<p><strong>ಭುವನೇಶ್ವರ</strong>: ಭವಿಷ್ಯ ‘ಯುದ್ಧ’ದಲ್ಲಿ ಅಲ್ಲ, ‘ಬುದ್ಧ’ನಲ್ಲಿ ಇದೆ ಎಂದು ಸಾರುವ ಪರಂಪರೆಯನ್ನು ಭಾರತ ಹೊಂದಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ಜಗತ್ತು ಇಂದು ಭಾರತದ ಮಾತನ್ನು ಆಲಿಸುತ್ತಿದೆ’ ಎಂದು ಪ್ರತಿಪಾದಿಸಿದರು.</p><p>ಭುವನೇಶ್ವರದಲ್ಲಿ ಗುರುವಾರ ನಡೆದ 18ನೇ ಪ್ರವಾಸಿ ಭಾರತೀಯ ದಿವಸ್ ಸಮಾವೇಶದಲ್ಲಿ ವಲಸಿಗ ಸಮುದಾಯದವರನ್ನು ಉದ್ದೇಶಿಸಿ ಅವರು ಮಾತನಾಡಿದರು.</p><p>‘ಭಾರತವು ಪ್ರಜಾಪ್ರಭುತ್ವದ ತಾಯಿಯಷ್ಟೇ ಅಲ್ಲ, ಪ್ರಜಾಪ್ರಭುತ್ವ ಇಲ್ಲಿನ ಜನರ ಜೀವನದ ಭಾಗವೂ ಆಗಿದೆ’ ಎಂದರು.</p><p>‘ವಿಶ್ವವೇ ಇಂದು ಭಾರತದ ಮಾತುಗಳನ್ನು ಕೇಳಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಭಾರತವು ತನ್ನ ಅಭಿಪ್ರಾಯಗಳ ಜತೆಗೆ ಜಾಗತಿಕವಾಗಿ ದಕ್ಷಿಣ ದೇಶಗಳ ಅಭಿಪ್ರಾಯವನ್ನು ಬಲವಾಗಿ ಪ್ರಸ್ತುತಪಡಿಸುತ್ತಿದೆ’ ಎಂದು ಹೇಳಿದರು.</p><p>‘ಜಗತ್ತಿನಲ್ಲಿ ಖಡ್ಗದ ಬಲದಿಂದ ಸಾಮ್ರಾಜ್ಯಗಳು ವಿಸ್ತರಣೆ ಆಗುತ್ತಿದ್ದ ಸಂದರ್ಭದಲ್ಲಿ ಅಶೋಕ ಚಕ್ರವರ್ತಿ ಶಾಂತಿಯ ಮಾರ್ಗವನ್ನು ಆಯ್ಕೆ ಮಾಡಿಕೊಂಡ. ಇದು ಭಾರತದ ಪರಂಪರೆಯ ಶಕ್ತಿಯಾಗಿದೆ’ ಎಂದು ಅವರು ಬಣ್ಣಿಸಿದರು. ಈ ಪರಂಪರೆಯಿಂದಾಗಿ ಭಾರತವು ಜಗತ್ತಿಗೆ ಶಾಂತಿಯ ಬಗ್ಗೆ ಹೇಳಲು ಸಾಧ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.</p><p>ಅನ್ಯ ದೇಶಗಳಲ್ಲಿ ನೆಲೆಸಿರುವ ಭಾರತೀಯರನ್ನು ದೇಶದ ರಾಯಭಾರಿಗಳೆಂದು ಸದಾ ಪರಿಗಣಿಸುವುದಾಗಿ ಮೋದಿ ಇದೇ ವೇಳೆ ತಿಳಿಸಿದರು.</p><p>‘ನಮ್ಮ ಜೀವನವೇ ವೈವಿಧ್ಯದಿಂದ ಕೂಡಿದೆ. ಹೀಗಾಗಿ ನಾವು ಎಲ್ಲೇ ಹೋದರು ಅಲ್ಲಿನ ಸಮುದಾಯದವರ ಜತೆ ಬೆರೆಯುತ್ತೇವೆ. ಅಲ್ಲಿನ ಕಾನೂನು, ನಿಯಮ ಮತ್ತು ಸಂಪ್ರದಾಯಗಳನ್ನು<br>ಗೌರವಿಸಿ ಪಾಲಿಸುತ್ತೇವೆ. ಇದೇ ವೇಳೆ ನಮ್ಮ ಹೃದಯವೂ ಭಾರತಕ್ಕಾಗಿ ತುಡಿಯುತ್ತಿರುತ್ತದೆ’ ಎಂದು ಅವರು ಹೇಳಿದರು.