ನಾನು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿಂಗಣಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ್ದು. ನನ್ನ ನೆಚ್ಚಿನ ಕನ್ನಡ ಮೇಷ್ಟ್ರು ವಿ.ಎಸ್.ಗಲಗಲಿ ಗುರುಗಳು. ಅವರ ಮೊಗದಲ್ಲಿ ಸದಾ ಮಂದಹಾಸ, ಸರಳ ವ್ಯಕ್ತಿತ್ವ, ನೇರ ನುಡಿಗಳ ಮನುಷ್ಯ. ಮೊದಲು ನನಗೆ ಕಪ್ಪು ಹಲಗೆಯಲ್ಲಿ ಜೋಡಿಪದ ಹಾಕಿಕೊಟ್ಟು ತಿದ್ದಲು ಹೇಳುತ್ತಿದ್ದರು.