<p><strong>ಬೆಂಗಳೂರು: </strong>‘ನಮ್ಮ ಮೆಟ್ರೊ’ ರೈಲುಗಳಲ್ಲಿ ಜನದಟ್ಟಯಿಂದ ಹೈರಾಣಾಗಿರುವ ಪ್ರಯಾಣಿಕರಿಗೆ ಹೊಸ ವರ್ಷದ ಆರಂಭದಲ್ಲೇ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್ಸಿಎಲ್) ಶುಭಸುದ್ದಿಯೊಂದನ್ನು ನೀಡಿದೆ.</p>.<p>ಪ್ರಯಾಣಿಕರ ದಟ್ಟಣೆ ಹೆಚ್ಚು ಇರುವ ಅವಧಿಯಲ್ಲಿ ನೇರಳೆ ಮಾರ್ಗದಲ್ಲಿ ಪ್ರತಿ ಎರಡು ರೈಲುಗಳ ಸಂಚಾರದ ನಡುವಿನ ಅಂತರವನ್ನು 4 ನಿಮಿಷದ ಬದಲು 3.5 ನಿಮಿಷಕ್ಕೆ ಇಳಿಸಲಾಗಿದೆ. ಹಸಿರು ಮಾರ್ಗದಲ್ಲಿ ಪ್ರತಿ 6 ನಿಮಿಷಕ್ಕೊಂದು ರೈಲು ಸಂಚರಿಸುವ ಅವಧಿಯನ್ನು ವಿಸ್ತರಿಸಲಾಗಿದೆ.</p>.<p>‘ಮಂಗಳವಾರದಿಂದಲೇ ಹೊಸ ವೇಳಾಪಟ್ಟಿ ಜಾರಿಗೆ ಬರಲಿದೆ. ಇದರಿಂದಾಗಿ ನೇರಳೆ ಮಾರ್ಗದಲ್ಲಿ ದಿನದಲ್ಲಿ 10 ರೈಲುಗಳು ಹಾಗೂ ಹಸಿರು ಮಾರ್ಗ<br /> ದಲ್ಲಿ ಮೂರು ರೈಲುಗಳು ಹೆಚ್ಚುವರಿಯಾಗಿ ಸಂಚರಿಸಲಿವೆ’ ಎಂದು ನಿಗಮದ ಕಾರ್ಯಾಚರಣೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಮೊದಲ ಹಂತ ಪೂರ್ಣಗೊಂಡ ಬಳಿಕ ನೇರಳೆ ಹಾಗೂ ಹಸಿರು ಮಾರ್ಗಗಳೆರಡರಲ್ಲೂ ಪ್ರಯಾಣಿಕರ ಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಇದೆ. ಬೆಳಿಗ್ಗೆ 8.30ರಿಂದ 10.30ರ ನಡುವೆ ಹಾಗೂ ಸಂಜೆ 5.30ರಿಂದ 8 ಗಂಟೆ ನಡುವೆ ರೈಲುಗಳಲ್ಲಿ ಕಾಲಿಡಲೂ ಕಷ್ಟಪಡುವಷ್ಟು ಪ್ರಯಾಣಿಕರ ದಟ್ಟಣೆ ಇರುತ್ತದೆ.</p>.<p>ದಟ್ಟಣೆ ಹೆಚ್ಚು ಇರುವ ಅವಧಿಯಲ್ಲಿ ನೇರಳೆ ಮಾರ್ಗದಲ್ಲಿ ಬೆಳಿಗ್ಗೆ 8.50ರಿಂದ 10.10ರ ನಡುವೆ ಹಾಗೂ ಸಂಜೆ 5.58ರಿಂದ 7.42ರ ನಡುವೆ ಪ್ರತಿ 4 ನಿಮಿಷಕ್ಕೊಂದು ರೈಲು ಸಂಚರಿಸುತ್ತಿವೆ. ಆದರೂ ಪರಿಸ್ಥಿತಿ ಸುಧಾರಿಸಿರಲಿಲ್ಲ. ಹಸಿರು ಮಾರ್ಗದಲ್ಲಿ ಬೆಳಿಗ್ಗೆ 8.53ರಿಂದ 10.17ರ ನಡುವೆ ಹಾಗೂ ಸಂಜೆ ಪ್ರತಿ 6 ನಿಮಿಷಕ್ಕೊಂದು ರೈಲು ಸಂಚರಿಸುತ್ತಿದೆ. ಆದರೂ, ನಿಲ್ದಾಣಗಳಲ್ಲಿ ರೈಲಿನಿಂದ ಇಳಿಯಲು ಹಾಗೂ ಹತ್ತಲು ತ್ರಾಸಪಡಬೇಕಾದ ಸ್ಥಿತಿ ಇದೆ. ದಟ್ಟಣೆ ಅವಧಿಯಲ್ಲಿ ರೈಲುಗಳ ಟ್ರಿಪ್ ಸಂಖ್ಯೆ ಹೆಚ್ಚಿಸಿದರೆ ಪರಿಸ್ಥಿತಿ ತಕ್ಕಮಟ್ಟಿಗೆ ಸುಧಾರಣೆ ಆಗಲಿದೆ ಎಂದು ಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.</p>.<p>ಇನ್ನೊಂದೆಡೆ, ದಟ್ಟಣೆ ಸಮಸ್ಯೆ ನಿವಾರಿಸಲು ಡಿ.ತಿಂಗಳಿಂದ ಬೋಗಿಗಳ ಸಂಖ್ಯೆಯನ್ನು 3ರಿಂದ 6ಕ್ಕೆ ಹೆಚ್ಚಿಸಲು ಬಿಎಂಆರ್ಸಿಎಲ್ ನಿರ್ಧರಿಸಿತ್ತು. ಬಿಎಂಇಎಲ್ ಸಂಸ್ಥೆ ಜೊತೆ 150 ಬೋಗಿಗಳನ್ನು ಖರೀದಿಸಲು ನಿಗಮವು ಒಪ್ಪಂದ ಮಾಡಿಕೊಂಡಿದೆ. ಬಿಎಂಇಎಲ್ ಇನ್ನೂ ಬೋಗಿಗಳನ್ನು ಹಸ್ತಾಂತ<br /> ರಿಸಿಲ್ಲ. ‘ಬೋಗಿಗಳು ಸಿದ್ಧಗೊಳ್ಳುತ್ತಿವೆ. ಅವುಗಳನ್ನು ಪ್ರಯಾಣಿಕರ ಸಂಚಾರಕ್ಕೆ ಬಳಸಲು ಫೆಬ್ರುವರಿವರೆಗೆ ಕಾಯಬೇಕಾಗುತ್ತದೆ’ ಎಂದು ಶಂಕರ್ ತಿಳಿಸಿದರು.</p>.<p><strong>ವಿಸ್ತರಿತ ಅವಧಿಯಲ್ಲಿ 24 ಸಾವಿರ ಮಂದಿ ಪ್ರಯಾಣ</strong></p>.<p>ಹೊಸ ವರ್ಷಾಚರಣೆ ಪ್ರಯುಕ್ತ ಸೇವೆ ವಿಸ್ತರಿಸಿದ ಅವಧಿಯಲ್ಲಿ ಒಟ್ಟು 24,318 ಮಂದಿ ಮೆಟ್ರೊ ರೈಲುಗಳಲ್ಲಿ ಪ್ರಯಾಣಿಸಿದ್ದಾರೆ. ಈ ಅವಧಿಯಲ್ಲಿ ಎಂ.ಜಿ. ರಸ್ತೆ ನಿಲ್ದಾಣವನ್ನು ಅತಿ ಹೆಚ್ಚು ಮಂದಿ ಬಳಸಿದ್ದಾರೆ. ಒಟ್ಟು 13,574 ಮಂದಿ ಇಲ್ಲಿಂದ ಸಂಚರಿಸಿದ್ದಾರೆ.</p>.<p>ಟರ್ಮಿನಲ್ ನಿಲ್ದಾಣಗಳಿಂದ ರಾತ್ರಿ 11 ಗಂಟೆಗೆ ದಿನದ ಕೊನೆಯ ರೈಲು ಹೊರಡುತ್ತದೆ. ಹೊಸ ವರ್ಷಾಚರಣೆ ಆಚರಿಸುವವರ ಅನುಕೂಲಕ್ಕಾಗಿ ಭಾನುವಾರ ಮಧ್ಯರಾತ್ರಿ 2 ಗಂಟೆಯವರೆಗೂ ಮೆಟ್ರೊ ಸೇವೆ ವಿಸ್ತರಿಸಲಾಗಿತ್ತು.</p>.