ಹಣಕಾಸು ಸಚಿವಾಲಯವು ಈಗಾಗಲೇ ಈ ಬಡ್ಡಿ ದರಕ್ಕೆ ತನ್ನ ಸಮ್ಮತಿ ನೀಡಿದೆ. ಕರ್ನಾಟಕದಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯುತ್ತಿರುವುದರಿಂದ ಜಾರಿಯಲ್ಲಿ ಇರುವ ನೀತಿಸಂಹಿತೆ ಕಾರಣಕ್ಕೆ ಅಧಿಸೂಚನೆ ಪ್ರಕಟಿಸಲು ಸಚಿವಾಲಯವು ಚುನಾವಣಾ ಆಯೋಗದ ಅನುಮತಿ ಕೇಳಿದೆ. ಆಯೋಗವು ಶೀಘ್ರದಲ್ಲಿಯೇ ತನ್ನ ಅನುಮತಿ ನೀಡುವ ನಿರೀಕ್ಷೆ ಇದೆ. ಅಧಿಸೂಚನೆ ಪ್ರಕಟಗೊಳ್ಳುತ್ತಿದ್ದಂತೆ ಈ ಬಡ್ಡಿಯನ್ನು ಭವಿಷ್ಯ ನಿಧಿಯ ಐದು ಕೋಟಿ ಚಂದಾದಾರರ ಖಾತೆಗೆ ಜಮೆ ಮಾಡಲಾಗುವುದು.