‘ದೇಶದಲ್ಲಿ ಪೋಲಿಯೊ ಲಸಿಕೆ ಹಾಕಿಸುವಲ್ಲಿ ಆರ್ಎಸ್ಎಸ್ ಮತ್ತು ಸೇವಾಭಾರತಿ ಕಾರ್ಯ ಮಹತ್ವದ್ದು’ ಎಂದು ಪೋಸ್ಟ್ಕಾರ್ಡ್ ಕನ್ನಡ ತನ್ನ ಫೇಸ್ಬುಕ್ ಪುಟದಲ್ಲಿ ಹೇಳಿದೆ. ಈ ಪೋಸ್ಟರ್ನಲ್ಲಿ ಔಟ್ಲುಕ್ ನಿಯತಕಾಲಿಕದ ಸುದ್ದಿಯೊಂದರ ಸ್ಕ್ರೀನ್ಶಾಟ್ ಲಗತ್ತಿಸಿದೆ. ‘ಪೋಲಿಯೊ ನಿರ್ಮೂಲನೆಯಲ್ಲಿ ಆರ್ಎಸ್ಎಸ್ ಮತ್ತು ಸೇವಾ ಭಾರತಿ ಮಹತ್ವದ ಪಾತ್ರವಹಿಸಿವೆ: ವರ್ಧನ್’ ಎಂದು ತಲೆಬರಹ ಆ ಸ್ಕ್ರೀನ್ಶಾಟ್ನಲ್ಲಿದೆ. 2019ರ ಅಕ್ಟೋಬರ್ 31ರಂದು ಈ ಸುದ್ದಿ ಪ್ರಕಟವಾಗಿದೆ. ಸುದ್ದಿಯ ಮೂಲ ಪಿಟಿಐ ಎಂಬ ವಿವರ ಆ ಸ್ಕ್ರೀನ್ಶಾಟ್ನಲ್ಲಿದೆ.