮ್ಮ ಅಲಿಯಾಸ್ ಸುಮಾ, ಬೆಂಗಳೂರಿನ ಶಿವು ಅಲಿಯಾಸ್ ಜ್ಞಾನದೇವ್ ಜಿಲ್ಲಾಡಳಿತದ ಮುಂದೆ ಶರಣಾಗತಿ.</p>.<p><strong>* ಜುಲೈ 4: </strong>ಜಿಲ್ಲಾ ಉಸ್ತುವಾರಿ ಸಚಿವರಾಗಿ ಆರ್.ರೋಷನ್ ಬೇಗ ನೇಮಕ.</p>.<p><strong>* ಆ.16: </strong>ನಗರದ ರಾಮನಹಳ್ಳಿಯ ಡಯಟ್ ಕಟ್ಟಡದಲ್ಲಿ ಕೇಂದ್ರೀಯ ವಿದ್ಯಾಲಯ ಉದ್ಘಾಟನೆ.</p>.<p><strong>* ಆ.28: </strong>ಘನತ್ಯಾಜ್ಯ ವಿಲೇವಾರಿ ನಿರ್ವಹಣೆಗೆ ಸಂಬಂಧಿಸಿದಂತೆ ಐಟಿಸಿ ಸಂಸ್ಥೆಯೊಂದಿಗೆ ನಗರಸಭೆ ಒಪ್ಪಂದ.</p>.<p><strong>* ಸೆ.17: </strong>ನಗರಸಭೆ ಕಚೇರಿ ಸಭಾಂಗಣದಲ್ಲಿ ವಾಸ್ತು, ಸುದರ್ಶನ ಹೋಮ, ಹವನ ಪೂಜಾ ಕೈಂಕರ್ಯ.</p>.<p><strong>* ಸೆ.21: </strong>ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಒಡೆತನದ ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ಕಚೇರಿಗೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ, ಲೆಕ್ಕಪತ್ರ ಪರಿಶೀಲನೆ.</p>.<p><strong>* ಅ.7: </strong>ನರಸಿಂಹರಾಜಪುರ ತಾಲ್ಲೂಕಿನ ಲಾಲ್ಬಾಗ್ ಎಸ್ಟೇಟ್ನಲ್ಲಿ ಕಾಫಿ ಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್ ಓಟ ಸ್ಪರ್ಧೆ ಆರಂಭ.</p>.<p><strong>* ಅ.7:</strong> ನಗರಸಭೆ ಅಧ್ಯಕ್ಷರಾಗಿ ಶಿಲ್ಪಾರಾಜಶೇಖರ್ ಅವಿರೋಧವಾಗಿ ಆಯ್ಕೆ.</p>.<p><strong>* ಅ.7:</strong> ಜಿಲ್ಲಾಧಿಕಾರಿ ಜಿ.ಸತ್ಯವತಿ ಅವರು ಕೋಲಾರ ಜಿಲ್ಲೆಗೆ ವರ್ಗಾವಣೆ.</p>.<p><strong>* ಅ.8: </strong>ಕಾಫಿ ಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್ ಓಟ ಸ್ಪರ್ಧೆಯ 110 ಕಿ.ಮೀ ವಿಭಾಗದಲ್ಲಿ ದಾಖಲೆ ಸೃಷ್ಟಿಸಿದ ಪೌಲ್ ಗಿಬ್ಲಿನ್.</p>.<p><strong>* ಅ.9:</strong> ಜಿಲ್ಲಾಧಿಕಾರಿಯಾಗಿ ಎಂ.ಕೆ.ಶ್ರೀರಂಗಯ್ಯ ಅಧಿಕಾರ ಸ್ವೀಕಾರ.</p>.<p><strong>* ಅ.15: </strong>ಕರಗಡ ನೀರಾವರಿ ಯೋಜನೆ– ವ್ಯಾಪ್ತಿಯ ದೇವಿಕೆರೆ ಗೇಟ್ ವಾಲ್ವ್ ಎತ್ತಿ ನಾಲೆಗೆ ಪ್ರಾಯೋಗಿಕವಾಗಿ ನೀರು ಹರಿಸಲಾಯಿತು.</p>.<p><strong>* ಅ.18: </strong>ತಾಲ್ಲೂಕಿನ ಮಲ್ಲೇನಹಳ್ಳಿಯ ಬಿಂಡಿಗ ಆದಿಶಕ್ತಿ ದೇವೀರಮ್ಮನವರ ದೀಪೋತ್ಸವ ಸಂಭ್ರಮ.</p>.<p><strong>* ನ.4: </strong>ನಗರಸಭೆ ಉಪಾಧ್ಯಕ್ಷರಾಗಿ ಎಂ.