<p><strong>ಅಹಮದಾಬಾದ್:</strong> ರಾಜ್ಯದಲ್ಲಿ ಉತ್ತರಾಯಣದ ಗಾಳಿಪಟ ಉತ್ಸವದ ವೇಳೆ ನಡೆದಿರುವ ಪ್ರತ್ಯೇಕ ಅವಘಡಗಳಲ್ಲಿ 22 ಜನರು ಮೃತಪಟ್ಟಿದ್ದಾರೆ. ಇವರಲ್ಲಿ ಹೆಚ್ಚಿನವರು ಮಾಂಜಾ ದಾರ ಕುತ್ತಿಗೆ ಸೀಳಿ ಮತ್ತು ಗಾಳಿ ಪಟ ಹಾರಿಸುವಾಗ ಆಯತಪ್ಪಿ ಟೆರೇಸ್ನಿಂದ ಬಿದ್ದು ಸತ್ತಿದ್ದಾರೆ.</p>.<p>ಮೃತಪಟ್ಟವರಲ್ಲಿ ಪಂಚಮಹಲ್ ಜಿಲ್ಲೆಯ ನಾಲ್ಕು ವರ್ಷದ ಬಾಲಕ ತನ್ನ ತಂದೆಯೊಂದಿಗೆ ಬೈಕ್ನಲ್ಲಿ ಹೋಗುತ್ತಿದ್ದಾಗ ಮಾರಕ ಗಾಜು ಲೇಪಿತ ದಾರ ಅಥವಾ ಮಾಂಜಾ ಆ ಬಾಲಕನ ಕುತ್ತಿಗೆಯನ್ನು ಸೀಳಿತ್ತು.</p>.<p>ಪಟಾನ್ ಜಿಲ್ಲೆಯ ಬಿಲ್ಡರ್ ಒಬ್ಬರ ಮಗ ಗಾಳಿಪಟದ ದಾರದಿಂದ ಗಾಯಗೊಂಡ ನಂತರ ಆತನ ಕುತ್ತಿಗೆಗೆ ಸುಮಾರು 200 ಹೊಲಿಗೆಗಳನ್ನು ಹಾಕಲಾಗಿದೆ. ಭರೂಚ್ನಲ್ಲಿ 32 ವರ್ಷದ ವ್ಯಕ್ತಿಯೊಬ್ಬರು ಬೈಕ್ನಲ್ಲಿ ಹೋಗುತ್ತಿದ್ದಾಗ ಮಾಂಜಾ ಕುತ್ತಿಗೆ ಕೊಯ್ದು ಮೃತಪಟ್ಟಿದ್ದಾರೆ. </p>.<p class="title">ರಾಜ್ಕೋಟ್, ಮೆಹ್ಸಾಣಾ, ಸೂರತ್ ಮತ್ತು ಅಹಮದಾಬಾದ್ ನಂತರದಲ್ಲಿ ಅತಿ ಹೆಚ್ಚು ಅವಘಡಗಳು ವಡೋದರಾದಿಂದ ವರದಿಯಾಗಿವೆ. ಅಂದಾಜಿನ ಪ್ರಕಾರ, ಹಬ್ಬದ ಸಮಯದಲ್ಲಿ 2,500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.</p>.<p class="title">ರಾಜ್ಯ ತುರ್ತು ಆರೋಗ್ಯ ಸೇವೆಯ ಮಾಹಿತಿಯ ಪ್ರಕಾರ, ಉತ್ತರಾಯಣ ಆಚರಿಸುವ ಜನವರಿ 14 ರಂದು ಗಾಳಿಪಟದ ದಾರದಿಂದ 168 ಮಂದಿ ಗಾಯಗೊಂಡ ಪ್ರಕರಣಗಳು ವರದಿಯಾಗಿವೆ. ಅಲ್ಲದೆ, ಜನವರಿ 15ರಂದು ಇಂತಹ 67 ಪ್ರಕರಣಗಳು ವರದಿಯಾಗಿವೆ.</p>.<p>ಮಾಂಜಾ ತಯಾರಿಸುವುದು, ಮಾರಾಟ ಮಾಡುವುದು ಮತ್ತು ಸಂಗ್ರಹಿಸಿದ್ದಕ್ಕಾಗಿ 600ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿ, ಎಫ್ಐಆರ್ ದಾಖಲಿಸಿದ್ದಾರೆ.</p>.