ಈ ಘಟನೆಯಲ್ಲಿ ಸಿಲುಕಿ ಬದುಕುಳಿದ ಸಂತ್ರಸ್ತರಾದ ರೈಲ್ವೆಯ ನಿವೃತ್ತ ಅಧಿಕಾರಿಯಾದ ಮಹೇಂದ್ರಜೀತ್ ಸಿಂಗ್ ಮಾತನಾಡಿ, ‘ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ಸ್ವಲ್ಪವೇ ದೂರವಿರುವ ರೈಲ್ವೆ ಕಾಲೊನಿಯಲ್ಲಿ ನನ್ನ ಮನೆ ಇತ್ತು. ಅಂದು ರಾತ್ರಿ ವಿಷಅನಿಲ ಸೇವನೆಯಿಂದಾಗಿ ಜನರ ನರಳಾಟ ಮತ್ತು ಕೂಗಾಟ ಕೇಳಿ ನನಗೆ ಮತ್ತು ಕುಟುಂಬಸ್ಥರಿಗೆ ತುಂಬಾ ಗಾಬರಿಯಾಯಿತು. ಅಂದು ರಾತ್ರಿ ಜನರು ಕುಸಿದು ಬೀಳುವುದನ್ನು ಕಂಡು ನಾನು ನಡುಗಿಹೋಗಿದ್ದೆ. ಆಗ ನಾನು ಮತ್ತು ಕುಟುಂಬಸ್ಥರು ಮನೆಯನ್ನು ತೊರೆದು ಸ್ಕೂಟರ್ನಲ್ಲಿ ನಾಲ್ಕು ಕಿ. ಮೀ ದೂರ ಇರುವ ಹೋಟೆಲ್ನಲ್ಲಿ ತಂಗಿದ್ದೆವು. ಆದರೆ, ಈ ಘಟನೆಯಲ್ಲಿ ನನ್ನ ಹಲವು ಸಹೋದ್ಯೋಗಿಗಳನ್ನು ಕಳೆದುಕೊಂಡೆ’ ಎಂದು ಕಣ್ಣೀರಾದರು.