<p><strong>ಮೊರಿಗಾಂವ್</strong>: ಅಸ್ಸಾಂನ ಮೋರಿಗಾಂವ್ ಜಿಲ್ಲೆಯಲ್ಲಿ ಅರಣ್ಯ ಹಾಗೂ ರೈಲ್ವೆ ಇಲಾಖೆಗೆ ಸೇರಿದ ಜಾಗಗಳಲ್ಲಿ ಅಕ್ರಮವಾಗಿ ನೆಲೆಸಿದ್ದ ಸುಮಾರು 1,500 ಕುಟುಂಬಗಳನ್ನು ರಾಜ್ಯ ಸರ್ಕಾರ ಸೋಮವಾರ ತೆರವುಗೊಳಿಸಿದೆ.</p>.<p>ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ದೇವಾಶಿಶ್ ಶರ್ಮಾ, ‘ಜಾಗಿರೋಡ್ನ ಸಿಲಭಂಗಾ ಗ್ರಾಮದಲ್ಲಿರುವ ಸರ್ಕಾರಿ ಜಾಗದಲ್ಲಿ ಸುಮಾರು 10 ಸಾವಿರ ಮಂದಿ ವಾಸವಿದ್ದರು. 10 ದಿನಗಳಲ್ಲಿ ಜಾಗ ತೆರವುಗೊಳಿಸುವಂತೆ ಅವರಿಗೆ ಜೂನ್ 12ರಂದು ನೋಟಿಸ್ ನೀಡಲಾಗಿತ್ತು. ಈ ಪ್ರಕಾರ ಬಹುತೇಕ ಮಂದಿ ಬೇರೆಡೆ ಹೋಗಿದ್ದಾರೆ. ಮಕ್ಕಳ ವಿವಿಧ ಪರೀಕ್ಷೆ ಇರುವ ಕಾರಣ ಜಾಗ ಖಾಲಿ ಮಾಡಲು ಹೆಚ್ಚುವರಿ ಸಮಯ ಬೇಕೆಂದು ಕೆಲವರು ಕೋರಿದ್ದರು. ಮಾನವೀಯತೆ ನೆಲೆಯಲ್ಲಿ ಅಂಥವರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು’ ಎಂದರು. </p>.<p>‘ಯಾವುದೇ ಮನೆಯನ್ನು ಕೆಡವಿಹಾಕದೆ ಅಥವಾ ಬಲ ಪ್ರಯೋಗಿಸದೆ ಜಾಗ ಖಾಲಿ ಮಾಡಿಸುವುದು ಸರ್ಕಾರದ ಉದ್ದೇಶವಾಗಿತ್ತು. ಈ ನಿಟ್ಟಿನಲ್ಲಿ ಜನರ ಜೊತೆಗೆ ಚರ್ಚಿಸಿದ್ದೆವು. ಶೇ 80ರಷ್ಟು ಜನರು ಜಾಗ ಖಾಲಿ ಮಾಡಿದ್ದಾರೆ’ ಎಂದು ಅವರು ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೊರಿಗಾಂವ್</strong>: ಅಸ್ಸಾಂನ ಮೋರಿಗಾಂವ್ ಜಿಲ್ಲೆಯಲ್ಲಿ ಅರಣ್ಯ ಹಾಗೂ ರೈಲ್ವೆ ಇಲಾಖೆಗೆ ಸೇರಿದ ಜಾಗಗಳಲ್ಲಿ ಅಕ್ರಮವಾಗಿ ನೆಲೆಸಿದ್ದ ಸುಮಾರು 1,500 ಕುಟುಂಬಗಳನ್ನು ರಾಜ್ಯ ಸರ್ಕಾರ ಸೋಮವಾರ ತೆರವುಗೊಳಿಸಿದೆ.</p>.<p>ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ದೇವಾಶಿಶ್ ಶರ್ಮಾ, ‘ಜಾಗಿರೋಡ್ನ ಸಿಲಭಂಗಾ ಗ್ರಾಮದಲ್ಲಿರುವ ಸರ್ಕಾರಿ ಜಾಗದಲ್ಲಿ ಸುಮಾರು 10 ಸಾವಿರ ಮಂದಿ ವಾಸವಿದ್ದರು. 10 ದಿನಗಳಲ್ಲಿ ಜಾಗ ತೆರವುಗೊಳಿಸುವಂತೆ ಅವರಿಗೆ ಜೂನ್ 12ರಂದು ನೋಟಿಸ್ ನೀಡಲಾಗಿತ್ತು. ಈ ಪ್ರಕಾರ ಬಹುತೇಕ ಮಂದಿ ಬೇರೆಡೆ ಹೋಗಿದ್ದಾರೆ. ಮಕ್ಕಳ ವಿವಿಧ ಪರೀಕ್ಷೆ ಇರುವ ಕಾರಣ ಜಾಗ ಖಾಲಿ ಮಾಡಲು ಹೆಚ್ಚುವರಿ ಸಮಯ ಬೇಕೆಂದು ಕೆಲವರು ಕೋರಿದ್ದರು. ಮಾನವೀಯತೆ ನೆಲೆಯಲ್ಲಿ ಅಂಥವರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು’ ಎಂದರು. </p>.<p>‘ಯಾವುದೇ ಮನೆಯನ್ನು ಕೆಡವಿಹಾಕದೆ ಅಥವಾ ಬಲ ಪ್ರಯೋಗಿಸದೆ ಜಾಗ ಖಾಲಿ ಮಾಡಿಸುವುದು ಸರ್ಕಾರದ ಉದ್ದೇಶವಾಗಿತ್ತು. ಈ ನಿಟ್ಟಿನಲ್ಲಿ ಜನರ ಜೊತೆಗೆ ಚರ್ಚಿಸಿದ್ದೆವು. ಶೇ 80ರಷ್ಟು ಜನರು ಜಾಗ ಖಾಲಿ ಮಾಡಿದ್ದಾರೆ’ ಎಂದು ಅವರು ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>