<p><strong>ಬೆಂಗಳೂರು: </strong>ನಗರ ಪ್ರದೇಶಗಳ (‘ಎ’ ವಲಯ) ಪ್ರಾಥಮಿಕ ಶಾಲೆಗಳಲ್ಲಿ ಸರಿಯಾಗಿ ಪಾಠ ಮಾಡದ ಶಿಕ್ಷಕರನ್ನು ಗ್ರಾಮಾಂತರ ಪ್ರದೇಶಕ್ಕೆ (‘ಸಿ’ ವಲಯ) ಕಡ್ಡಾಯವಾಗಿ ವರ್ಗಾವಣೆ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.</p>.<p>2017–18ನೇ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಮಾರ್ಗಸೂಚಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ವೇಳಾಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಪ್ರಾಯೋಗಿಕ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ.</p>.<p>2014ರಲ್ಲಿ ಪರೀಕ್ಷೆ ಮೂಲಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಮೂರು ವರ್ಷದ ಅವಧಿ ಪೂರೈಸಿರುವ ಶಿಕ್ಷಕರ ಕಾರ್ಯನಿರ್ವಹಣೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿದ್ದರೆ ಅಂತಹವರಿಗೆ ನೋಟಿಸ್ ಕೊಟ್ಟು ಕಡ್ಡಾಯವಾಗಿ ವರ್ಗಾವಣೆ ಮಾಡಬೇಕು. ವರ್ಗಾವಣೆ ಪ್ರಾಧಿಕಾರ ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.</p>.<p>ಕಡ್ಡಾಯ ವರ್ಗಾವಣೆ ಈ ಬಾರಿ ಮೂರು ಹಂತಗಳಲ್ಲಿ ನಡೆಯುತ್ತದೆ. ಕೋರಿಕೆ ವರ್ಗಾವಣೆ ಬಯಸುವ ಶಿಕ್ಷಕರು ಗರಿಷ್ಠ ಐದು ವರ್ಷ ಪೂರೈಸಿರಬೇಕು. ‘ಎ’ ವಲಯದಲ್ಲಿ ಸತತ ಹತ್ತು ವರ್ಷ ಕೆಲಸ ಮಾಡಿದ್ದರೆ ಘಟಕದ (ಜಿಲ್ಲೆ) ಹೊರಗೆ ವರ್ಗಾವಣೆ ಹೊಂದಲು ಅರ್ಹರಿರುತ್ತಾರೆ.</p>.<p>ಯಾವುದೇ ತಾಲ್ಲೂಕಿನಲ್ಲಿ ಮಂಜೂರಾದ ಹುದ್ದೆಗಳ ಶೇ 20ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಖಾಲಿ ಇದ್ದರೆ ವರ್ಗಾವಣೆ ನೀಡುವುದಿಲ್ಲ ಎಂದು ವಿವರಿಸಲಾಗಿದೆ.</p>.<p>ಆದರೆ, ದೈಹಿಕ ಮತ್ತು ವಿಶೇಷ ಶಿಕ್ಷಕರ ವರ್ಗಾವಣೆಗೆ ಖಾಲಿ ಹುದ್ದೆಗಳ ಮಿತಿ ಅನ್ವಯ ಆಗುವುದಿಲ್ಲ. ಯಾವುದೇ ಶಾಲೆಯಲ್ಲಿ 200ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿದ್ದರೆ ದೈಹಿಕ ಮತ್ತು ವಿಶೇಷ ಶಿಕ್ಷಕರನ್ನು ನೇಮಿಸಲು ಅವಕಾಶವಿದೆ.</p>.<p><strong>ಪರಸ್ಪರ ವರ್ಗಾವಣೆಗೆ ಸೂಚನೆಗಳು</strong><br /> * ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶಾಲೆಯಲ್ಲಿ 3 ವರ್ಷ ಪೂರ್ಣಗೊಂಡಿರಬೇಕು (ಘಟಕದ ಹೊರಗೆ). ಘಟಕದ ಒಳಗೆ ಕನಿಷ್ಠ ಸೇವಾವಧಿ ಅನ್ವಯ ಆಗುವುದಿಲ್ಲ.<br /> * ಇಬ್ಬರೂ ಶಿಕ್ಷಕರ ವೃಂದ ಮತ್ತು ವಿಷಯಗಳಲ್ಲಿ ಹೊಂದಾಣಿಕೆ ಇರಬೇಕು.<br /> * ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳ ಒಳಗೆ ‘ಎ’ ವಲಯದಿಂದ ‘ಎ’ ವಲಯಕ್ಕೆ ವರ್ಗಾವಣೆಗೆ ಅವಕಾಶ ಇಲ್ಲ.<br /> * ಪರಸ್ಪರ ಒಬ್ಬರೊಂದಿಗೆ ಮಾತ್ರ ಅರ್ಜಿ ಸಲ್ಲಿಸಬೇಕು. ಕೌನ್ಸೆಲಿಂಗ್ಗೆ ಇಬ್ಬರೂ ಹಾಜರಾಗಿ ವರ್ಗಾವಣೆ ಆದೇಶ ಪಡೆಯಬೇಕು.</p>.<p><strong>ಕೋರಿಕೆ ವರ್ಗಾವಣೆಗೆ ಸೂಚನೆಗಳು: </strong><br /> * ಕಾಯಂ ಪೂರ್ವ ಸೇವಾ ಅವಧಿ ಪೂರೈಸದ ಪ್ರಾಥಮಿಕ ಶಾಲಾ ಶಿಕ್ಷಕರು ಕೋರಿಕೆ ವರ್ಗಾವಣೆ ಅರ್ಜಿ ಸಲ್ಲಿಸಲು ಅರ್ಹರಲ್ಲ.<br /> * ಜ್ಯೇಷ್ಠತಾ ಘಟಕಕ್ಕೆ ಅರ್ಜಿ ಸಲ್ಲಿಸಿರುವವರು ಪ್ರಸ್ತುತ ಶಾಲೆಯಲ್ಲಿ 5 ವರ್ಷ ಸೇವೆ ಪೂರ್ಣಗೊಳಿಸಿರಬೇಕು.<br /> * ಪತಿ– ಪತ್ನಿ ಇಬ್ಬರೂ ರಾಜ್ಯ, ಕೇಂದ್ರ ಸರ್ಕಾರಿ ಅಥವಾ ಸಾರ್ವಜನಿಕ ಉದ್ದಿಮೆಗಳಲ್ಲಿ ನೌಕರರಾಗಿದ್ದರೆ ಕನಿಷ್ಠ ಸೇವಾವಧಿ ಅನ್ವಯ ಆಗುವುದಿಲ್ಲ.</p>.<p><strong>ಪತಿ–ಪತ್ನಿ ವರ್ಗಾವಣೆ</strong><br /> ಪತಿ– ಪತ್ನಿ ಇಬ್ಬರೂ ರಾಜ್ಯ ಅಥವಾ ಕೇಂದ್ರ ಸರ್ಕಾರಿ ನೌಕರರಾಗಿದ್ದರೆ, ಸಾರ್ವಜನಿಕ ಉದ್ದಿಮೆಗಳಲ್ಲಿ ಕಾಯಂ ನೌಕರರಾಗಿದ್ದರೆ, ಮಹಾನಗರ ಪಾಲಿಕೆ, ಜಲಮಂಡಳಿ, ನಿಗಮ ಮಂಡಳಿಗಳಲ್ಲಿ ಉದ್ಯೋಗದಲ್ಲಿದ್ದರೆ ಕಾಯಂ ನೌಕರರು ಎಂದು ಪರಿಗಣಿಸಲಾಗುತ್ತದೆ.</p>.<p>ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರು ಸರ್ಕಾರಿ ಶಾಲೆ, ಮತ್ತೊಬ್ಬರು ಅನುದಾನಿತ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಅಂಥವರೂ ವರ್ಗಾವಣೆ ಪಡೆಯಬಹುದು. ಆದರೆ, ನಗರ ಪ್ರದೇಶ ಹೊರತುಪಡಿಸಿ ವರ್ಗಾವಣೆ ನೀಡಬೇಕು.