<p><strong>ಸಿಂಗಾಪುರ:</strong> ತಂದೆ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಿದ ಹಂತಕರನ್ನು ನಾನು ಮತ್ತು ನನ್ನ ಸಹೋದರಿ ಪ್ರಿಯಾಂಕ ಗಾಂಧಿ ಕ್ಷಮಿಸಿರುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.</p>.<p>ಸಿಂಗಾಪುರದಲ್ಲಿನ ಐಐಎಂನ ಹಳೆಯ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಕೇಳಿದ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರಿಸಿದರು.</p>.<p>ರಾಜೀವ್ ಗಾಂಧಿ ಅವರ ಸಾವಿಗೆ ಕಾರಣರಾದವರನ್ನು ಕ್ಷಮಿಸಿದ್ದೀರಾ ಎಂಬ ಪ್ರಶ್ನೆಗೆ, ‘ತಂದೆಯ ಹತ್ಯೆ ಬಹಳಷ್ಟು ವರ್ಷಗಳು ನಮ್ಮನ್ನು ಕಾಡಿದೆ. ತುಂಬ ಅಸಮಾಧಾನ ಹಾಗೂ ಕೋಪದಲ್ಲಿದ್ದೆವು. ಆದರೆ, ಅದು ಹೇಗೋ ಪೂರ್ಣವಾಗಿ...ಸಂಪೂರ್ಣವಾಗಿ ನಾನು ಮತ್ತು ಪ್ರಿಯಾಂಕ ಅವರನ್ನು ಕ್ಷಮಿಸಿದ್ದೇವೆ’ ಎಂದಿದ್ದಾರೆ.</p>.<p>‘ಪ್ರಭಾಕರನ್ ಸಾವಿನ ಸುದ್ದಿಯನ್ನು ಟಿವಿಯಲ್ಲಿ ನೋಡುತ್ತಿದ್ದಾಗ ಎರಡು ಭಾವನೆಗಳು ಮನಸ್ಸಿನಲ್ಲಿ ಹಾದು ಹೋದವು. ಒಂದು, ಈ ವ್ಯಕ್ತಿಯನ್ನು ಏಕೆ ಹೀಗೆ ಅವಮಾನಿಸುತ್ತಿದ್ದಾರೆ. ಮತ್ತೊಂದು, ಜನರನ್ನು ದ್ವೇಷಿಸುವುದು, ಹಿಂಸೆಯನ್ನು ಸಹಿಸುವುದು ಸಾಧ್ಯವಾಗದು ಎಂಬುದು. ಅದು ಯಾರೇ ಆದರೂ ಆತನೂ ಮನುಷ್ಯ. ಆತನ ಹಿಂದೆ ಕುಟುಂಬವಿದೆ, ಆತನಿಗಾಗಿ ಮಗುವೊಂದು ಅಳುತ್ತಿರುತ್ತದೆ...ಈ ಎಲ್ಲವೂ ಮನಸ್ಸನ್ನು ಘಾಸಿಗೊಳಿಸಿತು’ ಎಂದು ಹೇಳಿಕೊಂಡಿದ್ದಾರೆ.</p>.<p>ಶ್ರೀಲಂಕಾದ ಪ್ರಭಾಕರನ್ ನೇತೃತ್ವದ ಎಲ್ಟಿಟಿಇ ಉಗ್ರ ಸಂಘಟನೆಯ ಆತ್ಮಹತ್ಯಾ ಮಹಿಳಾ ಬಾಂಬರ್ ತಮಿಳುನಾಡಿನ ಚುನಾವಣಾ ಪ್ರಚಾರ ಕಾರ್ಯದಲ್ಲಿ ಬಾಂಬ್ ಸ್ಫೋಟಿಸಿಕೊಂಡಳು. 1991ರ ಮೇ 21ರ ಆ ಬಾಂಬ್ ಸ್ಫೋಟದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮೃತಪಟ್ಟರು.</p>.<p>* ನನ್ನ ತಂದೆ ಸಾವಿಗೀಡಾಗುವುದು ನಮಗೆ ತಿಳಿದಿತ್ತು. ನನ್ನ ಅಜ್ಜಿಯೂ ಸಾಯುತ್ತಾರೆಂದು ನಮಗೆ ತಿಳಿದಿತ್ತು. ರಾಜಕೀಯದಲ್ಲಿ ಕೆಲವು ಶಕ್ತಿಗಳೊಂದಿಗೆ ಹೋರಾಡುವಾಗ, ಕೆಲವು ವಿಷಯಗಳ ಪರವಾಗಿ ನಿಂತಾಗ ನೀವು ಸಾಯಬೇಕಾಗುತ್ತದೆ. ಇದು ಸ್ಪಷ್ಟಗೊಂಡಿರುವುದೇ..