<p><strong>ನವದೆಹಲಿ:</strong> 2008ರ ಮುಂಬೈ ಹತ್ಯಾಕಾಂಡಲ್ಲಿನ ರಕ್ತದೋಕುಳಿಗೆ ಪಾಕಿಸ್ತಾನದ ಉಗ್ರರು ಕಾರಣ ಎಂದು ಪಾಕಿಸ್ತಾನದ ಮಾಜಿ ಮುಖ್ಯಮಂತ್ರಿ ನವಾಜ್ ಷರೀಫ್ ಹೇಳಿದ್ದಾರೆ.</p>.<p>ಪಾಕಿಸ್ತಾನ ಮಾಧ್ಯಮ ಡಾನ್ ನಡೆಸಿದ ಸಾರ್ವಜನಿಕ ಸಂದರ್ಶನದಲ್ಲಿ ಮಾತನಾಡಿದ ಷರೀಫ್, ಉಗ್ರ ಸಂಘಟನೆಗಳು ಬಹಳ ಚಟುವಟಿಕೆಯಿಂದ ಕೂಡಿವೆ. ಸರ್ಕಾರೇತರ ಸಂಘಟನೆಗಳಿಗೆ ಮುಂಬೈನಲ್ಲಿ 150 ಮಂದಿಯನ್ನು ಕೊಲ್ಲಲು ಅನುವು ಮಾಡಿಕೊಡಬೇಕೆ? ಎಂದು ಪ್ರಶ್ನಿಸಿದ್ದಾರೆ.</p>.<p>ಈ ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ಲಷ್ಕರ್–ಎ–ತಯೆಬಾ ಉಗ್ರ ಸಂಘಟನೆಯ 10 ಉಗ್ರರು ಮುಂಬೈ ಹತ್ಯಾಕಾಂಡ ನಡೆಸಿದ್ದರು. ಉಗ್ರರ ಈ ಭೀಕರ ಕೃತ್ಯವನ್ನು ಇಡೀ ಜಗತ್ತೇ ಖಂಡಿಸಿತ್ತು. ಇದರಲ್ಲಿ 164 ಮಂದಿ ಮೃತಪಟ್ಟಿದ್ದರು. 308 ಮಂದಿ ಗಾಯಗೊಂಡಿದ್ದರು.</p>.<p>ನಾವು ನಮ್ಮನ್ನು ಪ್ರತ್ಯೇಕಗೊಳಿಸಿಕೊಂಡಿದ್ದೇವೆ. ತ್ಯಾಗದ ಹೊರತಾಗಿಯೂ ನಾವು ನಮ್ಮ ನಡೆಯನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಅಫ್ಗಾನಿಸ್ತಾನದ ಹಾದಿಯನ್ನು ಅನುಸರಿಸಬೇಕೇ ಹೊರತು ನಮ್ಮ ಹಾದಿಯನ್ನಲ್ಲ. ನಾವು ಅವರ ಕಡೆ ಗಮನಹರಿಸಲೇ ಬೇಕು ಎಂದು ಹೇಳಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> 2008ರ ಮುಂಬೈ ಹತ್ಯಾಕಾಂಡಲ್ಲಿನ ರಕ್ತದೋಕುಳಿಗೆ ಪಾಕಿಸ್ತಾನದ ಉಗ್ರರು ಕಾರಣ ಎಂದು ಪಾಕಿಸ್ತಾನದ ಮಾಜಿ ಮುಖ್ಯಮಂತ್ರಿ ನವಾಜ್ ಷರೀಫ್ ಹೇಳಿದ್ದಾರೆ.</p>.<p>ಪಾಕಿಸ್ತಾನ ಮಾಧ್ಯಮ ಡಾನ್ ನಡೆಸಿದ ಸಾರ್ವಜನಿಕ ಸಂದರ್ಶನದಲ್ಲಿ ಮಾತನಾಡಿದ ಷರೀಫ್, ಉಗ್ರ ಸಂಘಟನೆಗಳು ಬಹಳ ಚಟುವಟಿಕೆಯಿಂದ ಕೂಡಿವೆ. ಸರ್ಕಾರೇತರ ಸಂಘಟನೆಗಳಿಗೆ ಮುಂಬೈನಲ್ಲಿ 150 ಮಂದಿಯನ್ನು ಕೊಲ್ಲಲು ಅನುವು ಮಾಡಿಕೊಡಬೇಕೆ? ಎಂದು ಪ್ರಶ್ನಿಸಿದ್ದಾರೆ.</p>.<p>ಈ ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ಲಷ್ಕರ್–ಎ–ತಯೆಬಾ ಉಗ್ರ ಸಂಘಟನೆಯ 10 ಉಗ್ರರು ಮುಂಬೈ ಹತ್ಯಾಕಾಂಡ ನಡೆಸಿದ್ದರು. ಉಗ್ರರ ಈ ಭೀಕರ ಕೃತ್ಯವನ್ನು ಇಡೀ ಜಗತ್ತೇ ಖಂಡಿಸಿತ್ತು. ಇದರಲ್ಲಿ 164 ಮಂದಿ ಮೃತಪಟ್ಟಿದ್ದರು. 308 ಮಂದಿ ಗಾಯಗೊಂಡಿದ್ದರು.</p>.<p>ನಾವು ನಮ್ಮನ್ನು ಪ್ರತ್ಯೇಕಗೊಳಿಸಿಕೊಂಡಿದ್ದೇವೆ. ತ್ಯಾಗದ ಹೊರತಾಗಿಯೂ ನಾವು ನಮ್ಮ ನಡೆಯನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಅಫ್ಗಾನಿಸ್ತಾನದ ಹಾದಿಯನ್ನು ಅನುಸರಿಸಬೇಕೇ ಹೊರತು ನಮ್ಮ ಹಾದಿಯನ್ನಲ್ಲ. ನಾವು ಅವರ ಕಡೆ ಗಮನಹರಿಸಲೇ ಬೇಕು ಎಂದು ಹೇಳಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>