ಉದಯೋನ್ಮುಖ ಗಾಯಕರಾದ ಚಿನ್ಮಯ ಮತ್ತು ಅನುರಾಧ ಭಟ್ ಅವರು ಯುಗಳ ಗೀತೆಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ಇದಾದ ಬಳಿಕ ಅರ್ಜುನ ಜನ್ಯ ಅವರು ಹೆಬ್ಬುಲಿ, ಮುಕುಂದ ಮುರಾರಿ ಸಿನಿಮಾದ ಹಾಡು ಹೇಳಿದರು. ನೀ ನೀರಿಗೆ ಬಾರೆ ಚೆನ್ನಿ, ಬಿಂದಿಗೆ ತೊಗೊಂಡು, ನಾ ನೋಡಾಕ ಬರ್ತೀನಿ.. ನಿನ್ನ ಹಸುವಾ ಹೊಡ್ಕೊಂಡು.. ಹಾಡನ್ನು ಸಂಗೀತ ಪರಿಕರಗಳ ಮೂಲಕ ಪ್ರಸ್ತುತಪಡಿಸಿ, ನೆರೆದ ಜನರನ್ನು ಮಂತ್ರ ಮುಗ್ಧರನ್ನಾಗಿಸಿದರು.