ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8ರಿಂದ ಭಾರತ ಯೋಗ ಯಾತ್ರೆ

Last Updated 4 ಜನವರಿ 2018, 20:03 IST
ಅಕ್ಷರ ಗಾತ್ರ

ಬೆಂಗಳೂರು: ಆತ್ಮದರ್ಶನ ಯೋಗಾಶ್ರಮ ಇದೇ 8 ಮತ್ತು 9ರಂದು ದಯಾನಂದ ಸಾಗರ್‌ ಎಂಜಿನಿಯರಿಂಗ್‌ ಕಾಲೇಜಿನ ಸಭಾಂಗಣದಲ್ಲಿ ಭಾರತ ಯೋಗ ಯಾತ್ರೆ–2018 ಕಾರ್ಯಕ್ರಮ ಹಮ್ಮಿಕೊಂಡಿದೆ.

‘ಕವಳೆ ಮಠದ ಶಿವಾನಂದ ಸರಸ್ವತಿ ಸ್ವಾಮೀಜಿ, ಸತ್ಯಾನಂದ ಸ್ವಾಮೀಜಿ, ಬಿಹಾರ ಯೋಗ ವಿದ್ಯಾಲಯದ ನಿರಂಜನಾನಂದ ಸರಸ್ವತಿ ಸ್ವಾಮೀಜಿ ಹಾಗೂ ವಿಶ್ವ ಯೋಗ ಪೀಠದ ಸನ್ಯಾಸಿಗಳು ಪಾಲ್ಗೊಳ್ಳಲಿದ್ದಾರೆ’ ಎಂದು ಆಶ್ರಮ ಪ್ರಕಟಣೆಯಲ್ಲಿ ತಿಳಿಸಿದೆ.

ಎರಡು ದಿನಗಳೂ ಬೆಳಿಗ್ಗೆ 6.30ರಿಂದ 8.30ರವರೆಗೆ ’ಆಧ್ಯಾತ್ಮಿಕ ಜೀವನದೆಡೆಗೆ’ ಹಾಗೂ ಸಂಜೆ 6.30ರಿಂದ 8.30ರವರೆಗೆ ‘ನಿಮ್ಮನ್ನು ಅರಿಯಿರಿ–ದಿವ್ಯತ್ವ ಹೊಂದಿರಿ’ ಎಂಬ ಕಾರ್ಯಕ್ರಮ ಇರುತ್ತದೆ. 7ರಂದು ಸಂಜೆ 6.30ರಿಂದ 8.30ರವರೆಗೆ ಆತ್ಮದರ್ಶನ ಯೋಗಾಶ್ರಮದಲ್ಲಿ ‌ಕಾರ್ಯಕ್ರಮ ಇರುತ್ತದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT