ಈ ಬಗ್ಗೆ ಶುಕ್ರವಾರ ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ತಡೆಯಾಜ್ಞೆ ತೆರವು ಗೊಳಿಸಿದ ಪ್ರತಿಯನ್ನು ಶಾಸಕರು ತಂದು ಕ್ಷೇತ್ರದ ತಹಶೀಲ್ದಾರ್ ಅವರಿಗೆ ನೀಡಿ ಸಾಗುವಳಿ ಚೀಟಿ ವಿತರಿಸಲು ಆದೇಶ ನೀಡಿದ ಫಲವಾಗಿ ಸುಮಾರು 380 ಸಾಗುವಳಿ ಚೀಟಿ ನೀಡಿರುತ್ತಾರೆ. ಆದರೆ, ಈ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರು ಅನಗತ್ಯ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ದೂರಿದ್ದಾರೆ.