ಶ್ರೀನಿವಾಸರಾವ್ ಅವಿರೋಧವಾಗಿ ಆಯ್ಕೆ.</p>.<p><strong>* ನ.7: </strong>ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕಲಾಮಂದಿರದಲ್ಲಿ ಜಿಲ್ಲಾ ಮತಗಟ್ಟೆ ಸಮಿತಿ ಅಧ್ಯಕ್ಷರ ಸಮಾವೇಶ.</p>.<p><strong>* ನ.7: </strong>ತಾಲ್ಲೂಕಿನ ಮುಗುಳುವಳ್ಳಿಯ ದಲಿತರ ಮನೆಯಲ್ಲಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಾಸ್ತವ್ಯ.</p>.<p><strong>* ನ.19:</strong> ಶ್ರೀರಾಮಸೇನೆಯ ದತ್ತಮಾಲಾ ಅಭಿಯಾನದ ಅಂಗವಾಗಿ ಶೋಭಾಯಾತ್ರೆ, ಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾದಲ್ಲಿ ದತ್ತಪಾದುಕೆ ದರ್ಶನ.</p>.<p><strong>* ನ.24: </strong>ಏಷ್ಯಾ ಫೆಸಿಫಿಕ್ ಕಾರ್ ರ್್ಯಾಲಿಯ ಐದನೇ ಮತ್ತು ಅಂತಿಮ ಸುತ್ತಿನ ಸ್ಪರ್ಧೆ ಆರಂಭ.</p>.<p><strong>* ನ.26:</strong> ಏಷ್ಯಾ ಪೆಸಿಫಿಕ್ ಕಾರ್ ರ್್ಯಾಲಿಯಲ್ಲಿ ಎಂಆರ್ಎಫ್ ತಂಡದ ಅಗ್ರ ಶ್ರೇಯಾಂಕದ ಚಾಲಕ ದೆಹಲಿಯ ಗೌರವ್ಗಿಲ್ಗೆ ಚಾಂಪಿಯನ್ಶಿಪ್.</p>.<p><strong>* ಡಿ.1:</strong> ಅನಸೂಯ ದೇವಿ ಜಯಂತಿ ಆಚರಣೆ, ಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾದಲ್ಲಿ ದತ್ತಪಾದುಕೆ ದರ್ಶನ.</p>.<p><strong>* ಡಿ.2: </strong>ದತ್ತ ಜಯಂತಿ ಉತ್ಸವ ಅಂಗವಾಗಿ ಶೋಭಾಯಾತ್ರೆ.</p>.<p><strong>* ಡಿ.3: </strong>ದತ್ತ ಜಯಂತಿ ಉತ್ಸವ ಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ ಆವರಣದ ನಿಷೇಧಿತ ಪ್ರದೇಶಕ್ಕೆ ದತ್ತಭಕ್ತರೊಬ್ಬರು ನುಗ್ಗಿ ಭಗವಧ್ಜಜ ನೆಟ್ಟರು. ಗೋರಿಗೆ ನೆಟ್ಟಿದ್ದ ನಾಮಫಲಕಕ್ಕೆ ಹಾನಿ. ಉದ್ರಿಕ್ತ ವಾತಾವರಣ. ನಗರದ ತಮಿಳು ಕಾಲೋನಿಯಲ್ಲಿ ಪೆಟ್ರೋಲ್ ಬಾಂಬ್ ವಶ.</p>.<p><strong>* ಡಿ.28,29:</strong> ಕರ್ನಾಟಕ ಕೋಮುಸೌಹಾರ್ದ ವೇದಿಕೆಗೆ 15 ವರ್ಷ ಸಂದ ಅಂಗವಾಗಿ ‘ಸೌಹಾರ್ದ ಮಂಟಪ: ಹಿಂದಣ ನೋಟ– ಮುಂದಣ ಹೆಜ್ಜೆ’ ರಾಷ್ಟ್ರೀಯ ಸಮಾವೇಶ.</p>.<p><strong>* ಡಿ.30:</strong> ಬಿಜೆಪಿ ನವಕರ್ನಾಟಕ ಪರಿವರ್ತನಾ ಯಾತ್ರೆ ಸಮಾರಂಭ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು: </strong>ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಕಳೆದ ವರ್ಷ ಹಲವಾರು ಸಿಹಿಕಹಿ ಸಂಗತಿಗಳು ನಡೆದಿವೆ. 