</p>.<p><strong>ಕಾಯಿಲೆ ಪ್ರಕರಣಗಳು: </strong>ಶಿಕ್ಷಕರು ಅಥವಾ ಅವರ ಪತಿ/ಪತ್ನಿ/ಮಕ್ಕಳು ಹೃದಯ, ಮೂತ್ರಪಿಂಡ, ಕ್ಯಾನ್ಸರ್ ಮತ್ತು ಎಚ್ಐವಿ ಮತ್ತಿತರ ತೀವ್ರತರ ಕಾಯಿಲೆಗಳಿಂದ ಬಳಲುತ್ತಿದ್ದರೆ ದಾಖಲೆಗಳನ್ನು ಒದಗಿಸಿ ವರ್ಗಾವಣೆಗೆ ಅರ್ಜಿ ಸಲ್ಲಿಸಬಹುದು.</p>.<p><strong>ಅಂಗವಿಕಲ ಪ್ರಕರಣಗಳು: </strong>ಅಂಗವಿಕಲ ಮೀಸಲಾತಿಯಲ್ಲಿ ನೇಮಕವಾಗಿರಬೇಕು. ಶೇ 40ಕ್ಕಿಂತ ಹೆಚ್ಚು ಪ್ರಮಾಣ ಅಂಗವಿಕಲತೆ ಇರುವ ಬಗ್ಗೆ ಜಿಲ್ಲಾ ಸರ್ಜನ್ಗಳಿಂದ ಪಡೆದ ಪ್ರಮಾಣ ಪತ್ರ ಸಲ್ಲಿಸಬೇಕು. </p>.<p>ವಿಧವೆಯರು ಪತಿಯ ಮರಣ ಪ್ರಮಾಣ ಪತ್ರ ಸಲ್ಲಿಸಬೇಕು. ಸೈನ್ಯದಲ್ಲಿರುವ ಅಥವಾ ಮೃತರ ಅವಲಂಬಿತರು ಆ ಬಗ್ಗೆ ಪ್ರಮಾಣ ಪತ್ರ ಹಾಜರುಪಡಿಸಿ ಅರ್ಜಿ ಸಲ್ಲಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ನಗರ ಪ್ರದೇಶಗಳ (‘ಎ’ ವಲಯ) ಪ್ರಾಥಮಿಕ ಶಾಲೆಗಳಲ್ಲಿ ಸರಿಯಾಗಿ ಪಾಠ ಮಾಡದ ಶಿಕ್ಷಕರನ್ನು ಗ್ರಾಮಾಂತರ ಪ್ರದೇಶಕ್ಕೆ (‘ಸಿ’ ವಲಯ) ಕಡ್ಡಾಯವಾಗಿ ವರ್ಗಾವಣೆ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.</p>.<p>2017–18ನೇ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಮಾರ್ಗಸೂಚಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ವೇಳಾಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಪ್ರಾಯೋಗಿಕ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ.</p>.<p>2014ರಲ್ಲಿ ಪರೀಕ್ಷೆ ಮೂಲಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಮೂರು ವರ್ಷದ ಅವಧಿ ಪೂರೈಸಿರುವ ಶಿಕ್ಷಕರ ಕಾರ್ಯನಿರ್ವಹಣೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿದ್ದರೆ ಅಂತಹವರಿಗೆ ನೋಟಿಸ್ ಕೊಟ್ಟು ಕಡ್ಡಾಯವಾಗಿ ವರ್ಗಾವಣೆ ಮಾಡಬೇಕು. ವರ್ಗಾವಣೆ ಪ್ರಾಧಿಕಾರ ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.