<br></p><p>2047ಕ್ಕೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸಲು ವಲಸಿಗರು ಮಹತ್ವದ ಪಾತ್ರವಹಿಸಬೇಕು ಎಂದು ಅವರು ಕರೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭುವನೇಶ್ವರ</strong>: ಭವಿಷ್ಯ ‘ಯುದ್ಧ’ದಲ್ಲಿ ಅಲ್ಲ, ‘ಬುದ್ಧ’ನಲ್ಲಿ ಇದೆ ಎಂದು ಸಾರುವ ಪರಂಪರೆಯನ್ನು ಭಾರತ ಹೊಂದಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ಜಗತ್ತು ಇಂದು ಭಾರತದ ಮಾತನ್ನು ಆಲಿಸುತ್ತಿದೆ’ ಎಂದು ಪ್ರತಿಪಾದಿಸಿದರು.</p><p>ಭುವನೇಶ್ವರದಲ್ಲಿ ಗುರುವಾರ ನಡೆದ 18ನೇ ಪ್ರವಾಸಿ ಭಾರತೀಯ ದಿವಸ್ ಸಮಾವೇಶದಲ್ಲಿ ವಲಸಿಗ ಸಮುದಾಯದವರನ್ನು ಉದ್ದೇಶಿಸಿ ಅವರು ಮಾತನಾಡಿದರು.</p><p>‘ಭಾರತವು ಪ್ರಜಾಪ್ರಭುತ್ವದ ತಾಯಿಯಷ್ಟೇ ಅಲ್ಲ, ಪ್ರಜಾಪ್ರಭುತ್ವ ಇಲ್ಲಿನ ಜನರ ಜೀವನದ ಭಾಗವೂ ಆಗಿದೆ’ ಎಂದರು.</p><p>‘ವಿಶ್ವವೇ ಇಂದು ಭಾರತದ ಮಾತುಗಳನ್ನು ಕೇಳಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಭಾರತವು ತನ್ನ ಅಭಿಪ್ರಾಯಗಳ ಜತೆಗೆ ಜಾಗತಿಕವಾಗಿ ದಕ್ಷಿಣ ದೇಶಗಳ ಅಭಿಪ್ರಾಯವನ್ನು ಬಲವಾಗಿ ಪ್ರಸ್ತುತಪಡಿಸುತ್ತಿದೆ’ ಎಂದು ಹೇಳಿದರು.</p><p>‘ಜಗತ್ತಿನಲ್ಲಿ ಖಡ್ಗದ ಬಲದಿಂದ ಸಾಮ್ರಾಜ್ಯಗಳು ವಿಸ್ತರಣೆ ಆಗುತ್ತಿದ್ದ ಸಂದರ್ಭದಲ್ಲಿ ಅಶೋಕ ಚಕ್ರವರ್ತಿ ಶಾಂತಿಯ ಮಾರ್ಗವನ್ನು ಆಯ್ಕೆ ಮಾಡಿಕೊಂಡ. ಇದು ಭಾರತದ ಪರಂಪರೆಯ ಶಕ್ತಿಯಾಗಿದೆ’ ಎಂದು ಅವರು ಬಣ್ಣಿಸಿದರು. ಈ ಪರಂಪರೆಯಿಂದಾಗಿ ಭಾರತವು ಜಗತ್ತಿಗೆ ಶಾಂತಿಯ ಬಗ್ಗೆ ಹೇಳಲು ಸಾಧ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.</p><p>ಅನ್ಯ ದೇಶಗಳಲ್ಲಿ ನೆಲೆಸಿರುವ ಭಾರತೀಯರನ್ನು ದೇಶದ ರಾಯಭಾರಿಗಳೆಂದು ಸದಾ ಪರಿಗಣಿಸುವುದಾಗಿ ಮೋದಿ ಇದೇ ವೇಳೆ ತಿಳಿಸಿದರು.</p><p>‘ನಮ್ಮ ಜೀವನವೇ ವೈವಿಧ್ಯದಿಂದ ಕೂಡಿದೆ. ಹೀಗಾಗಿ ನಾವು ಎಲ್ಲೇ ಹೋದರು ಅಲ್ಲಿನ ಸಮುದಾಯದವರ ಜತೆ ಬೆರೆಯುತ್ತೇವೆ. ಅಲ್ಲಿನ ಕಾನೂನು, ನಿಯಮ ಮತ್ತು ಸಂಪ್ರದಾಯಗಳನ್ನು<br>ಗೌರವಿಸಿ ಪಾಲಿಸುತ್ತೇವೆ. ಇದೇ ವೇಳೆ ನಮ್ಮ ಹೃದಯವೂ ಭಾರತಕ್ಕಾಗಿ ತುಡಿಯುತ್ತಿರುತ್ತದೆ’ ಎಂದು ಅವರು ಹೇಳಿದರು.<br></p><p>2047ಕ್ಕೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸಲು ವಲಸಿಗರು ಮಹತ್ವದ ಪಾತ್ರವಹಿಸಬೇಕು ಎಂದು ಅವರು ಕರೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>