ಧುಬ್ರಿ, ಅಸ್ಸಾಂ: ‘ಭಾರತದೊಳಗೆ ಅಕ್ರಮವಾಗಿ ಪ್ರವೇಶಿಸಿದ ಬಾಂಗ್ಲಾದೇಶದ ಹತ್ತು ಪ್ರಜೆಗಳ ಪೈಕಿ ಐವರನ್ನು ಸೌಹಾರ್ದತೆಯ ಸಂಕೇತವಾಗಿ ಬಾಂಗ್ಲಾದೇಶದ ಗಡಿ ಕಾವಲು ಪಡೆಗೆ (ಬಿಜಿಬಿ) ಹಸ್ತಾಂತರಿಸಲಾಗಿದೆ’ ಎಂದು ಬಿಎಸ್ಎಫ್ ಅಧಿಕಾರಿಗಳು ಭಾನುವಾರ ತಿಳಿಸಿದರು.
ಪಶ್ಚಿಮ ಬಂಗಾಳದ ಕೂಚ್ಬಿಹಾರ ಜಿಲ್ಲೆಯ ಮೂಲಕ ಭಾರತದೊಳಗೆ ಪ್ರವೇಶಿಸಲು ಯತ್ನಿಸಿದ ಐದು ಮಕ್ಕಳು, ನಾಲ್ವರು ಮಹಿಳೆಯರು ಸೇರಿದಂತೆ ಹತ್ತು ಮಂದಿಯನ್ನು ಸಬ್ರಿ ಗಡಿ ಬಳಿ ಬಿಎಸ್ಎಫ್ ಪಡೆ ಶನಿವಾರ ಬಂಧಿಸಿತ್ತು.
‘ಈ ಪೈಕಿ ಐವರನ್ನುಸಂಪೂರ್ಣ ಪರಿಶೀಲನೆಯ ಬಳಿಕ ಶನಿವಾರ ಸಂಜೆ ಬಿಜಿಬಿಗೆ ಹಸ್ತಾಂತರಿಸಲಾಯಿತು. ಇನ್ನುಳಿದ ಐವರನ್ನು ವಿಚಾರಣೆಗಾಗಿ ಸ್ಥಳೀಯ ಪೊಲೀಸರ ವಶಕ್ಕೆ ನೀಡಲಾಗಿದೆ’ ಎಂದು ಅಧಿಕಾರಿಗಳು ಹೇಳಿದರು.