2017ನೇ ವರ್ಷದ ಪ್ರಮುಖ ಸಂಗತಿಗಳ ಹಿನ್ನೋಟ...</p>.<p><strong>* ಜ.3: </strong>ನಗರದ ಹೊರವಲಯದ ಸೆರಾಯ್ ರೆಸಾರ್ಟ್ನಲ್ಲಿ ಸಹಕಾರ ಮತ್ತು ಸಕ್ಕರೆ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ತೀವ್ರ ಹೃದಯಾಘಾತದಿಂದ ಸಾವು.</p>.<p><strong>* ಜ.9:</strong> ಜಿಲ್ಲೆಯ ಗಾಲ್ಫ್ ಕ್ಲಬ್ನಲ್ಲಿ ನಡೆದ ಗಾಲ್ಫ್ ಟೂರ್ನಿಯ ದಿ ಬ್ರಿಗೇಡ್ ಕಪ್ ಓಪನ್ ವಿಭಾಗದಲ್ಲಿ ಆರ್.ಬಿ.ಸಿ.ನಾಯರ್ ಪ್ರಥಮ ಸ್ಥಾನ ಗಳಿಸಿದರು.</p>.<p><strong>* ಜ.29: </strong>ಜಿಲ್ಲೆಯಲ್ಲಿ ಸುಮಾರು 33 ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಡಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಮಾಜಿ ಮುಖಂಡ ಪ್ರವೀಣ್ ಖಾಂಡ್ಯ ಬಂಧನ.</p>.<p><strong>* ಫೆ.5: </strong>ಕ್ರಿಕೆಟ್ ಬೆಟ್ಟಿಂಗ್ ದಂದೆ ನಡೆಸುತ್ತಿದ್ದ ಆರೋಪದಡಿ 6 ಆರೋಪಿಗಳ ಬಂಧನ.</p>.<p><strong>* ಫೆ.21: </strong>ಭದ್ರಾ ಅಭಯಾರಣ್ಯ ಮುತ್ತೋಡಿ ವನ್ಯಜೀವಿ ವಲಯಕ್ಕೆ ಹೊಂದಿಕೊಂಡಂತಿರುವ ಮುತ್ತೋಡಿ ಪ್ರಾದೇಶಿಕ ವಲಯದ ಅತ್ತಿಗುಂಡಿ ವಿಭಾಗದಲ್ಲಿ ಕಾಳ್ಗಿಚ್ಚಿಗೆ ಅಪಾರ ಪ್ರಮಾಣದ ಹುಲ್ಲುಗಾವಲು ಆಹುತಿ.</p>.<p><strong>* ಫೆ 28: </strong>ಮೂಗತಿಹಳ್ಳಿ–ಶಿರಗುಂದ ಬಳಿ ಕಡೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಪಘಾತ; ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಜಟಾಪಟಿ, ಯುವಕರ ಗುಂಪಿನಿಂದ ಪಿಎಸ್ಐಗೆ ಥಳಿತ.</p>.<p><strong>* ಮಾ.13: </strong>ತಾಲ್ಲೂಕಿನ ಇನಾಂ ದತ್ತಾತ್ರೇಯ ಸ್ವಾಮಿ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಸಂದಲ್ ಉರೂಸ್ ಆಚರಣೆ.</p>.<p><strong>* ಮಾ.27: </strong> ಕನ್ನಡ ಮತ್ತು ಉರ್ದು ಸಾಹಿತ್ಯದ ಕೊಂಡಿಯಾಗಿದ್ದ ಉರ್ದು ಕವಿ, ರಾಜಕಾರಣಿ ಎಂ.ಬಿ.ಘನಿ ನಿಧನ.</p>.<p><strong>* ಮೇ 4: </strong>ಕಾಫಿ ಮಂಡಳಿಯ ಅಧ್ಯಕ್ಷರಾಗಿ ಕಾಫಿ ಬೆಳೆಗಾರ ಎಂ.ಎಸ್. ಭೋಜೇಗೌಡ ನೇಮಕ.</p>.