<p><strong>ಕೃಷ್ಣಾ ಪರಿಷ್ಕೃತ ಯೋಜನೆಗೆ ಒಪ್ಪಿಗೆ<br /> ಬೆಂಗಳೂರು, ಮೇ 14–</strong> ವೆಚ್ಚದಲ್ಲಿ 25 ಕೋಟಿ ರೂಪಾಯಿಗಳನ್ನು ಉಳಿಸುವುದರೊಂದಿಗೆ ನೀರಾವರಿ ದೊರೆಯುವ ಜಮೀನನ್ನು 16 ಲಕ್ಷ ಎಕರೆಗಳಿಂದ 19.5 ಲಕ್ಷ ಎಕರೆಗಳಿಗೇರಿಸುವ ಕೃಷ್ಣಾ ಮೇಲ್ದಂಡೆಯ ಪರಿಷ್ಕೃತ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.</p>.<p><strong>ಬೇಷರತ್ ಬಾಂಬ್ ದಾಳಿ ನಿಲುಗಡೆಗೆ ಉ ಥಾಂಟ್ ಕರೆ<br /> ವಿಶ್ವಸಂಸ್ಥೆ, ಮೇ 14–</strong> ವಿಯಟ್ನಾಂ ಶಾಂತಿ ಸಂಧಾನಗಳಿಗಾಗಿ ಯೋಗ್ಯ ವಾತಾವರಣ ಸೃಷ್ಟಿಸಲು ಉತ್ತರ ವಿಯಟ್ನಾಂ ವಿರುದ್ಧ ಬಾಂಬ್ ದಾಳಿಯ ಬೇಷರತ್ ನಿಲುಗಡೆ ಪ್ರಪ್ರಥಮ ಅವಶ್ಯಕತೆಯೆಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಉ ಥಾಂಟರು ಇಂದು ಇಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.</p>.<p><strong>ವಿಶ್ವಸಂಸ್ಥೆಗೆ ಮತ್ತೆ ಕಾಶ್ಮೀರ ಪ್ರಶ್ನೆ: ಪಾಕಿಸ್ತಾನದ ಪರಿಶೀಲನೆಯಲ್ಲಿ<br /> ನವದೆಹಲಿ, ಮೇ 14–</strong> ವಿಶ್ವ ರಾಷ್ಟ್ರ ಸಂಸ್ಥೆಗೆ ಮತ್ತೆ ಕಾಶ್ಮೀರ ವಿವಾದವನ್ನೊಯ್ಯುವ ಬಗ್ಗೆ ಪಾಕಿಸ್ತಾನ ಪರಿಶೀಲಿಸುತ್ತಿರುವುದಾಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಅರ್ಷದ್ ಹುಸೇನ್ ಅವರು ಇಂದು ಪಾರ್ಲಿಮೆಂಟಿಗೆ ತಿಳಿಸಿದರು.</p>.<p>ಕಾಶ್ಮೀರ ವಿವಾದದ ಬಗ್ಗೆ ಭಾರತದೊಂದಿಗೆ ಸಚಿವ ಮಟ್ಟದ ಮಾತುಕತೆಯ ಸಾಧ್ಯತೆ ಈಗ ಸದ್ಯಕ್ಕಿಲ್ಲವೆಂದೂ ನೇರ ಸಂಧಾನಗಳ ಮೂಲಕ ಈ ವಿವಾದ ಪರಿಹಾರಕ್ಕೆ ಪಾಕಿಸ್ತಾನ ಸತತ ಯತ್ನಿಸುತ್ತಿದೆಯೆಂದೂ ಅವರು ಹೇಳಿದರು.</p>.<p><strong>ಫರಕ್ಕಾ ಅಣೆ ಬಗ್ಗೆ ಮಧ್ಯಸ್ಥಿಕೆಗೆ ಪಾಕಿಸ್ತಾನದ ಒತ್ತಾಯ<br /> ನವದೆಹಲಿ, ಮೇ 14– </strong>ಗಂಗಾನದಿಯ ಜಲ ವಿವಾದದ ಬಗ್ಗೆ ಭಾರತ–ಪಾಕಿಸ್ತಾನದ ನಡುವಣ ಮಾತುಕತೆ ಮುರಿದು ಬೀಳುವಂತೆ ಕಾಣಬರುತ್ತಿದೆ.</p>.<p>ಈ ವಿವಾದದ ವಿಷಯದಲ್ಲಿ ಮೂರನೆಯವರು ಮಧ್ಯಸ್ಥಿಕೆ ವಹಿಸುವುದರ ಅಗತ್ಯವನ್ನು ಪಾಕಿಸ್ತಾನದ ನಿಯೋಗ ಒತ್ತಿ ಹೇಳುತ್ತಿದ್ದರೆ, ಈ ಸಮಸ್ಯೆ ಬಗ್ಗೆ ತಾಂತ್ರಿಕ ಅಧ್ಯಯನ ನಡೆಸಬೇಕೆಂದು ಭಾರತೀಯ ನಿಯೋಗ ಆಗ್ರಹಪಡಿಸುತ್ತಿದೆ.</p>.<p>ಈ ವಿವಾದದ ವಿಷಯದಲ್ಲಿ ಎರಡು ದಿನಗಳ ಮಾತುಕತೆಯ ನಂತರ ಯಾವ ಸ್ಪಷ್ಟ ಪ್ರಗತಿ ಸಾಧಿತವಾಗಿಲ್ಲವೆಂದು ಪಾಕಿಸ್ತಾನದ ನಿಯೋಗದ ನಾಯಕ ಶ್ರೀ ಎಸ್.