<p><strong>ಕೋಲ್ಕತ್ತ:</strong> ತಾಯಿಗೆ ಸಿಗುವ ಪಿಂಚಣಿಯನ್ನು ಪಡೆಯುವ ಸಲುವಾಗಿ, ಆಕೆಯ ಶವವನ್ನು ಮೂರು ವರ್ಷಗಳವರೆಗೆ ರಾಸಾಯನಿಕ ಸಿಂಪಡಿಸಿ ಕಾಪಾಡಿಕೊಂಡು ಬಂದಿರುವ ಆರೋಪಹೊತ್ತ ಮಗನೀಗ ಪೊಲೀಸರ ಅತಿಥಿಯಾಗಿದ್ದಾನೆ.</p>.<p>ಇಲ್ಲಿಯ ಬೆಹಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ‘ಪಿಂಚಣಿ ಪಡೆಯಲು ಹೆಬ್ಬೆರಳಿನ ಗುರುತಿನ ಅವಶ್ಯಕತೆ ಇರುವ ಕಾರಣ, ನಿರುದ್ಯೋಗಿ ಮಗ ಶವವನ್ನು ಮಾಂಸ ತುಂಬಿಡುವ ಫ್ರೀಜರ್ನಲ್ಲಿ ಇಟ್ಟಿರುವ ಶಂಕೆ ಇದೆ’ ಎಂದು ಪೊಲೀಸರು ಹೇಳಿದ್ದಾರೆ.</p>.<p>ಬೀನಾ ಮುಜುಮ್ದಾರ್ ಎಂಬುವವರ ಮಗ ಸುಭಬ್ರತಾ (ಸುಮಾರು 50 ವರ್ಷ) ಈ ಕೃತ್ಯ ಎಸಗಿದವನು. ಬೀನಾ, ಕೇಂದ್ರ ಆಹಾರ ನಿಗಮದಲ್ಲಿ ನೌಕರಿ ಮಾಡುತ್ತಿದ್ದರು. ಇವರಿಗೆ ಪಿಂಚಣಿ ಹಣ ಬರುತ್ತಿತ್ತು.</p>.<p>ಪತ್ರಕರ್ತನೊಬ್ಬ ವಿಶೇಷ ವರದಿ ಮಾಡುವ ಸಂಬಂಧ ಈ ಪ್ರದೇಶಕ್ಕೆ ಭೇಟಿ ನೀಡಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಮನೆಯಿಂದ ಕೆಟ್ಟ ರೀತಿಯ ವಾಸನೆ ಬರುತ್ತಿರುವ ಬಗ್ಗೆ ಪತ್ರಕರ್ತನಿಗೆ ಸ್ಥಳೀಯರು ಮಾಹಿತಿ ನೀಡಿದರು. ‘ಮೂರು ವರ್ಷಗಳ ಹಿಂದೆ ಈ ಕುಟುಂಬದ ಮಹಿಳೆಯೊಬ್ಬರು ಸಾವನ್ನಪ್ಪಿರುವುದು ನಮಗೆ ತಿಳಿದಿದೆ. ಆದರೆ ಅವರ ಶವಸಂಸ್ಕಾರದ ಬಗ್ಗೆಯಾಗಲೀ, ಇತರ ಮಾಹಿತಿಯಾಗಲೀ ನಮಗೆ ಗೊತ್ತಿಲ್ಲ’ ಎಂದು ಸ್ಥಳೀಯರು ಹೇಳಿದರು.</p>.<p>ನಂತರ ಪತ್ರಕರ್ತ ಈ ಬಗ್ಗೆ ಪೊಲೀಸರಲ್ಲಿ ದೂರು ದಾಖಲು ಮಾಡಿದ. ಎರಡು ಮಹಡಿಗಳ ಆ ಮನೆಯ ಕೆಳ ಮಹಡಿಯಲ್ಲಿ ಶವವನ್ನು ಇಟ್ಟಿರುವುದು ಪೊಲೀಸರು ತನಿಖೆ ನಡೆಸಿದಾಗ ಕಾಣಿಸಿತು. ‘ಅಲ್ಲಿ ಎರಡು ಫ್ರಿಜ್ಗಳು ಇದ್ದವು. ಒಂದರಲ್ಲಿ ಈ ಶವವಿತ್ತು. ಇನ್ನೊಂದು ಖಾಲಿ ಇತ್ತು. ಇನ್ನೊಂದು ಫ್ರಿಜ್ ಯಾಕೆ ಇಟ್ಟಿದ್ದ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು.</p>.<p>‘ಫ್ರೀಜರ್ನಲ್ಲಿ ಇಡಲು ಅನುಕೂಲ ಆಗುವಂತೆ ಮಹಿಳೆಯ ದೇಹವನ್ನು ಕತ್ತರಿಸಲಾಗಿದೆ. ಒಳಗಡೆ ಇರುವ ಭಾಗಗಳನ್ನು ಹೊರಕ್ಕೆ ತೆಗೆಯಲಾಗಿದೆ. ಇದು ಮಗನ ಕೃತ್ಯವೇ ಇರಬೇಕು ಎಂದು ಭಾವಿಸಿದ್ದೇವೆ.</p>.