ಕುಕ್ಕರಹಳ್ಳಿ ಕೆರೆಯಲ್ಲಿ ಕಳೆದ ತಿಂಗಳು ಒಟ್ಟು ಏಳು ಪೆಲಿಕಾನ್ಗಳು ಸತ್ತಿದ್ದವು. ಅವುಗಳು ಸಾವಿಗೆ ಹಕ್ಕಿಜ್ವರ ಕಾರಣ ಅಲ್ಲ ಎಂದು ಭೋಪಾಲ್ನಲ್ಲಿರುವ ಪ್ರಾಣಿಗಳ ರೋಗ ಪತ್ತೆ ಪ್ರಯೋಗಾಲಯದ ವರದಿ ತಿಳಿಸಿತ್ತು. ಇದರಿಂದ ನಗರದಲ್ಲಿ ಹಕ್ಕಿಜ್ವರ ಭೀತಿ ದೂರವಾಗಿತ್ತು. ಇದೀಗ ಬೆಂಗಳೂರಿನಲ್ಲಿ ಕಾಣಿಸಿಕೊಂಡಿರುವುದರಿಂದ ಮತ್ತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ.