<p><strong>ಬೆಂಗಳೂರು: </strong>ಇಲ್ಲಿನ ಬೆಂಗಳೂರು ಟರ್ಫ್ ಕ್ಲಬ್ನಲ್ಲಿ (ಬಿಟಿಸಿ) ರೇಸಿಂಗ್ ಚಟುವಟಿಕೆ ಆರಂಭಗೊಂಡದ್ದು ಆಸಕ್ತರ ಕುತೂಹಲ ಕೆರಳಿಸಿದೆ. ಆದರೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಗುಮ್ಮ ಇಲ್ಲಿ ಹಲವರಲ್ಲಿ ಆತಂಕ ಮೂಡಿಸಿತ್ತು.</p>.<p>ಸರ್ಕಾರ ಮತ್ತು ಬಿಟಿಸಿ ನಡುವಿನ ಹಗ್ಗ ಜಗ್ಗಾಟದ ಕಾರಣ ನಾಲ್ಕು ತಿಂಗಳಿಂದ ರೇಸಿಂಗ್ ಚಟುವಟಿಕೆ ನಡೆದಿರಲಿಲ್ಲ. ಬಿಟಿಸಿಯಲ್ಲಿ ರೇಸ್ ನಡೆಸಲು ಸರ್ಕಾರ ಎರಡು ದಿನಗಳ ಹಿಂದೆ ಅನುಮತಿ ನೀಡಿತ್ತು. ಶನಿವಾರ ನಡೆದ ರೇಸ್ನಲ್ಲಿ ಒಟ್ಟು ಒಂಬತ್ತು ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.</p>.<p>ಜಿಎಸ್ಟಿ ಅನುಸಾರ ಬಿಟಿಸಿ ವಹಿವಾಟಿನಿಂದ ಬರುವ ಒಟ್ಟು ಆದಾಯದ ಶೇ 28 ಅನ್ನು ಸರ್ಕಾರಕ್ಕೆ ಪಾವತಿಸಬೇಕಾಗಿದೆ. ಈ ಹಿಂದೆ ಸೇವೆ ಮತ್ತು ಮನರಂಜನೆ ತೆರಿಗೆ ಮಾತ್ರವಲ್ಲದೆ ಶೇ 8ರಷ್ಟು ಬೆಟ್ಟಿಂಗ್ ತೆರಿಗೆಯನ್ನು ಸರ್ಕಾರಕ್ಕೆ ನೀಡಿತ್ತು. ಹೊಸ ತೆರಿಗೆ ಮಾದರಿಯ ಪ್ರಕಾರ ಎಷ್ಟು ಪಾವತಿಸಬೇಕು ಎಂಬುದರ ಬಗ್ಗೆ ಈಗ ಲೆಕ್ಕಾಚಾರ ನಡೆಯುತ್ತಿದೆ.</p>.<p>‘ಒಂದೆಡೆ ಕುಳಿತು ಈ ಬಗ್ಗೆ ಚರ್ಚಿಸಬೇಕಾಗಿದೆ. ಹೊಸ ಪದ್ಧತಿಯಿಗೆ ಒಗ್ಗಿಕೊಳ್ಳಲು ಬಿಟಿಸಿ ಪ್ರಯತ್ನಿಸಲಿದೆ’ ಎಂದು ಅಧ್ಯಕ್ಷ ಹರಿಮೋಹನ ನಾಯ್ಡು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಇಲ್ಲಿನ ಬೆಂಗಳೂರು ಟರ್ಫ್ ಕ್ಲಬ್ನಲ್ಲಿ (ಬಿಟಿಸಿ) ರೇಸಿಂಗ್ ಚಟುವಟಿಕೆ ಆರಂಭಗೊಂಡದ್ದು ಆಸಕ್ತರ ಕುತೂಹಲ ಕೆರಳಿಸಿದೆ. ಆದರೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಗುಮ್ಮ ಇಲ್ಲಿ ಹಲವರಲ್ಲಿ ಆತಂಕ ಮೂಡಿಸಿತ್ತು.</p>.<p>ಸರ್ಕಾರ ಮತ್ತು ಬಿಟಿಸಿ ನಡುವಿನ ಹಗ್ಗ ಜಗ್ಗಾಟದ ಕಾರಣ ನಾಲ್ಕು ತಿಂಗಳಿಂದ ರೇಸಿಂಗ್ ಚಟುವಟಿಕೆ ನಡೆದಿರಲಿಲ್ಲ. ಬಿಟಿಸಿಯಲ್ಲಿ ರೇಸ್ ನಡೆಸಲು ಸರ್ಕಾರ ಎರಡು ದಿನಗಳ ಹಿಂದೆ ಅನುಮತಿ ನೀಡಿತ್ತು. ಶನಿವಾರ ನಡೆದ ರೇಸ್ನಲ್ಲಿ ಒಟ್ಟು ಒಂಬತ್ತು ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.</p>.<p>ಜಿಎಸ್ಟಿ ಅನುಸಾರ ಬಿಟಿಸಿ ವಹಿವಾಟಿನಿಂದ ಬರುವ ಒಟ್ಟು ಆದಾಯದ ಶೇ 28 ಅನ್ನು ಸರ್ಕಾರಕ್ಕೆ ಪಾವತಿಸಬೇಕಾಗಿದೆ. ಈ ಹಿಂದೆ ಸೇವೆ ಮತ್ತು ಮನರಂಜನೆ ತೆರಿಗೆ ಮಾತ್ರವಲ್ಲದೆ ಶೇ 8ರಷ್ಟು ಬೆಟ್ಟಿಂಗ್ ತೆರಿಗೆಯನ್ನು ಸರ್ಕಾರಕ್ಕೆ ನೀಡಿತ್ತು. ಹೊಸ ತೆರಿಗೆ ಮಾದರಿಯ ಪ್ರಕಾರ ಎಷ್ಟು ಪಾವತಿಸಬೇಕು ಎಂಬುದರ ಬಗ್ಗೆ ಈಗ ಲೆಕ್ಕಾಚಾರ ನಡೆಯುತ್ತಿದೆ.</p>.<p>‘ಒಂದೆಡೆ ಕುಳಿತು ಈ ಬಗ್ಗೆ ಚರ್ಚಿಸಬೇಕಾಗಿದೆ. ಹೊಸ ಪದ್ಧತಿಯಿಗೆ ಒಗ್ಗಿಕೊಳ್ಳಲು ಬಿಟಿಸಿ ಪ್ರಯತ್ನಿಸಲಿದೆ’ ಎಂದು ಅಧ್ಯಕ್ಷ ಹರಿಮೋಹನ ನಾಯ್ಡು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>