<p>‘ಭಾನುವಾರ ಇಡೀ ದಿನ ಒಟ್ಟು 3.26 ಲಕ್ಷ ಮಂದಿ ಮೆಟ್ರೊದಲ್ಲಿ ಪ್ರಯಾಣ ಮಾಡಿದ್ದಾರೆ’ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ.ವಸಂತ ರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಮುರಿದಿಲ್ಲ ದಾಖಲೆ: ‘ಒಂದೇ ದಿನ 4.03 ಲಕ್ಷ ಮಂದಿ ಮೆಟ್ರೊ ಬಳಸಿದ ದಾಖಲೆ ಇದೆ. ಸೇವಾ ಅವಧಿ ವಿಸ್ತರಣೆಯ ಹೊರತಾಗಿಯೂ ಭಾನುವಾರ ಈ ದಾಖಲೆ ಮುರಿದಿಲ್ಲ. ಬೆಳಿಗ್ಗೆಯಿಂದ ಸಂಜೆವರೆಗೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದುದು ಇದಕ್ಕೆ ಕಾರಣ’ ಎಂದು ಶಂಕರ್ ತಿಳಿಸಿದರು.</p>.<p>‘ಮೆಟ್ರೊ ಕಾರ್ಯಾಚರಣೆಯಿಂದ ನಿಗಮವು ಭಾನುವಾರ ₹ 98 ಲಕ್ಷ ವರಮಾನ ಗಳಿಸಿದೆ. ನೇರಳೆ ಮಾರ್ಗದಿಂದ ₹ 50.33 ಲಕ್ಷ ಹಾಗೂ ಹಸಿರು ಮಾರ್ಗದಿಂದ ₹ 48 ಲಕ್ಷ ವರಮಾನ ಬಂದಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ನಮ್ಮ ಮೆಟ್ರೊ’ ರೈಲುಗಳಲ್ಲಿ ಜನದಟ್ಟಯಿಂದ ಹೈರಾಣಾಗಿರುವ ಪ್ರಯಾಣಿಕರಿಗೆ ಹೊಸ ವರ್ಷದ ಆರಂಭದಲ್ಲೇ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್ಸಿಎಲ್) ಶುಭಸುದ್ದಿಯೊಂದನ್ನು ನೀಡಿದೆ.</p>.<p>ಪ್ರಯಾಣಿಕರ ದಟ್ಟಣೆ ಹೆಚ್ಚು ಇರುವ ಅವಧಿಯಲ್ಲಿ ನೇರಳೆ ಮಾರ್ಗದಲ್ಲಿ ಪ್ರತಿ ಎರಡು ರೈಲುಗಳ ಸಂಚಾರದ ನಡುವಿನ ಅಂತರವನ್ನು 4 ನಿಮಿಷದ ಬದಲು 3.5 ನಿಮಿಷಕ್ಕೆ ಇಳಿಸಲಾಗಿದೆ. ಹಸಿರು ಮಾರ್ಗದಲ್ಲಿ ಪ್ರತಿ 6 ನಿಮಿಷಕ್ಕೊಂದು ರೈಲು ಸಂಚರಿಸುವ ಅವಧಿಯನ್ನು ವಿಸ್ತರಿಸಲಾಗಿದೆ.</p>.