<p><strong>ಮಾಗಡಿ:</strong> ಮುಖ್ಯಮಂತ್ರಿ ಸಿದ್ದರಾಮಯ್ಯ ಜ.3ರಂದು ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಯೋಜನಾ ಪ್ರಾಧಿಕಾರದ ಕಟ್ಟಡ ಉದ್ಘಾಟಿಸಲಿದ್ದಾರೆ.</p>.<p>ವಿಪುಲ ನೈಸರ್ಗಿಕ ಸಂಪನ್ಮೂಲಗಳ ಜತೆಗೆ ಹಲವು ವೈವಿಧ್ಯತೆಗಳಿಂದ ಕೂಡಿರುವ ಮಾಗಡಿ, ರಾಜಧಾನಿ ಬೆಂಗಳೂರಿನಿಂದ 51 ಕಿ.ಮೀ ದೂರದಲ್ಲಿದ್ದರೂ, ಹಲವು ಸೌಲಭ್ಯಗಳಿಂದ ವಂಚಿತವಾಗಿದೆ.</p>.<p>ಕೃಷ್ಣರಾಜ ಗಿರಿ: ಮಾಗಡಿಯಿಂದ ಆಗ್ನೇಯ ದಿಕ್ಕಿನಲ್ಲಿ 11 ಕಿ.ಮೀ. ದೂರ ದಲ್ಲಿರುವ ಗಿರಿಧಾಮ ಸಾವನದುರ್ಗದ ಬೆಟ್ಟ 12 ಕಿ.ಮೀ. ಸುತ್ತಳತೆಯಲ್ಲಿದೆ. ಸಮುದ್ರ ಮಟ್ಟದಿಂದ 4,886 ಅಡಿ ಎತ್ತರದಲ್ಲಿದೆ. ವನಸಿರಿ, ಸಸ್ಯಸಂಕುಲ, ಪ್ರಾಣಿ, ಪಕ್ಷಿ ಸಂಕುಲಗಳಿವೆ.</p>.<p>ಖಗಮೃಗ, ನೀರಿನ ಝರಿ, ಶಿಖರಗಳಿಂದ ಕೂಡಿರುವ ರಮಣೀಯ ನೆಲೆಯಾಗಿದೆ. ಬೆಟ್ಟದ ಸುತ್ತ ಪುಟಾಣಿ ರೈಲು ಓಡಿಸಿ ಸಾವನದುರ್ಗದಿಂದ ಅನತಿದೂರದಲ್ಲಿ ಮಂಚನಬೆಲೆ ಜಲಾಶಯಕ್ಕೆ ರೋಪ್ವೇ ನಿರ್ಮಿಸಿದರೆ ಪ್ರವಾಸೋದ್ಯಮದಿಂದ ಲಾಭಗಳಿಸಬಹುದು.</p>.<p>ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಬೆಟ್ಟದ ಮೇಲೆ ನಿರ್ಮಿಸಿರುವ ಕೋಡುಗಲ್ ಶಿಖರದ ಬಸವಣ್ಣ, ಆಂಜನೇಯ ಸ್ವಾಮಿ, ಬಂಡೆಗಲ್ಲು ವಿನಾಯಕ ಸ್ವಾಮಿ ಗುಡಿ, ಸಾವಂದರಾಯನ ಕಾಲದ ಏಳುಸುತ್ತಿನ ಕೋಟೆ, ನೀರಿನ ದೊಣೆಗಳನ್ನು ಮುಂದಿನ ಪೀಳಿಗೆಗೆ ರಕ್ಷಿಸಬೇಕು ಎಂಬುದು ಇತಿಹಾಸಕಾರ ಡಾ.ಮುನಿರಾಜಪ್ಪ ಅವರ ಅಭಿಪ್ರಾಯ.</p>.<p><strong>ಕ್ರಷರ್ ಕಂಟಕ</strong>: ತಿರುಮಲೆ ತಿರುವೆಂಗಳನಾಥ ರಂಗನಾಥ ಸ್ವಾಮಿ ದೇಗುಲದ ಸಾವಿರ ವರ್ಷದ ಸ್ಮಾರಕವಾದ ವೆಂಗಳಪ್ಪನ ಪಾಳ್ಯದ ರಂಗಪ್ಪನ ಬೆಟ್ಟದಲ್ಲಿ ಹಗಲು ರಾತ್ರಿ ಭಾರಿಗಾತ್ರದ ಸಿಡಿಮದ್ದು ಸಿಡಿಸಲಾಗುತ್ತಿದೆ. 