ಮಾನವನ ಬೆಳವಣಿಗೆಯ ಹಾದಿಯಲ್ಲಿ ಬಹುಪಾಲು ಜನರು ಬೆವರು ಸುರಿಸಿ ಸೃಷ್ಟಿ ಮಾಡಿದ ಸಂಪತ್ತನ್ನು ಕೆಲವೇ ಮಂದಿ ಅನುಭೋಗಿಸುತ್ತಿದ್ದ ಶೋಷಣೆಯ ಸಮಾಜದ ಬದಲಾವಣೆಗೆ ಕಾರಣರಾಗಿ ಇತಿಹಾಸ ಸೃಷ್ಟಿಸಿದ ಲೆನಿನ್ರಂಥ ಮಾನವತಾವಾದಿಗಳನ್ನು ‘ಕ್ರೂರಿ, ನಿರಂಕುಶಾಧಿಕಾರಿ, ಕೊಲೆಗಾರ’ ಎಂದು ಬಿಂಬಿಸಿರುವುದು ತುಳಿತಕ್ಕೊಳಗಾದವರ ಬಗ್ಗೆ ಗುಹಾ ಅವರಿಗಿರುವ ಮನೋಭಾವವನ್ನು ತೋರಿಸುತ್ತದೆ. ಸಮಾಜದ ಕೆಳಸ್ತರದ ಜನರ ದಯನೀಯ ಬದುಕಿನ ಬಗ್ಗೆ ಅವರ ತಾತ್ಸಾರ ಧೋರಣೆಯು ಲೇಖನದಲ್ಲಿ (ಪ್ರ.ವಾ., ಮಾ.16) ಪ್ರತಿಫಲಿಸಿದೆ. ಸಮಾಜದ ಮೇಲುಸ್ತರದ ಜನರ ಮೇಲಿನ ಅವರ ಪ್ರೀತಿಯನ್ನು ಹೊರಗೆಡಹುತ್ತದೆ.