<p>‘ಮಂಗಳವಾರದಿಂದಲೇ ಹೊಸ ವೇಳಾಪಟ್ಟಿ ಜಾರಿಗೆ ಬರಲಿದೆ. ಇದರಿಂದಾಗಿ ನೇರಳೆ ಮಾರ್ಗದಲ್ಲಿ ದಿನದಲ್ಲಿ 10 ರೈಲುಗಳು ಹಾಗೂ ಹಸಿರು ಮಾರ್ಗ<br /> ದಲ್ಲಿ ಮೂರು ರೈಲುಗಳು ಹೆಚ್ಚುವರಿಯಾಗಿ ಸಂಚರಿಸಲಿವೆ’ ಎಂದು ನಿಗಮದ ಕಾರ್ಯಾಚರಣೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಮೊದಲ ಹಂತ ಪೂರ್ಣಗೊಂಡ ಬಳಿಕ ನೇರಳೆ ಹಾಗೂ ಹಸಿರು ಮಾರ್ಗಗಳೆರಡರಲ್ಲೂ ಪ್ರಯಾಣಿಕರ ಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಇದೆ. ಬೆಳಿಗ್ಗೆ 8.30ರಿಂದ 10.30ರ ನಡುವೆ ಹಾಗೂ ಸಂಜೆ 5.30ರಿಂದ 8 ಗಂಟೆ ನಡುವೆ ರೈಲುಗಳಲ್ಲಿ ಕಾಲಿಡಲೂ ಕಷ್ಟಪಡುವಷ್ಟು ಪ್ರಯಾಣಿಕರ ದಟ್ಟಣೆ ಇರುತ್ತದೆ.</p>.<p>ದಟ್ಟಣೆ ಹೆಚ್ಚು ಇರುವ ಅವಧಿಯಲ್ಲಿ ನೇರಳೆ ಮಾರ್ಗದಲ್ಲಿ ಬೆಳಿಗ್ಗೆ 8.50ರಿಂದ 10.10ರ ನಡುವೆ ಹಾಗೂ ಸಂಜೆ 5.58ರಿಂದ 7.42ರ ನಡುವೆ ಪ್ರತಿ 4 ನಿಮಿಷಕ್ಕೊಂದು ರೈಲು ಸಂಚರಿಸುತ್ತಿವೆ. ಆದರೂ ಪರಿಸ್ಥಿತಿ ಸುಧಾರಿಸಿರಲಿಲ್ಲ. ಹಸಿರು ಮಾರ್ಗದಲ್ಲಿ ಬೆಳಿಗ್ಗೆ 8.53ರಿಂದ 10.17ರ ನಡುವೆ ಹಾಗೂ ಸಂಜೆ ಪ್ರತಿ 6 ನಿಮಿಷಕ್ಕೊಂದು ರೈಲು ಸಂಚರಿಸುತ್ತಿದೆ. ಆದರೂ, ನಿಲ್ದಾಣಗಳಲ್ಲಿ ರೈಲಿನಿಂದ ಇಳಿಯಲು ಹಾಗೂ ಹತ್ತಲು ತ್ರಾಸಪಡಬೇಕಾದ ಸ್ಥಿತಿ ಇದೆ. ದಟ್ಟಣೆ ಅವಧಿಯಲ್ಲಿ ರೈಲುಗಳ ಟ್ರಿಪ್ ಸಂಖ್ಯೆ ಹೆಚ್ಚಿಸಿದರೆ ಪರಿಸ್ಥಿತಿ ತಕ್ಕಮಟ್ಟಿಗೆ ಸುಧಾರಣೆ ಆಗಲಿದೆ ಎಂದು ಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.</p>.<p>ಇನ್ನೊಂದೆಡೆ, ದಟ್ಟಣೆ ಸಮಸ್ಯೆ ನಿವಾರಿಸಲು ಡಿ.ತಿಂಗಳಿಂದ ಬೋಗಿಗಳ ಸಂಖ್ಯೆಯನ್ನು 3ರಿಂದ 6ಕ್ಕೆ ಹೆಚ್ಚಿಸಲು ಬಿಎಂಆರ್ಸಿಎಲ್ ನಿರ್ಧರಿಸಿತ್ತು. ಬಿಎಂಇಎಲ್ ಸಂಸ್ಥೆ ಜೊತೆ 150 ಬೋಗಿಗಳನ್ನು ಖರೀದಿಸಲು ನಿಗಮವು ಒಪ್ಪಂದ ಮಾಡಿಕೊಂಡಿದೆ. ಬಿಎಂಇಎಲ್ ಇನ್ನೂ ಬೋಗಿಗಳನ್ನು ಹಸ್ತಾಂತ<br /> ರಿಸಿಲ್ಲ. ‘ಬೋಗಿಗಳು ಸಿದ್ಧಗೊಳ್ಳುತ್ತಿವೆ. ಅವುಗಳನ್ನು ಪ್ರಯಾಣಿಕರ ಸಂಚಾರಕ್ಕೆ ಬಳಸಲು ಫೆಬ್ರುವರಿವರೆಗೆ ಕಾಯಬೇಕಾಗುತ್ತದೆ’ ಎಂದು ಶಂಕರ್ ತಿಳಿಸಿದರು.