11 ಕ್ರಷರ್ಗಳು ಬೆಟ್ಟ ಕೊರೆಯುತ್ತಿದ್ದು, ನಿಸರ್ಗ ಸಂಪತ್ತು ಲೂಟಿ ಮಾಡಲಾಗುತ್ತಿದೆ ಎನ್ನುವುದು ಸಾರ್ವಜನಿಕರ ಆತಂಕ.</p>.<p>ರೈಲು: ಸೋಲೂರು ಮಾರ್ಗವಾಗಿ ಮಂಗಳೂರು ತಲುಪುವ ರೈಲು ಮಾರ್ಗವನ್ನು ವಿಸ್ತರಿಸಿ ಮಾಗಡಿ ಮೂಲಕ ರಾಮನಗರಕ್ಕೆ ಸಂಪರ್ಕ ಕಲ್ಪಿಸಿದರೆ, ದ್ವೀಪದಂತಿರುವ ಮಾಗಡಿ ಹೊರಗಿನ ಪ್ರಪಂಚಕ್ಕೆ ಪರಿಚಯವಾಗಲು ಅನುಕೂಲವಾಗಲಿದೆ. ಸಂತಶ್ರೇಷ್ಠರಾದ ಡಾ.ಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರು ವೀರಾಪುರ ಅಭಿವೃದ್ಧಿ ಪಡಿಸಬೇಕಾಗಿದೆ ಎನ್ನುತ್ತಾರೆ ಸ್ಥಳೀಯರು.</p>.<p>ದುರ್ಗಗಳ ರಕ್ಷಣೆ: ತಾಲ್ಲೂಕಿನಲ್ಲಿ ಇರುವ ಪಾಳೇಗಾರರು ಮತ್ತು ಕೆಂಪೇಗೌಡರ ವಂಶಜರು ನಿರ್ಮಿಸಿದ್ದ ಹುತ್ರಿದುರ್ಗ, ಭೈರವನದುರ್ಗ, ಹುಲಿಯೂರು ದುರ್ಗ, ಸಾವನದುರ್ಗದ ಏಳು ಸುತ್ತಿನ ಕೋಟೆ, ಹುಲಿಕಲ್ ಅರಮನೆ, ಸೋಮೇಶ್ವರ ಗುಡಿಗಳು ರಕ್ಷಣೆ ಮಾಡಲು ಮುಂದಾಗಬೇಕಿದೆ ಎಂಬುದು ಸಾರ್ವಜನಿಕರ ಒಕ್ಕೊರಲ ಮನವಿ</p>.<p><strong>ಉಳಿಯಬೇಕಿದೆ ವನಸಿರಿ</strong></p>.<p>ತಾಲ್ಲೂಕಿನಲ್ಲಿ ಸಾವನದುರ್ಗ, ಸಿದ್ದೇದೇವರ ಬೆಟ್ಟ, ತೂಬಿನಕೆರೆ, ಮತ್ತಿಕೆರೆ, ಬೆಳಗವಾಡಿ, ಭಂಟರ ಕುಪ್ಪೆ, ಕಾಚಕಲ್ಲಪ್ಪನ ಗುಡ್ಡ, ಇತರೆಡೆಗಳಲ್ಲಿನ ಅರಣ್ಯ ನಿತ್ಯ ಒತ್ತುವರಿಯಾಗುತ್ತಿದೆ. ವನಸಿರಿ ಉಳಿಸದಿದ್ದರೆ ಎಲ್ಲರಿಗೂ ವನವಾಸ ತಪ್ಪಿದ್ದಲ್ಲ ಎನ್ನುತ್ತಾರೆ ಸ್ಥಳೀಯ ಪರಿಸರ ಪ್ರೇಮಿಗಳು.</p>.<p>ಅರಣ್ಯ ನಾಶವಾಗುತ್ತಿರುವುದರಿಂದ ಕಾಡಾನೆ, ಚಿರತೆ, ಸೀಳುನಾಯಿ, ಕರಡಿ, ನರಿ, ಕಾಡುಹಂದಿಗಳು ರೈತರ ಹೊಲಗದ್ದೆಗಳತ್ತ ನುಗ್ಗಿ ಬಂದು ರೈತನ ತೋಟ ನಾಶ ಮಾಡುತ್ತಿವೆ. ಅನ್ನದಾತನನ್ನು ಬಲಿ ತೆಗೆದುಕೊಳ್ಳುತ್ತಿವೆ. ವನ್ಯಮೃಗ ಮತ್ತು ವನಸಿರಿ ಉಳಿಸಬೇಕಿದೆ ಎನ್ನುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಗಡಿ:</strong> ಮುಖ್ಯಮಂತ್ರಿ ಸಿದ್ದರಾಮಯ್ಯ ಜ.3ರಂದು ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಯೋಜನಾ ಪ್ರಾಧಿಕಾರದ ಕಟ್ಟಡ ಉದ್ಘಾಟಿಸಲಿದ್ದಾರೆ.