<p><strong>ಇಸ್ಲಾಮಾಬಾದ್ </strong>: ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯ (ಸಿಒಎ) ರಚನೆಗೆ ನಿರಾಕರಿಸಿದ ನಂತರದ ಅವಧಿಯಲ್ಲೇ ಭಾರತವು ಕಿಶನ್ಗಂಗಾ ಜಲವಿದ್ಯುತ್ ಯೋಜನೆಯನ್ನು ಪೂರ್ಣಗೊಳಿಸಿದೆ ಎಂದು ವಿಶ್ವಬ್ಯಾಂಕ್ಗೆ ಪಾಕಿಸ್ತಾನ ಮಾಹಿತಿ ನೀಡಿದೆ.</p>.<p>ಕಿಶನ್ಗಂಗಾ, ರಾಟ್ಲೆ, ಪಕಲ್ ದುಲ್, ಮಿಯಾರ್ ಹಾಗೂ ಕಲ್ನೈ ಜಲವಿದ್ಯುತ್ ಘಟಕಗಳ ವಿನ್ಯಾಸದ ಕುರಿತು ಕಳವಳ ವ್ಯಕ್ತಪಡಿಸಿರುವ ಪಾಕಿಸ್ತಾನ, ಸಿಒಎ ರಚನೆ ಮಾಡಬೇಕು ಎಂದು 2016ರಲ್ಲಿ ವಿಶ್ವಬ್ಯಾಂಕ್ಗೆ ಮನವಿ ಮಾಡಿತ್ತು. ವಿಶ್ವಬ್ಯಾಂಕ್ ಈ ಮನವಿಯನ್ನು ಪುರಸ್ಕರಿಸಿರಲಿಲ್ಲ. ಪಾಕಿಸ್ತಾನದ ಬೇಡಿಕೆಗೆ ಪ್ರತಿಯಾಗಿ, ಈ ವಿಚಾರದಲ್ಲಿ ಪರಿಶೀಲಿಸಲು ತಟಸ್ಥ ರಾಷ್ಟ್ರಗಳ ತಜ್ಞರನ್ನು ನೇಮಿಸಬೇಕು ಎಂದು ಭಾರತ ಆಗ್ರಹಿಸಿತ್ತು.</p>.<p>‘ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಭಾರತ ಉಲ್ಲಂಘಿಸಿದೆ. ಒಪ್ಪಂದದ ಮಧ್ಯವರ್ತಿಯಾದ ವಿಶ್ವಬ್ಯಾಂಕ್, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪಾಕಿಸ್ತಾನ ಆಗ್ರಹಿಸಿದೆ’ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.</p>.<p>ಪಾಕಿಸ್ತಾನ ಇಂಧನ ಸಚಿವಾಲಯದ ವಿದ್ಯುತ್ ವಿಭಾಗವು ವಿಶ್ವಬ್ಯಾಂಕ್ನ ಉಪಾಧ್ಯಕ್ಷರಿಗೆ ಇದೇ ವಾರದಲ್ಲಿ ವರದಿ ರವಾನಿಸಿದೆ. ‘ಭಾರತವು ಯೋಜನೆ ಪೂರ್ಣಗೊಳಿಸಿದ್ದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ವರದಿಯಲ್ಲಿ ವಿವರಿಸಲಾಗಿದೆ.</p>.<p>‘ಭಾರತದಲ್ಲಿ ನಡೆಯುತ್ತಿರುವ ಹಲವು ಯೋಜನೆಗಳ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಲು ಅವಕಾಶ ಸಿಗದ ಕಾರಣ ವಿಶ್ವಬ್ಯಾಂಕ್ಗೆ ಮಾಹಿತಿ ರವಾನಿಸಲಾಗಿದೆ’ ಎಂದು ಪತ್ರದಲ್ಲಿ ಹೇಳಲಾಗಿದೆ.</p>.<p>ಸುಮ್ಮನೆ ಕೂರುವುದಿಲ್ಲ: ಪಾಕಿಸ್ತಾನದ ಮುಂದಿನ ನಡೆಯ ಕುರಿತು ಸ್ಪಷ್ಟಪಡಿಸಿರುವ ಪಾಕ್ ಅಧಿಕಾರಿಗಳು, ‘ನಾವು ಸುಮ್ಮನೆ ಕೂರುವುದಿಲ್ಲ. ಈ ವಿಚಾರವಾಗಿ ತಾರ್ಕಿಕ ಪರಿಹಾರ ಕಂಡುಕೊಳ್ಳುತ್ತೇವೆ’ ಎಂದಿದ್ದಾರೆ.</p>.<p>‘ಪಾಕಿಸ್ತಾನ ಯಾವ ವಿನ್ಯಾಸಕ್ಕೆ ವಿರೋಧ ವ್ಯಕ್ತಪಡಿಸಿತ್ತೋ, ಅದೇ ವಿನ್ಯಾಸದ ಪ್ರಕಾರ ಭಾರತವು ಘಟಕಗಳ ನಿರ್ಮಾಣವನ್ನು ಪೂರ್ಣಗೊಳಿಸಿದೆ ಎಂಬ ವರದಿ ಕಳೆದ ಆಗಸ್ಟ್ನಲ್ಲೇ ನಮಗೆ ಸಿಕ್ಕಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಒಪ್ಪಂದದ ಯಾವುದೇ ಅಂಶವನ್ನು ಉಲ್ಲಂಘಿಸಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಸ್ಲಾಮಾಬಾದ್ </strong>: ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯ (ಸಿಒಎ) ರಚನೆಗೆ ನಿರಾಕರಿಸಿದ ನಂತರದ ಅವಧಿಯಲ್ಲೇ ಭಾರತವು ಕಿಶನ್ಗಂಗಾ ಜಲವಿದ್ಯುತ್ ಯೋಜನೆಯನ್ನು ಪೂರ್ಣಗೊಳಿಸಿದೆ ಎಂದು ವಿಶ್ವಬ್ಯಾಂಕ್ಗೆ ಪಾಕಿಸ್ತಾನ ಮಾಹಿತಿ ನೀಡಿದೆ.