ಮಸೀದಿಯೊಂದನ್ನು ಜೆಸಿಬಿಯಿಂದ ಕೆಡವಲಾಗುತ್ತಿರುವ ಹಾಗೂ ರಸ್ತೆಯಲ್ಲಿ ಹಲವು ವಾಹನಗಳು ನಿಂತಿರುವ ವಿಡಿಯೊವಿನ ಸ್ಕ್ರೀನ್ಶಾಟ್ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಉತ್ತರ ಪ್ರದೇಶದ ಸೈದಾಬಾದ್ನಲ್ಲಿ (ಪ್ರಯಾಗ್ರಾಜ್) ಮಸೀದಿಯೊಂದರ ಮೇಲೆ ಪಾಕಿಸ್ತಾನದ ಧ್ವಜ ಹಾರಾಡುತ್ತಿತ್ತು. ಯೋಗಿ ಆದಿತ್ಯನಾಥ ಅವರು ಇಡೀ ಮಸೀದಿಯನ್ನು ನೆಲಸಮಗೊಳಿಸಲು ಆದೇಶಿಸಿದರು. ಪಾಕಿಸ್ತಾನ ಧ್ವಜವನ್ನು ಕೆಳಗಿಸಿ ಎಂದು ಅವರು ಆದೇಶಿಸಬಹುದಿತ್ತು. ಆದರೆ, ಅವರು ಹಾಗೆ ಮಾಡಲಿಲ್ಲ. ದೇಶವಿರೋಧಿಗಳನ್ನು ಯೋಗಿ ಆದಿತ್ಯನಾಥ ಅವರು ಹೀಗೆಯೇ ನಡೆಸಿಕೊಳ್ಳುವುದು. ನಿಮ್ಮ ಧೈರ್ಯಕ್ಕೆ ಮೆಚ್ಚುಗೆ ಯೋಗಿಜೀ ಅವರೆ’ ಎಂದು ಹಲವರು ಸ್ಕ್ರೀನ್ಶಾಟ್ನೊಂದಿಗೆ ಬರಹವನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.