<p><strong>ಬೆಂಗಳೂರು:</strong> ಅಸಲಿ ದಾಖಲೆಗಳನ್ನು ಪರಿಶೀಲಿಸದೆ, ಅಪರಿಚಿತರ ದಾಖಲೆಗಳನ್ನು ದೃಢೀಕರಣ ಮಾಡಿಕೊಟ್ಟ ಆರೋಪದಡಿ ವೈದ್ಯ ರಾಮಮೂರ್ತಿ ವಿರುದ್ಧ ಯಶವಂತಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.</p>.<p>ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಬಿಎಂಸಿಆರ್ಐ) ಸಹಾಯಕ ಪ್ರಾಧ್ಯಾಪಕರೂ ಆಗಿರುವ ರಾಮಮೂರ್ತಿ ವಿರುದ್ಧ ಯುಐಡಿ ಬೆಂಗಳೂರು ಪ್ರಾದೇಶಿಕ ಕಚೇರಿಯ ಉಪನಿರ್ದೇಶಕ ಅಶೋಕ್ ಲೆನಿನ್ ದೂರು ನೀಡಿದ್ದಾರೆ.</p>.<p>ಆಧಾರ್ ಕಾಯ್ದೆಯ ಸೆಕ್ಷನ್ 34 ಹಾಗೂ ವಂಚನೆ (ಐಪಿಸಿ 419, 420), ನಕಲಿ ದಾಖಲೆಗಳನ್ನು ಅಸಲಿ ಎಂದು ಬಳಸುವ (ಐಪಿಸಿ 471) ಆರೋಪದಡಿ ಎಫ್ಐಆರ್ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದರು.</p>.<p>‘ಕೆಲ ಸಾರ್ವಜನಿಕರ ವಾಸದ ಬಗ್ಗೆ ಅಸಲಿ ದಾಖಲೆಗಳನ್ನು ಪರಿಶೀಲಿಸದೆ ರಾಮಮೂರ್ತಿ ಅವರು ಗುರುತು ಹಾಗೂ ವಿಳಾಸದ ಪರಿಚಯ ಪತ್ರ ನೀಡಿದ್ದಾರೆ. ಆ ಪತ್ರ ಪಡೆದುಕೊಂಡ ಸಾರ್ವಜನಿಕರು, ಯಶವಂತಪುರದ ಆಧಾರ್ ನೋಂದಣಿ ಕೇಂದ್ರದ ಮೂಲಕ ಆಧಾರ್ ಸಂಖ್ಯೆ ಪಡೆದಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.</p>.<p>‘ಕೆಲ ವ್ಯಕ್ತಿಗಳ ಆಧಾರ್ ಸಂಖ್ಯೆ ಪರಿಶೀಲನೆ ವೇಳೆ, ಅವರು ನಕಲಿ ದಾಖಲೆಗಳನ್ನು ಅಸಲಿ ಎಂದು ಕೊಟ್ಟಿದ್ದು ಗೊತ್ತಾಗಿದೆ. ಇದಕ್ಕೆ ರಾಮಮೂರ್ತಿ ಸಹಕಾರ ನೀಡಿದ್ದಾರೆ’ ಎಂದು ದೂರಲಾಗಿದೆ.</p>.<p>ಆರ್ಟಿಒ ಕಚೇರಿಗೂ ಬಳಕೆ: ‘ವೈದ್ಯರು ನೀಡಿದ್ದ ದೃಢೀಕರಣ ದಾಖಲೆಗಳನ್ನು ಕೆಲ ಸಾರ್ವಜನಿಕರು, ಆರ್ಟಿಒ ಕಚೇರಿಗಳಿಗೂ ಕೊಟ್ಟು ವಂಚಿಸಿದ್ದಾರೆ. ವಾಹನ ನೋಂದಣಿ, ಚಾಲನಾ ಪರವಾನಗಿ ಪಡೆದಿದ್ದಾರೆ’ ಎಂದು ಪೊಲೀಸರು ತಿಳಿಸಿದರು.</p>.