</p>.<p>ಕಡ್ಡಾಯ ವರ್ಗಾವಣೆ ಈ ಬಾರಿ ಮೂರು ಹಂತಗಳಲ್ಲಿ ನಡೆಯುತ್ತದೆ. ಕೋರಿಕೆ ವರ್ಗಾವಣೆ ಬಯಸುವ ಶಿಕ್ಷಕರು ಗರಿಷ್ಠ ಐದು ವರ್ಷ ಪೂರೈಸಿರಬೇಕು. ‘ಎ’ ವಲಯದಲ್ಲಿ ಸತತ ಹತ್ತು ವರ್ಷ ಕೆಲಸ ಮಾಡಿದ್ದರೆ ಘಟಕದ (ಜಿಲ್ಲೆ) ಹೊರಗೆ ವರ್ಗಾವಣೆ ಹೊಂದಲು ಅರ್ಹರಿರುತ್ತಾರೆ.</p>.<p>ಯಾವುದೇ ತಾಲ್ಲೂಕಿನಲ್ಲಿ ಮಂಜೂರಾದ ಹುದ್ದೆಗಳ ಶೇ 20ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಖಾಲಿ ಇದ್ದರೆ ವರ್ಗಾವಣೆ ನೀಡುವುದಿಲ್ಲ ಎಂದು ವಿವರಿಸಲಾಗಿದೆ.</p>.<p>ಆದರೆ, ದೈಹಿಕ ಮತ್ತು ವಿಶೇಷ ಶಿಕ್ಷಕರ ವರ್ಗಾವಣೆಗೆ ಖಾಲಿ ಹುದ್ದೆಗಳ ಮಿತಿ ಅನ್ವಯ ಆಗುವುದಿಲ್ಲ. ಯಾವುದೇ ಶಾಲೆಯಲ್ಲಿ 200ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿದ್ದರೆ ದೈಹಿಕ ಮತ್ತು ವಿಶೇಷ ಶಿಕ್ಷಕರನ್ನು ನೇಮಿಸಲು ಅವಕಾಶವಿದೆ.</p>.<p><strong>ಪರಸ್ಪರ ವರ್ಗಾವಣೆಗೆ ಸೂಚನೆಗಳು</strong><br /> * ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶಾಲೆಯಲ್ಲಿ 3 ವರ್ಷ ಪೂರ್ಣಗೊಂಡಿರಬೇಕು (ಘಟಕದ ಹೊರಗೆ). ಘಟಕದ ಒಳಗೆ ಕನಿಷ್ಠ ಸೇವಾವಧಿ ಅನ್ವಯ ಆಗುವುದಿಲ್ಲ.<br /> * ಇಬ್ಬರೂ ಶಿಕ್ಷಕರ ವೃಂದ ಮತ್ತು ವಿಷಯಗಳಲ್ಲಿ ಹೊಂದಾಣಿಕೆ ಇರಬೇಕು.<br /> * ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳ ಒಳಗೆ ‘ಎ’ ವಲಯದಿಂದ ‘ಎ’ ವಲಯಕ್ಕೆ ವರ್ಗಾವಣೆಗೆ ಅವಕಾಶ ಇಲ್ಲ.<br /> * ಪರಸ್ಪರ ಒಬ್ಬರೊಂದಿಗೆ ಮಾತ್ರ ಅರ್ಜಿ ಸಲ್ಲಿಸಬೇಕು. ಕೌನ್ಸೆಲಿಂಗ್ಗೆ ಇಬ್ಬರೂ ಹಾಜರಾಗಿ ವರ್ಗಾವಣೆ ಆದೇಶ ಪಡೆಯಬೇಕು.</p>.<p><strong>ಕೋರಿಕೆ ವರ್ಗಾವಣೆಗೆ ಸೂಚನೆಗಳು: </strong><br /> * ಕಾಯಂ ಪೂರ್ವ ಸೇವಾ ಅವಧಿ ಪೂರೈಸದ ಪ್ರಾಥಮಿಕ ಶಾಲಾ ಶಿಕ್ಷಕರು ಕೋರಿಕೆ ವರ್ಗಾವಣೆ ಅರ್ಜಿ ಸಲ್ಲಿಸಲು ಅರ್ಹರಲ್ಲ.