<p>ಮಹಿಳೆಯ ಗಂಡನ ಬಗ್ಗೆಯೂ ಸಂಶಯವಿದ್ದು ಅವರನ್ನೂ ವಿಚಾರಿಸುತ್ತಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ:</strong> ತಾಯಿಗೆ ಸಿಗುವ ಪಿಂಚಣಿಯನ್ನು ಪಡೆಯುವ ಸಲುವಾಗಿ, ಆಕೆಯ ಶವವನ್ನು ಮೂರು ವರ್ಷಗಳವರೆಗೆ ರಾಸಾಯನಿಕ ಸಿಂಪಡಿಸಿ ಕಾಪಾಡಿಕೊಂಡು ಬಂದಿರುವ ಆರೋಪಹೊತ್ತ ಮಗನೀಗ ಪೊಲೀಸರ ಅತಿಥಿಯಾಗಿದ್ದಾನೆ.</p>.<p>ಇಲ್ಲಿಯ ಬೆಹಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ‘ಪಿಂಚಣಿ ಪಡೆಯಲು ಹೆಬ್ಬೆರಳಿನ ಗುರುತಿನ ಅವಶ್ಯಕತೆ ಇರುವ ಕಾರಣ, ನಿರುದ್ಯೋಗಿ ಮಗ ಶವವನ್ನು ಮಾಂಸ ತುಂಬಿಡುವ ಫ್ರೀಜರ್ನಲ್ಲಿ ಇಟ್ಟಿರುವ ಶಂಕೆ ಇದೆ’ ಎಂದು ಪೊಲೀಸರು ಹೇಳಿದ್ದಾರೆ.</p>.<p>ಬೀನಾ ಮುಜುಮ್ದಾರ್ ಎಂಬುವವರ ಮಗ ಸುಭಬ್ರತಾ (ಸುಮಾರು 50 ವರ್ಷ) ಈ ಕೃತ್ಯ ಎಸಗಿದವನು. ಬೀನಾ, ಕೇಂದ್ರ ಆಹಾರ ನಿಗಮದಲ್ಲಿ ನೌಕರಿ ಮಾಡುತ್ತಿದ್ದರು. ಇವರಿಗೆ ಪಿಂಚಣಿ ಹಣ ಬರುತ್ತಿತ್ತು.</p>.<p>ಪತ್ರಕರ್ತನೊಬ್ಬ ವಿಶೇಷ ವರದಿ ಮಾಡುವ ಸಂಬಂಧ ಈ ಪ್ರದೇಶಕ್ಕೆ ಭೇಟಿ ನೀಡಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಮನೆಯಿಂದ ಕೆಟ್ಟ ರೀತಿಯ ವಾಸನೆ ಬರುತ್ತಿರುವ ಬಗ್ಗೆ ಪತ್ರಕರ್ತನಿಗೆ ಸ್ಥಳೀಯರು ಮಾಹಿತಿ ನೀಡಿದರು. ‘ಮೂರು ವರ್ಷಗಳ ಹಿಂದೆ ಈ ಕುಟುಂಬದ ಮಹಿಳೆಯೊಬ್ಬರು ಸಾವನ್ನಪ್ಪಿರುವುದು ನಮಗೆ ತಿಳಿದಿದೆ. ಆದರೆ ಅವರ ಶವಸಂಸ್ಕಾರದ ಬಗ್ಗೆಯಾಗಲೀ, ಇತರ ಮಾಹಿತಿಯಾಗಲೀ ನಮಗೆ ಗೊತ್ತಿಲ್ಲ’ ಎಂದು ಸ್ಥಳೀಯರು ಹೇಳಿದರು.</p>.<p>ನಂತರ ಪತ್ರಕರ್ತ ಈ ಬಗ್ಗೆ ಪೊಲೀಸರಲ್ಲಿ ದೂರು ದಾಖಲು ಮಾಡಿದ. ಎರಡು ಮಹಡಿಗಳ ಆ ಮನೆಯ ಕೆಳ ಮಹಡಿಯಲ್ಲಿ ಶವವನ್ನು ಇಟ್ಟಿರುವುದು ಪೊಲೀಸರು ತನಿಖೆ ನಡೆಸಿದಾಗ ಕಾಣಿಸಿತು. ‘ಅಲ್ಲಿ ಎರಡು ಫ್ರಿಜ್ಗಳು ಇದ್ದವು. ಒಂದರಲ್ಲಿ ಈ ಶವವಿತ್ತು. ಇನ್ನೊಂದು ಖಾಲಿ ಇತ್ತು. ಇನ್ನೊಂದು ಫ್ರಿಜ್ ಯಾಕೆ ಇಟ್ಟಿದ್ದ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು.</p>.<p>‘ಫ್ರೀಜರ್ನಲ್ಲಿ ಇಡಲು ಅನುಕೂಲ ಆಗುವಂತೆ ಮಹಿಳೆಯ ದೇಹವನ್ನು ಕತ್ತರಿಸಲಾಗಿದೆ. ಒಳಗಡೆ ಇರುವ ಭಾಗಗಳನ್ನು ಹೊರಕ್ಕೆ ತೆಗೆಯಲಾಗಿದೆ. ಇದು ಮಗನ ಕೃತ್ಯವೇ ಇರಬೇಕು ಎಂದು ಭಾವಿಸಿದ್ದೇವೆ.</p>.<p>ಮಹಿಳೆಯ ಗಂಡನ ಬಗ್ಗೆಯೂ ಸಂಶಯವಿದ್ದು ಅವರನ್ನೂ ವಿಚಾರಿಸುತ್ತಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>