ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಮಲಹಾಸನ್, ‘ಕಲಾಂ ಅವರು ನನ್ನ ಪಾಲಿಗೆ ಪ್ರಮುಖ ವ್ಯಕ್ತಿ. ಅವರ ದೇಶಭಕ್ತಿ ಮತ್ತು ಮಹತ್ವಾಕಾಂಕ್ಷೆಗಳಿಂದ ಆಕರ್ಷಿತನಾಗಿದ್ದೆ. ಅವರ ಮನೆಗೆ ಭೇಟಿ ನೀಡಿದ್ದರಲ್ಲಿ ರಾಜಕೀಯ ಉದ್ದೇಶವಿಲ್ಲ. ಶಾಲೆ ಭೇಟಿಯ ಹಿಂದೆಯೂ ರಾಜಕೀಯವಿಲ್ಲ. ನನ್ನನ್ನು ಶಾಲೆಗೆ ಹೋಗದಂತೆ ತಡೆಯಬಹುದೇ ವಿನಃ ಕಲಿಯದಂತೆ ತಡೆಯಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.