<br /> <em><strong>– ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂಗಾಪುರ:</strong> ತಂದೆ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಿದ ಹಂತಕರನ್ನು ನಾನು ಮತ್ತು ನನ್ನ ಸಹೋದರಿ ಪ್ರಿಯಾಂಕ ಗಾಂಧಿ ಕ್ಷಮಿಸಿರುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.</p>.<p>ಸಿಂಗಾಪುರದಲ್ಲಿನ ಐಐಎಂನ ಹಳೆಯ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಕೇಳಿದ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರಿಸಿದರು.</p>.<p>ರಾಜೀವ್ ಗಾಂಧಿ ಅವರ ಸಾವಿಗೆ ಕಾರಣರಾದವರನ್ನು ಕ್ಷಮಿಸಿದ್ದೀರಾ ಎಂಬ ಪ್ರಶ್ನೆಗೆ, ‘ತಂದೆಯ ಹತ್ಯೆ ಬಹಳಷ್ಟು ವರ್ಷಗಳು ನಮ್ಮನ್ನು ಕಾಡಿದೆ. ತುಂಬ ಅಸಮಾಧಾನ ಹಾಗೂ ಕೋಪದಲ್ಲಿದ್ದೆವು. ಆದರೆ, ಅದು ಹೇಗೋ ಪೂರ್ಣವಾಗಿ...ಸಂಪೂರ್ಣವಾಗಿ ನಾನು ಮತ್ತು ಪ್ರಿಯಾಂಕ ಅವರನ್ನು ಕ್ಷಮಿಸಿದ್ದೇವೆ’ ಎಂದಿದ್ದಾರೆ.</p>.<p>‘ಪ್ರಭಾಕರನ್ ಸಾವಿನ ಸುದ್ದಿಯನ್ನು ಟಿವಿಯಲ್ಲಿ ನೋಡುತ್ತಿದ್ದಾಗ ಎರಡು ಭಾವನೆಗಳು ಮನಸ್ಸಿನಲ್ಲಿ ಹಾದು ಹೋದವು. ಒಂದು, ಈ ವ್ಯಕ್ತಿಯನ್ನು ಏಕೆ ಹೀಗೆ ಅವಮಾನಿಸುತ್ತಿದ್ದಾರೆ. ಮತ್ತೊಂದು, ಜನರನ್ನು ದ್ವೇಷಿಸುವುದು, ಹಿಂಸೆಯನ್ನು ಸಹಿಸುವುದು ಸಾಧ್ಯವಾಗದು ಎಂಬುದು. ಅದು ಯಾರೇ ಆದರೂ ಆತನೂ ಮನುಷ್ಯ. ಆತನ ಹಿಂದೆ ಕುಟುಂಬವಿದೆ, ಆತನಿಗಾಗಿ ಮಗುವೊಂದು ಅಳುತ್ತಿರುತ್ತದೆ...ಈ ಎಲ್ಲವೂ ಮನಸ್ಸನ್ನು ಘಾಸಿಗೊಳಿಸಿತು’ ಎಂದು ಹೇಳಿಕೊಂಡಿದ್ದಾರೆ.</p>.<p>ಶ್ರೀಲಂಕಾದ ಪ್ರಭಾಕರನ್ ನೇತೃತ್ವದ ಎಲ್ಟಿಟಿಇ ಉಗ್ರ ಸಂಘಟನೆಯ ಆತ್ಮಹತ್ಯಾ ಮಹಿಳಾ ಬಾಂಬರ್ ತಮಿಳುನಾಡಿನ ಚುನಾವಣಾ ಪ್ರಚಾರ ಕಾರ್ಯದಲ್ಲಿ ಬಾಂಬ್ ಸ್ಫೋಟಿಸಿಕೊಂಡಳು. 1991ರ ಮೇ 21ರ ಆ ಬಾಂಬ್ ಸ್ಫೋಟದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮೃತಪಟ್ಟರು.</p>.<p>* ನನ್ನ ತಂದೆ ಸಾವಿಗೀಡಾಗುವುದು ನಮಗೆ ತಿಳಿದಿತ್ತು. ನನ್ನ ಅಜ್ಜಿಯೂ ಸಾಯುತ್ತಾರೆಂದು ನಮಗೆ ತಿಳಿದಿತ್ತು. ರಾಜಕೀಯದಲ್ಲಿ ಕೆಲವು ಶಕ್ತಿಗಳೊಂದಿಗೆ ಹೋರಾಡುವಾಗ, ಕೆಲವು ವಿಷಯಗಳ ಪರವಾಗಿ ನಿಂತಾಗ ನೀವು ಸಾಯಬೇಕಾಗುತ್ತದೆ. ಇದು ಸ್ಪಷ್ಟಗೊಂಡಿರುವುದೇ..<br /> <em><strong>– ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>