<p><strong>ಸುರತ್ಕಲ್: </strong>ದೀಪಕ್ ರಾವ್ ದೇಶ ಸೇವೆಗಾಗಿ ಸಂಘಟನೆಗೆ ಬಂದಿದ್ದರು, ಅವರು ದೇಶದ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದರು. ಅವರ ಆಸೆಗಳು ಬತ್ತಬಾರದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.</p>.<p>ಭಾನುವಾರ ಸುರತ್ಕಲ್ ಸಮೀಪದ ಕೃಷ್ಣಾಪುರ 3ನೇ ಬ್ಲಾಕ್ನ ನಾರಾಯಣ ಗುರು ಶಾಲಾ ಮೈದಾನದಲ್ಲಿ ಮೃತ ದೀಪಕ್ ಅವರಿಗೆ ಏರ್ಪಡಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.</p>.<p>ದೀಪಕ್ ಅವರ ಆಸಗಳನ್ನು ಈಡೇರಿಸಲು ನಾವು ಮುಂದಾಗಬೇಕು. ಅಗಲೇ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಸಂಘರ್ಷಗಳಿಂದ ಸಾಮರಸ್ಯ ಕದಡುತ್ತದೆಯೇ ಹೊರತು ಬಾಂಧವ್ಯಗಳು ಬೆಸೆಯುವುದಿಲ್ಲ. ನಾವೆಲ್ಲರೂ ಜತೆಯಾಗಿ ಸೇವೆಯ ಮೂಲಕ ಸಾಮರಸ್ಯ ಬಲಪಡಿಸೋಣ ಎಂಧರು.</p>.<p>ಇದೇ ವೇಳೆ ದೀಪಕ್ ಕಲಿತ ಶಾಲೆಯ ದೈಹಿಕ ಶಿಕ್ಷಕ ಸುಂದರ್ ಮಾತನಾಡಿ, ದೀಪಕ್ ಶ್ರೀಮಂತನಲ್ಲ. ಆದರೂ ಶಾಲಾ ಜೀವನದಲ್ಲಿ ಪ್ರತಿಯೊಂದು ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದ. ಅಂತಹ ಒಬ್ಬ ವಿದ್ಯಾರ್ಥಿ ಇಲ್ಲ ಎಂದು ಹೇಳುವುದನ್ನು ಊಹಿಸಲೂ ಸಾಧ್ಯವಿಲ್ಲ.</p>.<p>ಅವನ ಸಹಾಯ ಮಾಡುವ ಗುಣವೇ ಅವನ ವ್ಯಕ್ತಿತ್ವವನ್ನು ತೋರಿಸುತ್ತದೆ. ಅಂತಹ ಒಳ್ಳೆಯ ಹಳೆ ವಿದ್ಯಾರ್ಥಿಯನ್ನು ಕಳೆದುಕೊಂಡ ನೋವನ್ನು ಮರಿಯಲು ಸಾಧ್ಯವಿಲ್ಲ ಎಂದರು. ಈ ವೇಳೆ ಬಜರಂಗದಳ ಪ್ರಾಂತ ಸಂಚಾಲಕ ಶರಣ್ ಪಂಪ್ವೆಲ್, ಮಾಜಿ ಸಚಿವ ಕೃಷ್ಣ ಪಾಲೇಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರತ್ಕಲ್: </strong>ದೀಪಕ್ ರಾವ್ ದೇಶ ಸೇವೆಗಾಗಿ ಸಂಘಟನೆಗೆ ಬಂದಿದ್ದರು, ಅವರು ದೇಶದ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದರು. ಅವರ ಆಸೆಗಳು ಬತ್ತಬಾರದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.</p>.<p>ಭಾನುವಾರ ಸುರತ್ಕಲ್ ಸಮೀಪದ ಕೃಷ್ಣಾಪುರ 3ನೇ ಬ್ಲಾಕ್ನ ನಾರಾಯಣ ಗುರು ಶಾಲಾ ಮೈದಾನದಲ್ಲಿ ಮೃತ ದೀಪಕ್ ಅವರಿಗೆ ಏರ್ಪಡಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.</p>.<p>ದೀಪಕ್ ಅವರ ಆಸಗಳನ್ನು ಈಡೇರಿಸಲು ನಾವು ಮುಂದಾಗಬೇಕು. ಅಗಲೇ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಸಂಘರ್ಷಗಳಿಂದ ಸಾಮರಸ್ಯ ಕದಡುತ್ತದೆಯೇ ಹೊರತು ಬಾಂಧವ್ಯಗಳು ಬೆಸೆಯುವುದಿಲ್ಲ. ನಾವೆಲ್ಲರೂ ಜತೆಯಾಗಿ ಸೇವೆಯ ಮೂಲಕ ಸಾಮರಸ್ಯ ಬಲಪಡಿಸೋಣ ಎಂಧರು.</p>.<p>ಇದೇ ವೇಳೆ ದೀಪಕ್ ಕಲಿತ ಶಾಲೆಯ ದೈಹಿಕ ಶಿಕ್ಷಕ ಸುಂದರ್ ಮಾತನಾಡಿ, ದೀಪಕ್ ಶ್ರೀಮಂತನಲ್ಲ. ಆದರೂ ಶಾಲಾ ಜೀವನದಲ್ಲಿ ಪ್ರತಿಯೊಂದು ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದ. ಅಂತಹ ಒಬ್ಬ ವಿದ್ಯಾರ್ಥಿ ಇಲ್ಲ ಎಂದು ಹೇಳುವುದನ್ನು ಊಹಿಸಲೂ ಸಾಧ್ಯವಿಲ್ಲ.</p>.<p>ಅವನ ಸಹಾಯ ಮಾಡುವ ಗುಣವೇ ಅವನ ವ್ಯಕ್ತಿತ್ವವನ್ನು ತೋರಿಸುತ್ತದೆ. ಅಂತಹ ಒಳ್ಳೆಯ ಹಳೆ ವಿದ್ಯಾರ್ಥಿಯನ್ನು ಕಳೆದುಕೊಂಡ ನೋವನ್ನು ಮರಿಯಲು ಸಾಧ್ಯವಿಲ್ಲ ಎಂದರು. ಈ ವೇಳೆ ಬಜರಂಗದಳ ಪ್ರಾಂತ ಸಂಚಾಲಕ ಶರಣ್ ಪಂಪ್ವೆಲ್, ಮಾಜಿ ಸಚಿವ ಕೃಷ್ಣ ಪಾಲೇಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>