ಇದೇ ವಿಡಿಯೊವು ಕಳೆದ ವರ್ಷವೂ ಹಂಚಿಕೆಯಾಗಿತ್ತು. ಬಿಜೆಪಿಯ ಹಲವು ನಾಯಕರು ಇದೇ ಅಭಿಪ್ರಾಯದೊಂದಿಗೆ ವಿಡಿಯೊವನ್ನು ಹಂಚಿಕೊಂಡಿದ್ದರು. ಆದರೆ, ಇದು ಕಾಶ್ಮೀರದ ಬಾರಾಮುಲ್ಲಾದಲ್ಲಿ ನಡೆದ ಘಟನೆ. ಪ್ರಬಲ ಎರಡು ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಮೀಸಲಾತಿ ನೀಡಲಾಗಿತ್ತು. ಇದರ ವಿರುದ್ಧ ಗುಜ್ಜರ್ ಹಾಗೂ ಕುರಿಗಾಹಿ ಬುಡಕಟ್ಟು ಸಮುದಾಯಗಳು ತೀವ್ರವಾಗಿ ಎರಡು ವರ್ಷಗಳ ಅವಧಿಯ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಭಾರತದ ಸ್ವಾತಂತ್ರ್ಯ ದಿನದ ಮರು ದಿನ ಪ್ರತಿಭಟನನಿರತರು, ಭಾರತ ಸಂವಿಧಾನ ಮತ್ತು ಸೇನೆಯನ್ನು ಗೌರವಿಸುತ್ತೇವೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದರು. ಪ್ರತಿಜ್ಞೆ ಬೋಧಿಸಿದ್ದ ರಫೀಕ್ ಭಲೋಟೆ ಅವರು ಇದನ್ನು ದೃಢಪಡಿಸಿದ್ದಾರೆ ಎಂದು ಬೂಮ್ಲೈವ್ ಫ್ಯಾಕ್ಟ್ಚೆಕ್ ಪ್ರಕಟಿಸಿದೆ.