<p><strong>* ಜೂನ್ 5: </strong>ನಕ್ಸಲ್ ಸಂಘಟನೆ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ಮೂಡಿಗೆರೆ ತಾಲ್ಲೂಕಿನ ಹಳುವಳ್ಳಿಯ ಕನ್ಯಾಕುಮಾರಿ ಅಲಿಯಾಸ್ ಸುವರ್ಣಾ, ಗದಗ ಜಿಲ್ಲೆಯ ಚೆನ್ನಮ್ಮ ಅಲಿಯಾಸ್ ಸುಮಾ, ಬೆಂಗಳೂರಿನ ಶಿವು ಅಲಿಯಾಸ್ ಜ್ಞಾನದೇವ್ ಜಿಲ್ಲಾಡಳಿತದ ಮುಂದೆ ಶರಣಾಗತಿ.</p>.<p><strong>* ಜುಲೈ 4: </strong>ಜಿಲ್ಲಾ ಉಸ್ತುವಾರಿ ಸಚಿವರಾಗಿ ಆರ್.ರೋಷನ್ ಬೇಗ ನೇಮಕ.</p>.<p><strong>* ಆ.16: </strong>ನಗರದ ರಾಮನಹಳ್ಳಿಯ ಡಯಟ್ ಕಟ್ಟಡದಲ್ಲಿ ಕೇಂದ್ರೀಯ ವಿದ್ಯಾಲಯ ಉದ್ಘಾಟನೆ.</p>.<p><strong>* ಆ.28: </strong>ಘನತ್ಯಾಜ್ಯ ವಿಲೇವಾರಿ ನಿರ್ವಹಣೆಗೆ ಸಂಬಂಧಿಸಿದಂತೆ ಐಟಿಸಿ ಸಂಸ್ಥೆಯೊಂದಿಗೆ ನಗರಸಭೆ ಒಪ್ಪಂದ.</p>.<p><strong>* ಸೆ.17: </strong>ನಗರಸಭೆ ಕಚೇರಿ ಸಭಾಂಗಣದಲ್ಲಿ ವಾಸ್ತು, ಸುದರ್ಶನ ಹೋಮ, ಹವನ ಪೂಜಾ ಕೈಂಕರ್ಯ.</p>.<p><strong>* ಸೆ.21: </strong>ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಒಡೆತನದ ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ಕಚೇರಿಗೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ, ಲೆಕ್ಕಪತ್ರ ಪರಿಶೀಲನೆ.</p>.<p><strong>* ಅ.7: </strong>ನರಸಿಂಹರಾಜಪುರ ತಾಲ್ಲೂಕಿನ ಲಾಲ್ಬಾಗ್ ಎಸ್ಟೇಟ್ನಲ್ಲಿ ಕಾಫಿ ಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್ ಓಟ ಸ್ಪರ್ಧೆ ಆರಂಭ.</p>.<p><strong>* ಅ.7:</strong> ನಗರಸಭೆ ಅಧ್ಯಕ್ಷರಾಗಿ ಶಿಲ್ಪಾರಾಜಶೇಖರ್ ಅವಿರೋಧವಾಗಿ ಆಯ್ಕೆ.</p>.<p><strong>* ಅ.7:</strong> ಜಿಲ್ಲಾಧಿಕಾರಿ ಜಿ.ಸತ್ಯವತಿ ಅವರು ಕೋಲಾರ ಜಿಲ್ಲೆಗೆ ವರ್ಗಾವಣೆ.</p>.<p><strong>* ಅ.8: </strong>ಕಾಫಿ ಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್ ಓಟ ಸ್ಪರ್ಧೆಯ 110 ಕಿ.ಮೀ ವಿಭಾಗದಲ್ಲಿ ದಾಖಲೆ ಸೃಷ್ಟಿಸಿದ ಪೌಲ್ ಗಿಬ್ಲಿನ್.</p>.<p><strong>* ಅ.9:</strong> ಜಿಲ್ಲಾಧಿಕಾರಿಯಾಗಿ ಎಂ.ಕೆ.ಶ್ರೀರಂಗಯ್ಯ ಅಧಿಕಾರ ಸ್ವೀಕಾರ.</p>.<p><strong>* ಅ.15: </strong>ಕರಗಡ ನೀರಾವರಿ ಯೋಜನೆ– ವ್ಯಾಪ್ತಿಯ ದೇವಿಕೆರೆ ಗೇಟ್ ವಾಲ್ವ್ ಎತ್ತಿ ನಾಲೆಗೆ ಪ್ರಾಯೋಗಿಕವಾಗಿ ನೀರು ಹರಿಸಲಾಯಿತು.</p>.<p><strong>* ಅ.18: </strong>ತಾಲ್ಲೂಕಿನ ಮಲ್ಲೇನಹಳ್ಳಿಯ ಬಿಂಡಿಗ ಆದಿಶಕ್ತಿ ದೇವೀರಮ್ಮನವರ ದೀಪೋತ್ಸವ ಸಂಭ್ರಮ.