</p>.<p>ವಿಪುಲ ನೈಸರ್ಗಿಕ ಸಂಪನ್ಮೂಲಗಳ ಜತೆಗೆ ಹಲವು ವೈವಿಧ್ಯತೆಗಳಿಂದ ಕೂಡಿರುವ ಮಾಗಡಿ, ರಾಜಧಾನಿ ಬೆಂಗಳೂರಿನಿಂದ 51 ಕಿ.ಮೀ ದೂರದಲ್ಲಿದ್ದರೂ, ಹಲವು ಸೌಲಭ್ಯಗಳಿಂದ ವಂಚಿತವಾಗಿದೆ.</p>.<p>ಕೃಷ್ಣರಾಜ ಗಿರಿ: ಮಾಗಡಿಯಿಂದ ಆಗ್ನೇಯ ದಿಕ್ಕಿನಲ್ಲಿ 11 ಕಿ.ಮೀ. ದೂರ ದಲ್ಲಿರುವ ಗಿರಿಧಾಮ ಸಾವನದುರ್ಗದ ಬೆಟ್ಟ 12 ಕಿ.ಮೀ. ಸುತ್ತಳತೆಯಲ್ಲಿದೆ. ಸಮುದ್ರ ಮಟ್ಟದಿಂದ 4,886 ಅಡಿ ಎತ್ತರದಲ್ಲಿದೆ. ವನಸಿರಿ, ಸಸ್ಯಸಂಕುಲ, ಪ್ರಾಣಿ, ಪಕ್ಷಿ ಸಂಕುಲಗಳಿವೆ.</p>.<p>ಖಗಮೃಗ, ನೀರಿನ ಝರಿ, ಶಿಖರಗಳಿಂದ ಕೂಡಿರುವ ರಮಣೀಯ ನೆಲೆಯಾಗಿದೆ. ಬೆಟ್ಟದ ಸುತ್ತ ಪುಟಾಣಿ ರೈಲು ಓಡಿಸಿ ಸಾವನದುರ್ಗದಿಂದ ಅನತಿದೂರದಲ್ಲಿ ಮಂಚನಬೆಲೆ ಜಲಾಶಯಕ್ಕೆ ರೋಪ್ವೇ ನಿರ್ಮಿಸಿದರೆ ಪ್ರವಾಸೋದ್ಯಮದಿಂದ ಲಾಭಗಳಿಸಬಹುದು.</p>.<p>ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಬೆಟ್ಟದ ಮೇಲೆ ನಿರ್ಮಿಸಿರುವ ಕೋಡುಗಲ್ ಶಿಖರದ ಬಸವಣ್ಣ, ಆಂಜನೇಯ ಸ್ವಾಮಿ, ಬಂಡೆಗಲ್ಲು ವಿನಾಯಕ ಸ್ವಾಮಿ ಗುಡಿ, ಸಾವಂದರಾಯನ ಕಾಲದ ಏಳುಸುತ್ತಿನ ಕೋಟೆ, ನೀರಿನ ದೊಣೆಗಳನ್ನು ಮುಂದಿನ ಪೀಳಿಗೆಗೆ ರಕ್ಷಿಸಬೇಕು ಎಂಬುದು ಇತಿಹಾಸಕಾರ ಡಾ.ಮುನಿರಾಜಪ್ಪ ಅವರ ಅಭಿಪ್ರಾಯ.</p>.<p><strong>ಕ್ರಷರ್ ಕಂಟಕ</strong>: ತಿರುಮಲೆ ತಿರುವೆಂಗಳನಾಥ ರಂಗನಾಥ ಸ್ವಾಮಿ ದೇಗುಲದ ಸಾವಿರ ವರ್ಷದ ಸ್ಮಾರಕವಾದ ವೆಂಗಳಪ್ಪನ ಪಾಳ್ಯದ ರಂಗಪ್ಪನ ಬೆಟ್ಟದಲ್ಲಿ ಹಗಲು ರಾತ್ರಿ ಭಾರಿಗಾತ್ರದ ಸಿಡಿಮದ್ದು ಸಿಡಿಸಲಾಗುತ್ತಿದೆ. 