<p><strong>ಹೈದರಾಬಾದ್</strong>: ತೆಲಂಗಾಣ ಸರ್ಕಾರದ ‘ದಲಿತ ಬಂಧು’ ಯೋಜನೆಯಲ್ಲಿ ಬಿಆರ್ಎಸ್ ಶಾಸಕರು ಶೇಕಡ 30ರಷ್ಟು ಕಮಿಷನ್ ಸಂಗ್ರಹಿಸಿದ್ದಾರೆ ಎಂದು ಆರೋಪಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೆ. ಚಂದ್ರಶೇಖರ ರಾವ್ ನೇತೃತ್ವದ ಸರ್ಕಾರವನ್ನು ಮನೆಗೆ ಕಳುಹಿಸಬೇಕು ಎಂದು ಕರೆ ನೀಡಿದರು. </p>.<p>ನಾರಾಯಣಪೇಟ್ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ನಡ್ಡಾ, ‘ಕಾಲೇಶ್ವರಂ ನೀರಾವರಿ ಯೋಜನೆಯು ಕೆಸಿಆರ್ ಅವರಿಗೆ ಎಟಿಎಂ ಆಗಿ ಕಾರ್ಯನಿರ್ವಹಿಸಿತು. ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಯೋಜನೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಲಾಗುವುದು’ ಎಂದರು.</p>.<p>ಮತಗಳಿಗಾಗಿ ರಾವ್ ತುಷ್ಟೀಕರಣದಲ್ಲಿ ತೊಡಗಿದ್ದಾರೆ. ನಿರ್ದಿಷ್ಟ ಸಮುದಾಯದ ಮೀಸಲಾತಿಯನ್ನು ಶೇಕಡ 4ರಿಂದ 12ಕ್ಕೆ ಹೆಚ್ಚಿಸಲು ಪ್ರಸ್ತಾಪಿಸುವುದರ ಜೊತೆಗೆ ಉರ್ದುವನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಮಾಡಿದ್ದಾರೆ. ರಾಜ್ಯದ ದೇವಾಲಯಗಳ ಭೂಮಿಯನ್ನು ಇತರ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ ಎಂದು ಅವರು ದೂರಿದರು.</p>.<p>‘ದಲಿತ ಬಂಧು ಯೋಜನೆಯಲ್ಲಿ ಬಿಆರ್ಎಸ್ ಶಾಸಕರು ಶೇ 30ರಷ್ಟು ಕಮಿಷನ್ ಪಡೆದಿದ್ದಾರೆಯೇ, ಇಲ್ಲವೇ? ಶಾಸಕರು ಶೇಕಡ 30ರಷ್ಟು ಕಡಿತಗೊಳಿಸುತ್ತಿದ್ದಾರೆ ಎಂದು ನೀವು (ಕೆಸಿಆರ್) ಶಾಸಕರ ಸಭೆಯಲ್ಲಿ ಹೇಳಿಲ್ಲವೇ? ಈ 30 ಪರ್ಸೆಂಟ್ ಕಮಿಷನ್ ಸರ್ಕಾರವನ್ನು ನವೆಂಬರ್ 30ರಂದು ಮನೆಗೆ ಕಳುಹಿಸಬೇಕು ಮತ್ತು ಬಿಜೆಪಿ ಸರ್ಕಾರವನ್ನು ತರಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ’ ಎಂದು ನಡ್ಡಾ ಹೇಳಿದರು. ತೆಲಂಗಾಣವು ಶೇಕಡ 8.5ರಷ್ಟು ಹಣದುಬ್ಬರದಿಂದ ತತ್ತರಿಸುತ್ತಿದೆ ಮತ್ತು ಇಂಧನ ಬೆಲೆಗಳು ದೇಶದಲ್ಲೇ ಅತಿ ಹೆಚ್ಚು ಎಂದರು. </p>.