</p>.<p><strong>* ನ.4: </strong>ನಗರಸಭೆ ಉಪಾಧ್ಯಕ್ಷರಾಗಿ ಎಂ.ಶ್ರೀನಿವಾಸರಾವ್ ಅವಿರೋಧವಾಗಿ ಆಯ್ಕೆ.</p>.<p><strong>* ನ.7: </strong>ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕಲಾಮಂದಿರದಲ್ಲಿ ಜಿಲ್ಲಾ ಮತಗಟ್ಟೆ ಸಮಿತಿ ಅಧ್ಯಕ್ಷರ ಸಮಾವೇಶ.</p>.<p><strong>* ನ.7: </strong>ತಾಲ್ಲೂಕಿನ ಮುಗುಳುವಳ್ಳಿಯ ದಲಿತರ ಮನೆಯಲ್ಲಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಾಸ್ತವ್ಯ.</p>.<p><strong>* ನ.19:</strong> ಶ್ರೀರಾಮಸೇನೆಯ ದತ್ತಮಾಲಾ ಅಭಿಯಾನದ ಅಂಗವಾಗಿ ಶೋಭಾಯಾತ್ರೆ, ಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾದಲ್ಲಿ ದತ್ತಪಾದುಕೆ ದರ್ಶನ.</p>.<p><strong>* ನ.24: </strong>ಏಷ್ಯಾ ಫೆಸಿಫಿಕ್ ಕಾರ್ ರ್್ಯಾಲಿಯ ಐದನೇ ಮತ್ತು ಅಂತಿಮ ಸುತ್ತಿನ ಸ್ಪರ್ಧೆ ಆರಂಭ.</p>.<p><strong>* ನ.26:</strong> ಏಷ್ಯಾ ಪೆಸಿಫಿಕ್ ಕಾರ್ ರ್್ಯಾಲಿಯಲ್ಲಿ ಎಂಆರ್ಎಫ್ ತಂಡದ ಅಗ್ರ ಶ್ರೇಯಾಂಕದ ಚಾಲಕ ದೆಹಲಿಯ ಗೌರವ್ಗಿಲ್ಗೆ ಚಾಂಪಿಯನ್ಶಿಪ್.</p>.<p><strong>* ಡಿ.1:</strong> ಅನಸೂಯ ದೇವಿ ಜಯಂತಿ ಆಚರಣೆ, ಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾದಲ್ಲಿ ದತ್ತಪಾದುಕೆ ದರ್ಶನ.</p>.<p><strong>* ಡಿ.2: </strong>ದತ್ತ ಜಯಂತಿ ಉತ್ಸವ ಅಂಗವಾಗಿ ಶೋಭಾಯಾತ್ರೆ.</p>.<p><strong>* ಡಿ.3: </strong>ದತ್ತ ಜಯಂತಿ ಉತ್ಸವ ಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ ಆವರಣದ ನಿಷೇಧಿತ ಪ್ರದೇಶಕ್ಕೆ ದತ್ತಭಕ್ತರೊಬ್ಬರು ನುಗ್ಗಿ ಭಗವಧ್ಜಜ ನೆಟ್ಟರು. ಗೋರಿಗೆ ನೆಟ್ಟಿದ್ದ ನಾಮಫಲಕಕ್ಕೆ ಹಾನಿ. ಉದ್ರಿಕ್ತ ವಾತಾವರಣ. ನಗರದ ತಮಿಳು ಕಾಲೋನಿಯಲ್ಲಿ ಪೆಟ್ರೋಲ್ ಬಾಂಬ್ ವಶ.</p>.<p><strong>* ಡಿ.28,29:</strong> ಕರ್ನಾಟಕ ಕೋಮುಸೌಹಾರ್ದ ವೇದಿಕೆಗೆ 15 ವರ್ಷ ಸಂದ ಅಂಗವಾಗಿ ‘ಸೌಹಾರ್ದ ಮಂಟಪ: ಹಿಂದಣ ನೋಟ– ಮುಂದಣ ಹೆಜ್ಜೆ’ ರಾಷ್ಟ್ರೀಯ ಸಮಾವೇಶ.</p>.<p><strong>* ಡಿ.30:</strong> ಬಿಜೆಪಿ ನವಕರ್ನಾಟಕ ಪರಿವರ್ತನಾ ಯಾತ್ರೆ ಸಮಾರಂಭ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>