ರಾಷ್ಟ್ರೀಯ ಹೆದ್ದಾರಿ–16ರಲ್ಲಿರುವ ಶೋರೂಮ್ನಲ್ಲಿ ಗುರುವಾರ ಬೆಳಿಗ್ಗೆ 5 ಗಂಟೆಯಲ್ಲಿ ಘಟನೆ ನಡೆದಿದೆ. ಚೆನ್ನೈನಿಂದ ಬಂದ ಹೊಸ ವಾಹನಗಳನ್ನು ಟ್ರಕ್ನಿಂದ ಇಳಿಸಲಾಗುತ್ತಿತ್ತು. ಆಗ ಬೆಂಕಿ ಕಾಣಿಸಿಕೊಂಡಿದೆ. ನಂತರದ 90 ನಿಮಿಷಗಳ ಕಾಲ ಶೋರೂಮ್ನಲ್ಲಿ ಬೆಂಕಿ ಹೊತ್ತಿ ಉರಿದಿದೆ. ಬೆಂಕಿ ನಂದಿಸಲು 5 ಅಗ್ನಿಶಾಮಕ ವಾಹನಗಳು ಶ್ರಮಿಸಿದವು. ಹೀಗಾಗಿ 200 ಬೈಕ್ಗಳು ನಾಶವಾಗುವುದು ತಪ್ಪಿದೆ’ ಎಂದು ವಿಜಯವಾಡ ಕೇಂದ್ರ ವಿಭಾಗದ ಎಸಿಪಿ ಪಿ ಭಾಸ್ಕರ್ ರಾವ್ ತಿಳಿಸಿದ್ದಾರೆ.