ಎಸ್. ಜಫ್ರಿ ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೃಷ್ಣಾ ಪರಿಷ್ಕೃತ ಯೋಜನೆಗೆ ಒಪ್ಪಿಗೆ<br /> ಬೆಂಗಳೂರು, ಮೇ 14–</strong> ವೆಚ್ಚದಲ್ಲಿ 25 ಕೋಟಿ ರೂಪಾಯಿಗಳನ್ನು ಉಳಿಸುವುದರೊಂದಿಗೆ ನೀರಾವರಿ ದೊರೆಯುವ ಜಮೀನನ್ನು 16 ಲಕ್ಷ ಎಕರೆಗಳಿಂದ 19.5 ಲಕ್ಷ ಎಕರೆಗಳಿಗೇರಿಸುವ ಕೃಷ್ಣಾ ಮೇಲ್ದಂಡೆಯ ಪರಿಷ್ಕೃತ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.</p>.<p><strong>ಬೇಷರತ್ ಬಾಂಬ್ ದಾಳಿ ನಿಲುಗಡೆಗೆ ಉ ಥಾಂಟ್ ಕರೆ<br /> ವಿಶ್ವಸಂಸ್ಥೆ, ಮೇ 14–</strong> ವಿಯಟ್ನಾಂ ಶಾಂತಿ ಸಂಧಾನಗಳಿಗಾಗಿ ಯೋಗ್ಯ ವಾತಾವರಣ ಸೃಷ್ಟಿಸಲು ಉತ್ತರ ವಿಯಟ್ನಾಂ ವಿರುದ್ಧ ಬಾಂಬ್ ದಾಳಿಯ ಬೇಷರತ್ ನಿಲುಗಡೆ ಪ್ರಪ್ರಥಮ ಅವಶ್ಯಕತೆಯೆಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಉ ಥಾಂಟರು ಇಂದು ಇಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.</p>.<p><strong>ವಿಶ್ವಸಂಸ್ಥೆಗೆ ಮತ್ತೆ ಕಾಶ್ಮೀರ ಪ್ರಶ್ನೆ: ಪಾಕಿಸ್ತಾನದ ಪರಿಶೀಲನೆಯಲ್ಲಿ<br /> ನವದೆಹಲಿ, ಮೇ 14–</strong> ವಿಶ್ವ ರಾಷ್ಟ್ರ ಸಂಸ್ಥೆಗೆ ಮತ್ತೆ ಕಾಶ್ಮೀರ ವಿವಾದವನ್ನೊಯ್ಯುವ ಬಗ್ಗೆ ಪಾಕಿಸ್ತಾನ ಪರಿಶೀಲಿಸುತ್ತಿರುವುದಾಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಅರ್ಷದ್ ಹುಸೇನ್ ಅವರು ಇಂದು ಪಾರ್ಲಿಮೆಂಟಿಗೆ ತಿಳಿಸಿದರು.</p>.<p>ಕಾಶ್ಮೀರ ವಿವಾದದ ಬಗ್ಗೆ ಭಾರತದೊಂದಿಗೆ ಸಚಿವ ಮಟ್ಟದ ಮಾತುಕತೆಯ ಸಾಧ್ಯತೆ ಈಗ ಸದ್ಯಕ್ಕಿಲ್ಲವೆಂದೂ ನೇರ ಸಂಧಾನಗಳ ಮೂಲಕ ಈ ವಿವಾದ ಪರಿಹಾರಕ್ಕೆ ಪಾಕಿಸ್ತಾನ ಸತತ ಯತ್ನಿಸುತ್ತಿದೆಯೆಂದೂ ಅವರು ಹೇಳಿದರು.</p>.<p><strong>ಫರಕ್ಕಾ ಅಣೆ ಬಗ್ಗೆ ಮಧ್ಯಸ್ಥಿಕೆಗೆ ಪಾಕಿಸ್ತಾನದ ಒತ್ತಾಯ<br /> ನವದೆಹಲಿ, ಮೇ 14– </strong>ಗಂಗಾನದಿಯ ಜಲ ವಿವಾದದ ಬಗ್ಗೆ ಭಾರತ–ಪಾಕಿಸ್ತಾನದ ನಡುವಣ ಮಾತುಕತೆ ಮುರಿದು ಬೀಳುವಂತೆ ಕಾಣಬರುತ್ತಿದೆ.</p>.<p>ಈ ವಿವಾದದ ವಿಷಯದಲ್ಲಿ ಮೂರನೆಯವರು ಮಧ್ಯಸ್ಥಿಕೆ ವಹಿಸುವುದರ ಅಗತ್ಯವನ್ನು ಪಾಕಿಸ್ತಾನದ ನಿಯೋಗ ಒತ್ತಿ ಹೇಳುತ್ತಿದ್ದರೆ, ಈ ಸಮಸ್ಯೆ ಬಗ್ಗೆ ತಾಂತ್ರಿಕ ಅಧ್ಯಯನ ನಡೆಸಬೇಕೆಂದು ಭಾರತೀಯ ನಿಯೋಗ ಆಗ್ರಹಪಡಿಸುತ್ತಿದೆ.</p>.<p>ಈ ವಿವಾದದ ವಿಷಯದಲ್ಲಿ ಎರಡು ದಿನಗಳ ಮಾತುಕತೆಯ ನಂತರ ಯಾವ ಸ್ಪಷ್ಟ ಪ್ರಗತಿ ಸಾಧಿತವಾಗಿಲ್ಲವೆಂದು ಪಾಕಿಸ್ತಾನದ ನಿಯೋಗದ ನಾಯಕ ಶ್ರೀ ಎಸ್.ಎಸ್. ಜಫ್ರಿ ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>