‘ಶಿವಸೇನಾದ (ಉದ್ಧವ್ ಬಣ) ಚುನಾವಣಾ ರ್ಯಾಲಿಯಲ್ಲಿ ಪಾಕಿಸ್ತಾನದ ಧ್ವಜ! ಪಿಎಫ್ಐ, ಸೆಮಿ, ಅಲ್ಕೈದಾ ಅವರೆಲ್ಲಾ ಈಗ ಮಾತೋಶ್ರೀ ಬಿರಿಯಾನಿ ತಿನ್ನುವರೇ... ಮುಂಬೈನಲ್ಲಿ ದಾವೂದ್ ಕೂಡ ಸ್ಮಾರಕ ಕಟ್ಟಿಸುತ್ತಾನೆ. ಇವನನ್ನು ಬಾಳಾ ಸಾಬೇಬ್ ಅವರ ‘ನಿಜವಾದ ಪುತ್ರ’ ಎಂದು ಕರೆಯಬೇಕಂತೆ’ ಎಂದು ಬಿಜೆಪಿ ನಾಯಕ ನಿಲೇಶ್ ರಾಣೆ ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಲೋಕಸಭಾ ಚುನಾವಣೆ ಪ್ರಚಾರದ ಶಿವಸೇನಾ (ಉದ್ಧವ್ ಬಣ) ರ್ಯಾಲಿಯಲ್ಲಿ ಪಾಕಿಸ್ತಾನದ ಧ್ವಜ ಕಂಡುಬಂದಿದೆ ಎಂದು ಆರೋಪಿಸಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಇದು ಸುಳ್ಳು ಸುದ್ದಿ.