<p>ಗುಜರಾತ್ ಹೈಕೋರ್ಟ್ ನಿರ್ದೇಶನದ ಮೇರೆಗೆ ಮಾಂಜಾ ವಿರುದ್ಧ ರಾಜ್ಯ ಸರ್ಕಾರ ನಡೆಸಿದ ಅಭಿಯಾನದ ಹೊರತಾಗಿಯೂ ಇಷ್ಟೊಂದು ಅವಘಡಗಳು ಸಂಭವಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಹಮದಾಬಾದ್:</strong> ರಾಜ್ಯದಲ್ಲಿ ಉತ್ತರಾಯಣದ ಗಾಳಿಪಟ ಉತ್ಸವದ ವೇಳೆ ನಡೆದಿರುವ ಪ್ರತ್ಯೇಕ ಅವಘಡಗಳಲ್ಲಿ 22 ಜನರು ಮೃತಪಟ್ಟಿದ್ದಾರೆ. ಇವರಲ್ಲಿ ಹೆಚ್ಚಿನವರು ಮಾಂಜಾ ದಾರ ಕುತ್ತಿಗೆ ಸೀಳಿ ಮತ್ತು ಗಾಳಿ ಪಟ ಹಾರಿಸುವಾಗ ಆಯತಪ್ಪಿ ಟೆರೇಸ್ನಿಂದ ಬಿದ್ದು ಸತ್ತಿದ್ದಾರೆ.</p>.<p>ಮೃತಪಟ್ಟವರಲ್ಲಿ ಪಂಚಮಹಲ್ ಜಿಲ್ಲೆಯ ನಾಲ್ಕು ವರ್ಷದ ಬಾಲಕ ತನ್ನ ತಂದೆಯೊಂದಿಗೆ ಬೈಕ್ನಲ್ಲಿ ಹೋಗುತ್ತಿದ್ದಾಗ ಮಾರಕ ಗಾಜು ಲೇಪಿತ ದಾರ ಅಥವಾ ಮಾಂಜಾ ಆ ಬಾಲಕನ ಕುತ್ತಿಗೆಯನ್ನು ಸೀಳಿತ್ತು.</p>.<p>ಪಟಾನ್ ಜಿಲ್ಲೆಯ ಬಿಲ್ಡರ್ ಒಬ್ಬರ ಮಗ ಗಾಳಿಪಟದ ದಾರದಿಂದ ಗಾಯಗೊಂಡ ನಂತರ ಆತನ ಕುತ್ತಿಗೆಗೆ ಸುಮಾರು 200 ಹೊಲಿಗೆಗಳನ್ನು ಹಾಕಲಾಗಿದೆ. ಭರೂಚ್ನಲ್ಲಿ 32 ವರ್ಷದ ವ್ಯಕ್ತಿಯೊಬ್ಬರು ಬೈಕ್ನಲ್ಲಿ ಹೋಗುತ್ತಿದ್ದಾಗ ಮಾಂಜಾ ಕುತ್ತಿಗೆ ಕೊಯ್ದು ಮೃತಪಟ್ಟಿದ್ದಾರೆ. </p>.<p class="title">ರಾಜ್ಕೋಟ್, ಮೆಹ್ಸಾಣಾ, ಸೂರತ್ ಮತ್ತು ಅಹಮದಾಬಾದ್ ನಂತರದಲ್ಲಿ ಅತಿ ಹೆಚ್ಚು ಅವಘಡಗಳು ವಡೋದರಾದಿಂದ ವರದಿಯಾಗಿವೆ. ಅಂದಾಜಿನ ಪ್ರಕಾರ, ಹಬ್ಬದ ಸಮಯದಲ್ಲಿ 2,500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.</p>.<p class="title">ರಾಜ್ಯ ತುರ್ತು ಆರೋಗ್ಯ ಸೇವೆಯ ಮಾಹಿತಿಯ ಪ್ರಕಾರ, ಉತ್ತರಾಯಣ ಆಚರಿಸುವ ಜನವರಿ 14 ರಂದು ಗಾಳಿಪಟದ ದಾರದಿಂದ 168 ಮಂದಿ ಗಾಯಗೊಂಡ ಪ್ರಕರಣಗಳು ವರದಿಯಾಗಿವೆ. ಅಲ್ಲದೆ, ಜನವರಿ 15ರಂದು ಇಂತಹ 67 ಪ್ರಕರಣಗಳು ವರದಿಯಾಗಿವೆ.</p>.<p>ಮಾಂಜಾ ತಯಾರಿಸುವುದು, ಮಾರಾಟ ಮಾಡುವುದು ಮತ್ತು ಸಂಗ್ರಹಿಸಿದ್ದಕ್ಕಾಗಿ 600ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿ, ಎಫ್ಐಆರ್ ದಾಖಲಿಸಿದ್ದಾರೆ.</p>.<p>ಗುಜರಾತ್ ಹೈಕೋರ್ಟ್ ನಿರ್ದೇಶನದ ಮೇರೆಗೆ ಮಾಂಜಾ ವಿರುದ್ಧ ರಾಜ್ಯ ಸರ್ಕಾರ ನಡೆಸಿದ ಅಭಿಯಾನದ ಹೊರತಾಗಿಯೂ ಇಷ್ಟೊಂದು ಅವಘಡಗಳು ಸಂಭವಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>