<p>‘ಈ ಆರೋಪದ ಬಗ್ಗೆ ಯುಐಡಿ ಅಧಿಕಾರಿಗಳು ಮತ್ತಷ್ಟು ಮಾಹಿತಿ ನೀಡಬೇಕಿದೆ. ಅದು ಕೈ ಸೇರಿದ ಬಳಿಕ ತನಿಖೆ ಚುರುಕುಗೊಳಿಸುತ್ತೇವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಅಸಲಿ ದಾಖಲೆಗಳನ್ನು ಪರಿಶೀಲಿಸದೆ, ಅಪರಿಚಿತರ ದಾಖಲೆಗಳನ್ನು ದೃಢೀಕರಣ ಮಾಡಿಕೊಟ್ಟ ಆರೋಪದಡಿ ವೈದ್ಯ ರಾಮಮೂರ್ತಿ ವಿರುದ್ಧ ಯಶವಂತಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.</p>.<p>ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಬಿಎಂಸಿಆರ್ಐ) ಸಹಾಯಕ ಪ್ರಾಧ್ಯಾಪಕರೂ ಆಗಿರುವ ರಾಮಮೂರ್ತಿ ವಿರುದ್ಧ ಯುಐಡಿ ಬೆಂಗಳೂರು ಪ್ರಾದೇಶಿಕ ಕಚೇರಿಯ ಉಪನಿರ್ದೇಶಕ ಅಶೋಕ್ ಲೆನಿನ್ ದೂರು ನೀಡಿದ್ದಾರೆ.</p>.<p>ಆಧಾರ್ ಕಾಯ್ದೆಯ ಸೆಕ್ಷನ್ 34 ಹಾಗೂ ವಂಚನೆ (ಐಪಿಸಿ 419, 420), ನಕಲಿ ದಾಖಲೆಗಳನ್ನು ಅಸಲಿ ಎಂದು ಬಳಸುವ (ಐಪಿಸಿ 471) ಆರೋಪದಡಿ ಎಫ್ಐಆರ್ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದರು.</p>.<p>‘ಕೆಲ ಸಾರ್ವಜನಿಕರ ವಾಸದ ಬಗ್ಗೆ ಅಸಲಿ ದಾಖಲೆಗಳನ್ನು ಪರಿಶೀಲಿಸದೆ ರಾಮಮೂರ್ತಿ ಅವರು ಗುರುತು ಹಾಗೂ ವಿಳಾಸದ ಪರಿಚಯ ಪತ್ರ ನೀಡಿದ್ದಾರೆ. ಆ ಪತ್ರ ಪಡೆದುಕೊಂಡ ಸಾರ್ವಜನಿಕರು, ಯಶವಂತಪುರದ ಆಧಾರ್ ನೋಂದಣಿ ಕೇಂದ್ರದ ಮೂಲಕ ಆಧಾರ್ ಸಂಖ್ಯೆ ಪಡೆದಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.</p>.<p>‘ಕೆಲ ವ್ಯಕ್ತಿಗಳ ಆಧಾರ್ ಸಂಖ್ಯೆ ಪರಿಶೀಲನೆ ವೇಳೆ, ಅವರು ನಕಲಿ ದಾಖಲೆಗಳನ್ನು ಅಸಲಿ ಎಂದು ಕೊಟ್ಟಿದ್ದು ಗೊತ್ತಾಗಿದೆ. ಇದಕ್ಕೆ ರಾಮಮೂರ್ತಿ ಸಹಕಾರ ನೀಡಿದ್ದಾರೆ’ ಎಂದು ದೂರಲಾಗಿದೆ.</p>.<p>ಆರ್ಟಿಒ ಕಚೇರಿಗೂ ಬಳಕೆ: ‘ವೈದ್ಯರು ನೀಡಿದ್ದ ದೃಢೀಕರಣ ದಾಖಲೆಗಳನ್ನು ಕೆಲ ಸಾರ್ವಜನಿಕರು, ಆರ್ಟಿಒ ಕಚೇರಿಗಳಿಗೂ ಕೊಟ್ಟು ವಂಚಿಸಿದ್ದಾರೆ. ವಾಹನ ನೋಂದಣಿ, ಚಾಲನಾ ಪರವಾನಗಿ ಪಡೆದಿದ್ದಾರೆ’ ಎಂದು ಪೊಲೀಸರು ತಿಳಿಸಿದರು.</p>.<p>‘ಈ ಆರೋಪದ ಬಗ್ಗೆ ಯುಐಡಿ ಅಧಿಕಾರಿಗಳು ಮತ್ತಷ್ಟು ಮಾಹಿತಿ ನೀಡಬೇಕಿದೆ. ಅದು ಕೈ ಸೇರಿದ ಬಳಿಕ ತನಿಖೆ ಚುರುಕುಗೊಳಿಸುತ್ತೇವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>