ಮನೆಗಳಿಲ್ಲದೆ ರಸ್ತೆಯ ಬದಿಯಲ್ಲಿ ಗುಡಿಸಲು ಕಟ್ಟಿಕೊಂಡು ಮಳೆಯ ಸಂದರ್ಭದಲ್ಲಿ ಯಾತನೆಪಡುವ ಜನರಿಗೆ ಮನೆ ಕಟ್ಟಿಕೊಡಬೇಕು ಎಂಬುದು ನನಗೆ ಯಾವಾಗಲೂ ಅನಿಸುತ್ತದೆ. ಆ ಜನರ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುತ್ತೇನೆ. ದಿನಕ್ಕೊಂದು ಊರಿಗೆ ಹೋಗುವ ಅಲೆಮಾರಿ ಜನರಿಗೆ ಎಲ್ಲರಂತೆ ವ್ಯವಸ್ಥಿತವಾಗಿ ಬದುಕುವುದಕ್ಕೆ ಹಣಕಾಸಿನ ಸಹಾಯ ನೀಡುತ್ತೇನೆ.