ಕಾಂಗ್ರೆಸ್ನವರು ಲೆಕ್ಕ ಇಟ್ಟಿಲ್ಲ, ಕೊಟ್ಟಿಲ್ಲ. ಕೇವಲ ಸುಳ್ಳು ಹೇಳುವುದೇ ಅವರ ಕೆಲಸ. ಮರಳು ಮಾಫಿಯಾ ಯಾರದ್ದು? ಯಾರು ಇದನ್ನು ರಕ್ಷಿಸುವವರು ಎಂದು ಕಾಂಗ್ರೆಸ್ನವರನ್ನು ಪ್ರಶ್ನಿಸಿ. ನದಿ ನಿಮ್ಮದು, ಮರಳು ನಿಮ್ಮದು, ಇದರ ನಿಜವಾದ ಮಾಲೀಕರು ನೀವು. ಆದರೆ, ಒಂದು ಮುಷ್ಟಿ ಮರಳು ತೆಗೆಯಬೇಕಾದರೆ ಯಾರ ಅನುಮತಿ ಬೇಕು? ಎಂದು ಕೇಳಿದರು.