</p>.<p>ಕಿಶನ್ಗಂಗಾ, ರಾಟ್ಲೆ, ಪಕಲ್ ದುಲ್, ಮಿಯಾರ್ ಹಾಗೂ ಕಲ್ನೈ ಜಲವಿದ್ಯುತ್ ಘಟಕಗಳ ವಿನ್ಯಾಸದ ಕುರಿತು ಕಳವಳ ವ್ಯಕ್ತಪಡಿಸಿರುವ ಪಾಕಿಸ್ತಾನ, ಸಿಒಎ ರಚನೆ ಮಾಡಬೇಕು ಎಂದು 2016ರಲ್ಲಿ ವಿಶ್ವಬ್ಯಾಂಕ್ಗೆ ಮನವಿ ಮಾಡಿತ್ತು. ವಿಶ್ವಬ್ಯಾಂಕ್ ಈ ಮನವಿಯನ್ನು ಪುರಸ್ಕರಿಸಿರಲಿಲ್ಲ. ಪಾಕಿಸ್ತಾನದ ಬೇಡಿಕೆಗೆ ಪ್ರತಿಯಾಗಿ, ಈ ವಿಚಾರದಲ್ಲಿ ಪರಿಶೀಲಿಸಲು ತಟಸ್ಥ ರಾಷ್ಟ್ರಗಳ ತಜ್ಞರನ್ನು ನೇಮಿಸಬೇಕು ಎಂದು ಭಾರತ ಆಗ್ರಹಿಸಿತ್ತು.</p>.<p>‘ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಭಾರತ ಉಲ್ಲಂಘಿಸಿದೆ. ಒಪ್ಪಂದದ ಮಧ್ಯವರ್ತಿಯಾದ ವಿಶ್ವಬ್ಯಾಂಕ್, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪಾಕಿಸ್ತಾನ ಆಗ್ರಹಿಸಿದೆ’ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.</p>.<p>ಪಾಕಿಸ್ತಾನ ಇಂಧನ ಸಚಿವಾಲಯದ ವಿದ್ಯುತ್ ವಿಭಾಗವು ವಿಶ್ವಬ್ಯಾಂಕ್ನ ಉಪಾಧ್ಯಕ್ಷರಿಗೆ ಇದೇ ವಾರದಲ್ಲಿ ವರದಿ ರವಾನಿಸಿದೆ. ‘ಭಾರತವು ಯೋಜನೆ ಪೂರ್ಣಗೊಳಿಸಿದ್ದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ವರದಿಯಲ್ಲಿ ವಿವರಿಸಲಾಗಿದೆ.</p>.<p>‘ಭಾರತದಲ್ಲಿ ನಡೆಯುತ್ತಿರುವ ಹಲವು ಯೋಜನೆಗಳ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಲು ಅವಕಾಶ ಸಿಗದ ಕಾರಣ ವಿಶ್ವಬ್ಯಾಂಕ್ಗೆ ಮಾಹಿತಿ ರವಾನಿಸಲಾಗಿದೆ’ ಎಂದು ಪತ್ರದಲ್ಲಿ ಹೇಳಲಾಗಿದೆ.</p>.<p>ಸುಮ್ಮನೆ ಕೂರುವುದಿಲ್ಲ: ಪಾಕಿಸ್ತಾನದ ಮುಂದಿನ ನಡೆಯ ಕುರಿತು ಸ್ಪಷ್ಟಪಡಿಸಿರುವ ಪಾಕ್ ಅಧಿಕಾರಿಗಳು, ‘ನಾವು ಸುಮ್ಮನೆ ಕೂರುವುದಿಲ್ಲ. ಈ ವಿಚಾರವಾಗಿ ತಾರ್ಕಿಕ ಪರಿಹಾರ ಕಂಡುಕೊಳ್ಳುತ್ತೇವೆ’ ಎಂದಿದ್ದಾರೆ.</p>.<p>‘ಪಾಕಿಸ್ತಾನ ಯಾವ ವಿನ್ಯಾಸಕ್ಕೆ ವಿರೋಧ ವ್ಯಕ್ತಪಡಿಸಿತ್ತೋ, ಅದೇ ವಿನ್ಯಾಸದ ಪ್ರಕಾರ ಭಾರತವು ಘಟಕಗಳ ನಿರ್ಮಾಣವನ್ನು ಪೂರ್ಣಗೊಳಿಸಿದೆ ಎಂಬ ವರದಿ ಕಳೆದ ಆಗಸ್ಟ್ನಲ್ಲೇ ನಮಗೆ ಸಿಕ್ಕಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಒಪ್ಪಂದದ ಯಾವುದೇ ಅಂಶವನ್ನು ಉಲ್ಲಂಘಿಸಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>