<br /> * ಜ್ಯೇಷ್ಠತಾ ಘಟಕಕ್ಕೆ ಅರ್ಜಿ ಸಲ್ಲಿಸಿರುವವರು ಪ್ರಸ್ತುತ ಶಾಲೆಯಲ್ಲಿ 5 ವರ್ಷ ಸೇವೆ ಪೂರ್ಣಗೊಳಿಸಿರಬೇಕು.<br /> * ಪತಿ– ಪತ್ನಿ ಇಬ್ಬರೂ ರಾಜ್ಯ, ಕೇಂದ್ರ ಸರ್ಕಾರಿ ಅಥವಾ ಸಾರ್ವಜನಿಕ ಉದ್ದಿಮೆಗಳಲ್ಲಿ ನೌಕರರಾಗಿದ್ದರೆ ಕನಿಷ್ಠ ಸೇವಾವಧಿ ಅನ್ವಯ ಆಗುವುದಿಲ್ಲ.</p>.<p><strong>ಪತಿ–ಪತ್ನಿ ವರ್ಗಾವಣೆ</strong><br /> ಪತಿ– ಪತ್ನಿ ಇಬ್ಬರೂ ರಾಜ್ಯ ಅಥವಾ ಕೇಂದ್ರ ಸರ್ಕಾರಿ ನೌಕರರಾಗಿದ್ದರೆ, ಸಾರ್ವಜನಿಕ ಉದ್ದಿಮೆಗಳಲ್ಲಿ ಕಾಯಂ ನೌಕರರಾಗಿದ್ದರೆ, ಮಹಾನಗರ ಪಾಲಿಕೆ, ಜಲಮಂಡಳಿ, ನಿಗಮ ಮಂಡಳಿಗಳಲ್ಲಿ ಉದ್ಯೋಗದಲ್ಲಿದ್ದರೆ ಕಾಯಂ ನೌಕರರು ಎಂದು ಪರಿಗಣಿಸಲಾಗುತ್ತದೆ.</p>.<p>ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರು ಸರ್ಕಾರಿ ಶಾಲೆ, ಮತ್ತೊಬ್ಬರು ಅನುದಾನಿತ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಅಂಥವರೂ ವರ್ಗಾವಣೆ ಪಡೆಯಬಹುದು. ಆದರೆ, ನಗರ ಪ್ರದೇಶ ಹೊರತುಪಡಿಸಿ ವರ್ಗಾವಣೆ ನೀಡಬೇಕು.</p>.<p><strong>ಕಾಯಿಲೆ ಪ್ರಕರಣಗಳು: </strong>ಶಿಕ್ಷಕರು ಅಥವಾ ಅವರ ಪತಿ/ಪತ್ನಿ/ಮಕ್ಕಳು ಹೃದಯ, ಮೂತ್ರಪಿಂಡ, ಕ್ಯಾನ್ಸರ್ ಮತ್ತು ಎಚ್ಐವಿ ಮತ್ತಿತರ ತೀವ್ರತರ ಕಾಯಿಲೆಗಳಿಂದ ಬಳಲುತ್ತಿದ್ದರೆ ದಾಖಲೆಗಳನ್ನು ಒದಗಿಸಿ ವರ್ಗಾವಣೆಗೆ ಅರ್ಜಿ ಸಲ್ಲಿಸಬಹುದು.</p>.<p><strong>ಅಂಗವಿಕಲ ಪ್ರಕರಣಗಳು: </strong>ಅಂಗವಿಕಲ ಮೀಸಲಾತಿಯಲ್ಲಿ ನೇಮಕವಾಗಿರಬೇಕು. ಶೇ 40ಕ್ಕಿಂತ ಹೆಚ್ಚು ಪ್ರಮಾಣ ಅಂಗವಿಕಲತೆ ಇರುವ ಬಗ್ಗೆ ಜಿಲ್ಲಾ ಸರ್ಜನ್ಗಳಿಂದ ಪಡೆದ ಪ್ರಮಾಣ ಪತ್ರ ಸಲ್ಲಿಸಬೇಕು. </p>.<p>ವಿಧವೆಯರು ಪತಿಯ ಮರಣ ಪ್ರಮಾಣ ಪತ್ರ ಸಲ್ಲಿಸಬೇಕು. ಸೈನ್ಯದಲ್ಲಿರುವ ಅಥವಾ ಮೃತರ ಅವಲಂಬಿತರು ಆ ಬಗ್ಗೆ ಪ್ರಮಾಣ ಪತ್ರ ಹಾಜರುಪಡಿಸಿ ಅರ್ಜಿ ಸಲ್ಲಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>