<p><strong>ಬೆಂಗಳೂರು:</strong> ವಿಮಾನನಿಲ್ದಾಣ ರಸ್ತೆಯಲ್ಲಿ (ಎತ್ತರಿಸಿದ ರಸ್ತೆ) ಯಲಹಂಕದ ಹುಣಸಮಾರನಹಳ್ಳಿ ಬಳಿ ಮಂಗಳವಾರ ಮಧ್ಯಾಹ್ನ ಚಲಿಸುತ್ತಿದ್ದ ಟೆಂಪೊದ ಆ್ಯಕ್ಸೆಲ್ ತುಂಡಾಗಿ ಹಿಂಬದಿಯ ಚಕ್ರಗಳು ಕಳಚಿಕೊಂಡವು.</p>.<p>ಟೆಂಪೊ ಅಡ್ಡಾದಿಡ್ಡಿಯಾಗಿ ಚಲಿಸಿತು. ಚಕ್ರಗಳು ವಾಹನದಿಂದ ಬೇರ್ಪಟ್ಟು ಅಕ್ಕಪಕ್ಕದಲ್ಲಿ ಸಾಗುತ್ತಿದ್ದ ವಾಹನಗಳತ್ತ ನುಗ್ಗಿದವು. ಈ ಅನಿರೀಕ್ಷಿತ ಘಟನೆಯಿಂದಾಗಿ ವಾಹನ ಸವಾರರು ಆತಂಕಗೊಂಡರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.</p>.<p>ಚಾಲಕ ಉಮೇಶ್, ಟೆಂಪೊದಲ್ಲಿ (ಕೆ.ಎ–03 3514 ವಾಹನದ ನೋಂದಣಿ ಸಂಖ್ಯೆ) ಕಲ್ಲುಗಳನ್ನು ತುಂಬಿಕೊಂಡು ನಗರದ ಕಡೆಗೆ ಬರುತ್ತಿದ್ದಾಗ ಈ ಅನಾಹುತ ಸಂಭವಿಸಿದೆ.</p>.<p>‘ಚಕ್ರಗಳು ಕಳಚಿದ್ದರಿಂದ ವಾಹನದ ಹಿಂಭಾಗವು ನೆಲವನ್ನು ಸ್ಪರ್ಶಿಸಿತು. ಈ ವೇಳೆ ಅದರಲ್ಲಿದ್ದ ಕಲ್ಲುಗಳು ಚೆಲ್ಲಾಪಿಲ್ಲಿಯಾಗಿ ಕೆಳಗೆ ಬಿದ್ದವು. ಅವಘಡದಲ್ಲಿ ಚಾಲಕ ಸೇರಿದಂತೆ ಯಾರಿಗೂ ಅಪಾಯವಾಗಿಲ್ಲ. ಬಳಿಕ ಕ್ರೇನ್ ತರಿಸಿಕೊಂಡು ಟೆಂಪೊವನ್ನು ಸ್ಥಳಾಂತರ ಮಾಡಿ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟೆವು’ ಎಂದು ಚಿಕ್ಕಜಾಲ ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ವಿಮಾನನಿಲ್ದಾಣ ರಸ್ತೆಯಲ್ಲಿ (ಎತ್ತರಿಸಿದ ರಸ್ತೆ) ಯಲಹಂಕದ ಹುಣಸಮಾರನಹಳ್ಳಿ ಬಳಿ ಮಂಗಳವಾರ ಮಧ್ಯಾಹ್ನ ಚಲಿಸುತ್ತಿದ್ದ ಟೆಂಪೊದ ಆ್ಯಕ್ಸೆಲ್ ತುಂಡಾಗಿ ಹಿಂಬದಿಯ ಚಕ್ರಗಳು ಕಳಚಿಕೊಂಡವು.</p>.<p>ಟೆಂಪೊ ಅಡ್ಡಾದಿಡ್ಡಿಯಾಗಿ ಚಲಿಸಿತು. ಚಕ್ರಗಳು ವಾಹನದಿಂದ ಬೇರ್ಪಟ್ಟು ಅಕ್ಕಪಕ್ಕದಲ್ಲಿ ಸಾಗುತ್ತಿದ್ದ ವಾಹನಗಳತ್ತ ನುಗ್ಗಿದವು. ಈ ಅನಿರೀಕ್ಷಿತ ಘಟನೆಯಿಂದಾಗಿ ವಾಹನ ಸವಾರರು ಆತಂಕಗೊಂಡರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.</p>.<p>ಚಾಲಕ ಉಮೇಶ್, ಟೆಂಪೊದಲ್ಲಿ (ಕೆ.ಎ–03 3514 ವಾಹನದ ನೋಂದಣಿ ಸಂಖ್ಯೆ) ಕಲ್ಲುಗಳನ್ನು ತುಂಬಿಕೊಂಡು ನಗರದ ಕಡೆಗೆ ಬರುತ್ತಿದ್ದಾಗ ಈ ಅನಾಹುತ ಸಂಭವಿಸಿದೆ.</p>.<p>‘ಚಕ್ರಗಳು ಕಳಚಿದ್ದರಿಂದ ವಾಹನದ ಹಿಂಭಾಗವು ನೆಲವನ್ನು ಸ್ಪರ್ಶಿಸಿತು. ಈ ವೇಳೆ ಅದರಲ್ಲಿದ್ದ ಕಲ್ಲುಗಳು ಚೆಲ್ಲಾಪಿಲ್ಲಿಯಾಗಿ ಕೆಳಗೆ ಬಿದ್ದವು. ಅವಘಡದಲ್ಲಿ ಚಾಲಕ ಸೇರಿದಂತೆ ಯಾರಿಗೂ ಅಪಾಯವಾಗಿಲ್ಲ. ಬಳಿಕ ಕ್ರೇನ್ ತರಿಸಿಕೊಂಡು ಟೆಂಪೊವನ್ನು ಸ್ಥಳಾಂತರ ಮಾಡಿ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟೆವು’ ಎಂದು ಚಿಕ್ಕಜಾಲ ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>