‘ಭಾರತದ ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಅಂತರರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ದಾರೆ. ಈ ಹುದ್ದೆಗಾಗಿ ನಡೆದ ಚುನಾವಣೆಯಲ್ಲಿ ದಲ್ವೀರ್ ಭಂಡಾರಿ ಅವರು, ಬ್ರಿಟನ್ನ ನ್ಯಾಯಮೂರ್ತಿ ಕ್ರಿಸ್ಟೋಫರ್ ಗ್ರೀನ್ವುಡ್ ಅವರನ್ನು ಸೋಲಿಸಿದರು. ಈ ಹುದ್ದೆಯ ಮೇಲೆ 71 ವರ್ಷಗಳಿಂದ ಇದ್ದ ಬ್ರಿಟನ್ನ ಏಕಸ್ವಾಮ್ಯವನ್ನು ಅವರು ಮುರಿದಿದ್ದಾರೆ. ಇದನ್ನು ಸಾಧಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಳೆದ 6 ತಿಂಗಳಿಂದ ಶ್ರಮಿಸುತ್ತಿದೆ! ಎಲ್ಲಾ 193 ದೇಶಗಳ ಪ್ರತಿನಿಧಿಗಳನ್ನು ಸಂಪರ್ಕಿಸುವುದು ಮತ್ತು ಪ್ರತಿಸ್ಪರ್ಧಿ ಬ್ರಿಟಿಷ್ ಅಭ್ಯರ್ಥಿಯ ಬಗ್ಗೆ ಭಾರತದ ನಿಲುವನ್ನು ವಿವರಿಸುವುದು ತುಂಬಾ ಕಷ್ಟಕರವಾದ ಕೆಲಸವಾಗಿತ್ತು. ಮೋದಿ ಅವರ ಶ್ರಮದಿಂದಾಗಿಯೇ 193 ಮತಗಳಲ್ಲಿ ದಲ್ವೀರ್ ಅವರಿಗೆ 183 ಮತಗಳು ಬಂದವು’ ಎಂಬ ವಿವರ ಇರುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಇದು ಸುಳ್ಳು ಸುದ್ದಿ.