ಗುರುವಾರ ಬೆಳಿಗ್ಗೆ ಶವವನ್ನು ಕಾಟಿಪಳ್ಳಕ್ಕೆ ತರುತ್ತಿದ್ದಂತೆಯೇ ತೀವ್ರ ಆಕ್ರೋಶ ವ್ಯಕ್ತವಾಯಿತು. ಶವವನ್ನು ಮತ್ತೆ ಎ.ಜೆ.ಆಸ್ಪತ್ರೆಗೆ ಸ್ಥಳಾಂತರಿಸಬೇಕು. ಅಲ್ಲಿಂದ ಗೌರವದಿಂದ ಶವಯಾತ್ರೆಗೆ ಅವಕಾಶ ಕೊಡಬೇಕು ಎಂದು ಬಜರಂಗದಳ, ವಿಶ್ವಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ ಹಾಗೂ ದುರ್ಗಾವಾಹಿನಿ ಸಂಘಟನೆಗಳ ಕಾರ್ಯಕರ್ತರು, ಪೋಷಕರು ಒತ್ತಾಯಿಸಿದರು.