ಬೆಂಗಳೂರು: ಮಹದೇವಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಸಿ.ಶ್ರೀನಿವಾಸ್ ಅವರ ಭಾವಚಿತ್ರವಿರುವ ಕುಕ್ಕರ್ ಬಾಕ್ಸ್ಗಳನ್ನು ಹಗದೂರು ವಾರ್ಡ್ನಲ್ಲಿ ವಿತರಿಸಲಾಗಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.
‘ಇಲ್ಲಿನ ಗಾಂಧಿಪುರ ಹಾಗೂ ವಿಜಯನಗರದ ಕೊಳೆಗೇರಿಗಳಲ್ಲಿ ಸ್ಥಳೀಯ ಪಾಲಿಕೆ ಸದಸ್ಯ ಎಸ್.ಉದಯಕುಮಾರ್ ಅವರು ಕುಕ್ಕರ್
ಗಳನ್ನು ವಿತರಿಸಿದ್ದಾರೆ. ಈ ಹಿಂದೆಯೂ ಕುಕ್ಕರ್ ಹಾಗೂ ಸೀರೆಗಳನ್ನು ವಿತರಿಸಲಾಗಿತ್ತು’ ಎಂದು ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ತಿಳಿಸಿದರು.
‘ಈ ಬಾಕ್ಸ್ಗಳ ಮೇಲೆ ಕಾಂಗ್ರೆಸ್ಗೆ ಮತ ನೀಡಿ, ಮಹದೇವಪುರ ಉಳಿಸಿ ಎಂಬ ವಾಕ್ಯವನ್ನು ಮುದ್ರಿಸಲಾಗಿದೆ. ಇಮ್ಮಡಿಹಳ್ಳಿ, ನಾಗೊಂಡನಹಳ್ಳಿಯಲ್ಲೂ ಮತದಾರರಿಗೆ ಆಮಿಷ ತೋರಿಸಲಾಗುತ್ತಿದೆ’ ಎಂದು ದೂರಿದರು.