</p>.<p><strong>ವಿಸ್ತರಿತ ಅವಧಿಯಲ್ಲಿ 24 ಸಾವಿರ ಮಂದಿ ಪ್ರಯಾಣ</strong></p>.<p>ಹೊಸ ವರ್ಷಾಚರಣೆ ಪ್ರಯುಕ್ತ ಸೇವೆ ವಿಸ್ತರಿಸಿದ ಅವಧಿಯಲ್ಲಿ ಒಟ್ಟು 24,318 ಮಂದಿ ಮೆಟ್ರೊ ರೈಲುಗಳಲ್ಲಿ ಪ್ರಯಾಣಿಸಿದ್ದಾರೆ. ಈ ಅವಧಿಯಲ್ಲಿ ಎಂ.ಜಿ. ರಸ್ತೆ ನಿಲ್ದಾಣವನ್ನು ಅತಿ ಹೆಚ್ಚು ಮಂದಿ ಬಳಸಿದ್ದಾರೆ. ಒಟ್ಟು 13,574 ಮಂದಿ ಇಲ್ಲಿಂದ ಸಂಚರಿಸಿದ್ದಾರೆ.</p>.<p>ಟರ್ಮಿನಲ್ ನಿಲ್ದಾಣಗಳಿಂದ ರಾತ್ರಿ 11 ಗಂಟೆಗೆ ದಿನದ ಕೊನೆಯ ರೈಲು ಹೊರಡುತ್ತದೆ. ಹೊಸ ವರ್ಷಾಚರಣೆ ಆಚರಿಸುವವರ ಅನುಕೂಲಕ್ಕಾಗಿ ಭಾನುವಾರ ಮಧ್ಯರಾತ್ರಿ 2 ಗಂಟೆಯವರೆಗೂ ಮೆಟ್ರೊ ಸೇವೆ ವಿಸ್ತರಿಸಲಾಗಿತ್ತು.</p>.<p>‘ಭಾನುವಾರ ಇಡೀ ದಿನ ಒಟ್ಟು 3.26 ಲಕ್ಷ ಮಂದಿ ಮೆಟ್ರೊದಲ್ಲಿ ಪ್ರಯಾಣ ಮಾಡಿದ್ದಾರೆ’ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ.ವಸಂತ ರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಮುರಿದಿಲ್ಲ ದಾಖಲೆ: ‘ಒಂದೇ ದಿನ 4.03 ಲಕ್ಷ ಮಂದಿ ಮೆಟ್ರೊ ಬಳಸಿದ ದಾಖಲೆ ಇದೆ. ಸೇವಾ ಅವಧಿ ವಿಸ್ತರಣೆಯ ಹೊರತಾಗಿಯೂ ಭಾನುವಾರ ಈ ದಾಖಲೆ ಮುರಿದಿಲ್ಲ. ಬೆಳಿಗ್ಗೆಯಿಂದ ಸಂಜೆವರೆಗೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದುದು ಇದಕ್ಕೆ ಕಾರಣ’ ಎಂದು ಶಂಕರ್ ತಿಳಿಸಿದರು.</p>.<p>‘ಮೆಟ್ರೊ ಕಾರ್ಯಾಚರಣೆಯಿಂದ ನಿಗಮವು ಭಾನುವಾರ ₹ 98 ಲಕ್ಷ ವರಮಾನ ಗಳಿಸಿದೆ. ನೇರಳೆ ಮಾರ್ಗದಿಂದ ₹ 50.33 ಲಕ್ಷ ಹಾಗೂ ಹಸಿರು ಮಾರ್ಗದಿಂದ ₹ 48 ಲಕ್ಷ ವರಮಾನ ಬಂದಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>