<p><strong>ನವದೆಹಲಿ:</strong> ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಉದ್ದೇಶದ ಮಸೂದೆಗೆ ಮೂರು ಮುಸ್ಲಿಂ ಸಂಘಟನೆಗಳು ಶುಕ್ರವಾರ ಬೆಂಬಲ ವ್ಯಕ್ತಪಡಿಸಿವೆ ಎಂದು ಮೂಲಗಳು ಹೇಳಿವೆ.</p>.<p>ಅಖಿಲ ಭಾರತ ಸಜ್ಜಾದನಶೀನ್ ಕೌನ್ಸಿಲ್, ಆರ್ಎಸ್ಎಸ್ ಅಂಗಸಂಸ್ಥೆ ರಾಷ್ಟ್ರೀಯ ಮುಸ್ಲಿಂ ಮಂಚ್ ಹಾಗೂ ಭಾರತ್ ಫಸ್ಟ್ ಎಂಬ ಸ್ವಯಂ ಸೇವಾ ಸಂಸ್ಥೆ ಈ ತಿದ್ದುಪಡಿ ಮಸೂದೆಯನ್ನು ಬೆಂಬಲಿಸಿವೆ.</p>.<p>ತಿದ್ದುಪಡಿ ಮಸೂದೆ ಕುರಿತು ರಚಿಸಲಾಗಿರುವ ಸಮಿತಿ ಮುಂದೆ ಪ್ರತ್ಯೇಕವಾಗಿ ಹಾಜರಾಗಿದ್ದ ಈ ಸಂಘಟನೆಗಳು, ತಮ್ಮ ಅಹವಾಲು ಸಲ್ಲಿಸಿ, ಬೆಂಬಲ ವ್ಯಕ್ತಪಡಿಸಿದವು ಎಂದು ಮೂಲಗಳು ಹೇಳಿವೆ.</p>.<p>ವಾಗ್ವಾದ: ಸಲಹೆ–ಸೂಚನೆಗಳನ್ನು ಆಲಿಸಲು ನಡೆದಿದ್ದ ಸಭೆಯಲ್ಲಿ, ಸಮಿತಿಯ ಕೆಲ ಸದಸ್ಯರ ನಡುವೆ ವಾಗ್ವಾದ ನಡೆಯಿತು ಎಂದು ಮೂಲಗಳು ಹೇಳಿವೆ.</p>.<p>‘ಮತ್ತೊಂದು ಕಡೆಯವರ ಅಭಿಪ್ರಾಯಗಳನ್ನು ಆಲಿಸಲು ಮುಕ್ತ ಮನಸು ಹೊಂದಿರಬೇಕು’ ಎಂದು ಸಮಿತಿಯಲ್ಲಿರುವ ವಿರೋಧ ಪಕ್ಷಗಳ ಸದಸ್ಯರನ್ನು ಉದ್ದೇಶಿಸಿ ಶಿವಸೇನಾ ನಾಯಕ ನರೇಶ್ ಮ್ಹಾಸ್ಕೆ ಹೇಳಿದ್ದು, ಜಟಾಪಟಿಗೆ ಕಾರಣವಾಯಿತು.</p>.<p>ಪ್ರವಾಸ: ಸಮಿತಿಯು ಸೆ.26ರಿಂದ ಅಕ್ಟೋಬರ್ 1ರ ನಡುವೆ ಮುಂಬೈ, ಅಹಮದಾಬಾದ್, ಹೈದರಾಬಾದ್, ಚೆನ್ನೈ ಹಾಗೂ ಬೆಂಗಳೂರಿಗೆ ಭೇಟಿ ನೀಡಿ, ವಿವಿಧ ಭಾಗೀದಾರರಿಂದ ಅಹವಾಲು ಸ್ವೀಕರಿಸಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಉದ್ದೇಶದ ಮಸೂದೆಗೆ ಮೂರು ಮುಸ್ಲಿಂ ಸಂಘಟನೆಗಳು ಶುಕ್ರವಾರ ಬೆಂಬಲ ವ್ಯಕ್ತಪಡಿಸಿವೆ ಎಂದು ಮೂಲಗಳು ಹೇಳಿವೆ.</p>.<p>ಅಖಿಲ ಭಾರತ ಸಜ್ಜಾದನಶೀನ್ ಕೌನ್ಸಿಲ್, ಆರ್ಎಸ್ಎಸ್ ಅಂಗಸಂಸ್ಥೆ ರಾಷ್ಟ್ರೀಯ ಮುಸ್ಲಿಂ ಮಂಚ್ ಹಾಗೂ ಭಾರತ್ ಫಸ್ಟ್ ಎಂಬ ಸ್ವಯಂ ಸೇವಾ ಸಂಸ್ಥೆ ಈ ತಿದ್ದುಪಡಿ ಮಸೂದೆಯನ್ನು ಬೆಂಬಲಿಸಿವೆ.</p>.<p>ತಿದ್ದುಪಡಿ ಮಸೂದೆ ಕುರಿತು ರಚಿಸಲಾಗಿರುವ ಸಮಿತಿ ಮುಂದೆ ಪ್ರತ್ಯೇಕವಾಗಿ ಹಾಜರಾಗಿದ್ದ ಈ ಸಂಘಟನೆಗಳು, ತಮ್ಮ ಅಹವಾಲು ಸಲ್ಲಿಸಿ, ಬೆಂಬಲ ವ್ಯಕ್ತಪಡಿಸಿದವು ಎಂದು ಮೂಲಗಳು ಹೇಳಿವೆ.</p>.<p>ವಾಗ್ವಾದ: ಸಲಹೆ–ಸೂಚನೆಗಳನ್ನು ಆಲಿಸಲು ನಡೆದಿದ್ದ ಸಭೆಯಲ್ಲಿ, ಸಮಿತಿಯ ಕೆಲ ಸದಸ್ಯರ ನಡುವೆ ವಾಗ್ವಾದ ನಡೆಯಿತು ಎಂದು ಮೂಲಗಳು ಹೇಳಿವೆ.</p>.<p>‘ಮತ್ತೊಂದು ಕಡೆಯವರ ಅಭಿಪ್ರಾಯಗಳನ್ನು ಆಲಿಸಲು ಮುಕ್ತ ಮನಸು ಹೊಂದಿರಬೇಕು’ ಎಂದು ಸಮಿತಿಯಲ್ಲಿರುವ ವಿರೋಧ ಪಕ್ಷಗಳ ಸದಸ್ಯರನ್ನು ಉದ್ದೇಶಿಸಿ ಶಿವಸೇನಾ ನಾಯಕ ನರೇಶ್ ಮ್ಹಾಸ್ಕೆ ಹೇಳಿದ್ದು, ಜಟಾಪಟಿಗೆ ಕಾರಣವಾಯಿತು.</p>.<p>ಪ್ರವಾಸ: ಸಮಿತಿಯು ಸೆ.26ರಿಂದ ಅಕ್ಟೋಬರ್ 1ರ ನಡುವೆ ಮುಂಬೈ, ಅಹಮದಾಬಾದ್, ಹೈದರಾಬಾದ್, ಚೆನ್ನೈ ಹಾಗೂ ಬೆಂಗಳೂರಿಗೆ ಭೇಟಿ ನೀಡಿ, ವಿವಿಧ ಭಾಗೀದಾರರಿಂದ ಅಹವಾಲು ಸ್ವೀಕರಿಸಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>