11 ಕ್ರಷರ್ಗಳು ಬೆಟ್ಟ ಕೊರೆಯುತ್ತಿದ್ದು, ನಿಸರ್ಗ ಸಂಪತ್ತು ಲೂಟಿ ಮಾಡಲಾಗುತ್ತಿದೆ ಎನ್ನುವುದು ಸಾರ್ವಜನಿಕರ ಆತಂಕ.</p>.<p>ರೈಲು: ಸೋಲೂರು ಮಾರ್ಗವಾಗಿ ಮಂಗಳೂರು ತಲುಪುವ ರೈಲು ಮಾರ್ಗವನ್ನು ವಿಸ್ತರಿಸಿ ಮಾಗಡಿ ಮೂಲಕ ರಾಮನಗರಕ್ಕೆ ಸಂಪರ್ಕ ಕಲ್ಪಿಸಿದರೆ, ದ್ವೀಪದಂತಿರುವ ಮಾಗಡಿ ಹೊರಗಿನ ಪ್ರಪಂಚಕ್ಕೆ ಪರಿಚಯವಾಗಲು ಅನುಕೂಲವಾಗಲಿದೆ. ಸಂತಶ್ರೇಷ್ಠರಾದ ಡಾ.ಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರು ವೀರಾಪುರ ಅಭಿವೃದ್ಧಿ ಪಡಿಸಬೇಕಾಗಿದೆ ಎನ್ನುತ್ತಾರೆ ಸ್ಥಳೀಯರು.</p>.<p>ದುರ್ಗಗಳ ರಕ್ಷಣೆ: ತಾಲ್ಲೂಕಿನಲ್ಲಿ ಇರುವ ಪಾಳೇಗಾರರು ಮತ್ತು ಕೆಂಪೇಗೌಡರ ವಂಶಜರು ನಿರ್ಮಿಸಿದ್ದ ಹುತ್ರಿದುರ್ಗ, ಭೈರವನದುರ್ಗ, ಹುಲಿಯೂರು ದುರ್ಗ, ಸಾವನದುರ್ಗದ ಏಳು ಸುತ್ತಿನ ಕೋಟೆ, ಹುಲಿಕಲ್ ಅರಮನೆ, ಸೋಮೇಶ್ವರ ಗುಡಿಗಳು ರಕ್ಷಣೆ ಮಾಡಲು ಮುಂದಾಗಬೇಕಿದೆ ಎಂಬುದು ಸಾರ್ವಜನಿಕರ ಒಕ್ಕೊರಲ ಮನವಿ</p>.<p><strong>ಉಳಿಯಬೇಕಿದೆ ವನಸಿರಿ</strong></p>.<p>ತಾಲ್ಲೂಕಿನಲ್ಲಿ ಸಾವನದುರ್ಗ, ಸಿದ್ದೇದೇವರ ಬೆಟ್ಟ, ತೂಬಿನಕೆರೆ, ಮತ್ತಿಕೆರೆ, ಬೆಳಗವಾಡಿ, ಭಂಟರ ಕುಪ್ಪೆ, ಕಾಚಕಲ್ಲಪ್ಪನ ಗುಡ್ಡ, ಇತರೆಡೆಗಳಲ್ಲಿನ ಅರಣ್ಯ ನಿತ್ಯ ಒತ್ತುವರಿಯಾಗುತ್ತಿದೆ. ವನಸಿರಿ ಉಳಿಸದಿದ್ದರೆ ಎಲ್ಲರಿಗೂ ವನವಾಸ ತಪ್ಪಿದ್ದಲ್ಲ ಎನ್ನುತ್ತಾರೆ ಸ್ಥಳೀಯ ಪರಿಸರ ಪ್ರೇಮಿಗಳು.</p>.<p>ಅರಣ್ಯ ನಾಶವಾಗುತ್ತಿರುವುದರಿಂದ ಕಾಡಾನೆ, ಚಿರತೆ, ಸೀಳುನಾಯಿ, ಕರಡಿ, ನರಿ, ಕಾಡುಹಂದಿಗಳು ರೈತರ ಹೊಲಗದ್ದೆಗಳತ್ತ ನುಗ್ಗಿ ಬಂದು ರೈತನ ತೋಟ ನಾಶ ಮಾಡುತ್ತಿವೆ. ಅನ್ನದಾತನನ್ನು ಬಲಿ ತೆಗೆದುಕೊಳ್ಳುತ್ತಿವೆ. ವನ್ಯಮೃಗ ಮತ್ತು ವನಸಿರಿ ಉಳಿಸಬೇಕಿದೆ ಎನ್ನುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>