ರವೀಂದ್ರನಾಥ ಠ್ಯಾಗೂರ್, ಖಲೀಲ್ ಗಿಬ್ರಾನ್, ಅರವಿಂದರು ಮತ್ತು ಎ.ಈ.ಎಂಬ ಐರಿಷ್ ಕವಿ ಬೇಂದ್ರೆಯವರಿಗೆ ಪ್ರಭಾವ ಬೀರಿದ ಚತುರ್ಮುಖ ಗುರುಗಳಾಗಿದ್ದಾರೆ. ಭೂಮಿ, ವಿಶ್ವ, ಭರತ, ಕನ್ನಡ ಮತ್ತು ಹೆತ್ತ ತಾಯಿಯ ಕರುಣದ ಶಿಶು ತಾನು ಎಂದು ಹೇಳಿಕೊಳ್ಳುವ ಬೇಂದ್ರೆ ಅವರಿಗೆ ಪ್ರೀತಿ ಮತ್ತು ಭಕ್ತಿಯೇ ಕವಿತೆಯ ಮುಖ್ಯ ಶಕ್ತಿಯಾಗಿತ್ತು ಎಂದು ಹೇಳಿದರು.