ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ನಮೋ ಆ್ಯಪ್ ಮೂಲಕ ಸಂವಾದ ನಡೆಸಿ ಕರ್ನಾಟಕದಲ್ಲಿ 25 ಲಕ್ಷ ಜನರ ಜತೆ ಮಾತನಾಡಿದ್ದಾರೆ. ಈ ರೀತಿ ಜನರೊಂದಿಗೆ ನಿಕಟ ಸಂಪರ್ಕ ಸಾಧಿಸಿದ ಜಗತ್ತಿನ ಏಕೈಕ ನಾಯಕ ಪ್ರಧಾನಿ ನರೇಂದ್ರ ಮೋದಿ ಎಂದು ಬಿಜೆಪಿಯ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿದ್ದಾರೆ.
ಮೇ 12ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಪ್ರಚಾರ ನಡೆಸುವುದರ ಜತೆಗೆ ಮೋದಿಯವರು ಬಿಜೆಪಿ ಪಕ್ಷದ , ಎಸ್ಟಿ, ಒಬಿಸಿ ಮತ್ತು ಕೊಳೆಗೇರಿ ವಿಭಾಗದ ನಾಯಕ, ಕಾರ್ಯಕರ್ತರ ಜತೆಗೂ ಸಮಾಲೋಚನೆ ನಡೆಸಿದ್ದಾರೆ.
ಒಟ್ಟು 25 ಲಕ್ಷ ಮಂದಿಯಲ್ಲಿ ಕರ್ನಾಟಕ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳು, ಕಾರ್ಯಕರ್ತರು, ಬೆಂಬಲಿಗರು,ನಾಯಕರು ಸೇರಿದ್ದಾರೆ ಎಂದು ಮಾಳವೀಯ ತಿಳಿಸಿದಿದ್ದಾರೆ.