<p>'ದಲಿತ ಬಂಧು' ಬಿಆರ್ಎಸ್ನ ಪ್ರಮುಖ ಯೋಜನೆಯಾಗಿದ್ದು, ಇದು ಪ್ರತಿ ಫಲಾನುಭವಿಗೆ ಅವರ ಆಯ್ಕೆಯ ಯಾವುದೇ ವ್ಯವಹಾರ ಕೈಗೊಳ್ಳಲು ₹10 ಲಕ್ಷದಷ್ಟು ಆರ್ಥಿಕ ಸಹಾಯ ಒದಗಿಸುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್</strong>: ತೆಲಂಗಾಣ ಸರ್ಕಾರದ ‘ದಲಿತ ಬಂಧು’ ಯೋಜನೆಯಲ್ಲಿ ಬಿಆರ್ಎಸ್ ಶಾಸಕರು ಶೇಕಡ 30ರಷ್ಟು ಕಮಿಷನ್ ಸಂಗ್ರಹಿಸಿದ್ದಾರೆ ಎಂದು ಆರೋಪಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೆ. ಚಂದ್ರಶೇಖರ ರಾವ್ ನೇತೃತ್ವದ ಸರ್ಕಾರವನ್ನು ಮನೆಗೆ ಕಳುಹಿಸಬೇಕು ಎಂದು ಕರೆ ನೀಡಿದರು. </p>.<p>ನಾರಾಯಣಪೇಟ್ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ನಡ್ಡಾ, ‘ಕಾಲೇಶ್ವರಂ ನೀರಾವರಿ ಯೋಜನೆಯು ಕೆಸಿಆರ್ ಅವರಿಗೆ ಎಟಿಎಂ ಆಗಿ ಕಾರ್ಯನಿರ್ವಹಿಸಿತು. ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಯೋಜನೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಲಾಗುವುದು’ ಎಂದರು.</p>.<p>ಮತಗಳಿಗಾಗಿ ರಾವ್ ತುಷ್ಟೀಕರಣದಲ್ಲಿ ತೊಡಗಿದ್ದಾರೆ. ನಿರ್ದಿಷ್ಟ ಸಮುದಾಯದ ಮೀಸಲಾತಿಯನ್ನು ಶೇಕಡ 4ರಿಂದ 12ಕ್ಕೆ ಹೆಚ್ಚಿಸಲು ಪ್ರಸ್ತಾಪಿಸುವುದರ ಜೊತೆಗೆ ಉರ್ದುವನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಮಾಡಿದ್ದಾರೆ. ರಾಜ್ಯದ ದೇವಾಲಯಗಳ ಭೂಮಿಯನ್ನು ಇತರ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ ಎಂದು ಅವರು ದೂರಿದರು.</p>.<p>‘ದಲಿತ ಬಂಧು ಯೋಜನೆಯಲ್ಲಿ ಬಿಆರ್ಎಸ್ ಶಾಸಕರು ಶೇ 30ರಷ್ಟು ಕಮಿಷನ್ ಪಡೆದಿದ್ದಾರೆಯೇ, ಇಲ್ಲವೇ? ಶಾಸಕರು ಶೇಕಡ 30ರಷ್ಟು ಕಡಿತಗೊಳಿಸುತ್ತಿದ್ದಾರೆ ಎಂದು ನೀವು (ಕೆಸಿಆರ್) ಶಾಸಕರ ಸಭೆಯಲ್ಲಿ ಹೇಳಿಲ್ಲವೇ? ಈ 30 ಪರ್ಸೆಂಟ್ ಕಮಿಷನ್ ಸರ್ಕಾರವನ್ನು ನವೆಂಬರ್ 30ರಂದು ಮನೆಗೆ ಕಳುಹಿಸಬೇಕು ಮತ್ತು ಬಿಜೆಪಿ ಸರ್ಕಾರವನ್ನು ತರಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ’ ಎಂದು ನಡ್ಡಾ ಹೇಳಿದರು. ತೆಲಂಗಾಣವು ಶೇಕಡ 8.5ರಷ್ಟು ಹಣದುಬ್ಬರದಿಂದ ತತ್ತರಿಸುತ್ತಿದೆ ಮತ್ತು ಇಂಧನ ಬೆಲೆಗಳು ದೇಶದಲ್ಲೇ ಅತಿ ಹೆಚ್ಚು ಎಂದರು. </p>.<p>'ದಲಿತ ಬಂಧು' ಬಿಆರ್ಎಸ್ನ ಪ್ರಮುಖ ಯೋಜನೆಯಾಗಿದ್ದು, ಇದು ಪ್ರತಿ ಫಲಾನುಭವಿಗೆ ಅವರ ಆಯ್ಕೆಯ ಯಾವುದೇ ವ್ಯವಹಾರ ಕೈಗೊಳ್ಳಲು ₹10 ಲಕ್ಷದಷ್ಟು ಆರ್ಥಿಕ ಸಹಾಯ ಒದಗಿಸುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>