<p>ನವದೆಹಲಿ: ನೀರಿನಲ್ಲಿ ಮುಳುಗುತ್ತಿದ್ದ ಜನರನ್ನು ರಕ್ಷಿಸಿದ ಇಬ್ಬರು ಯುವಕರು, ಬೆಂಕಿ ಹೊತ್ತಿಕೊಂಡ ವಾಹನದಿಂದ ನಾಲ್ವರು ಮಕ್ಕಳನ್ನು ರಕ್ಷಿಸಿದ ಪಂಜಾಬ್ ಬಾಲಕಿಗೆ ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡುವ ಸಂಸ್ಥೆಯೊಂದು ಶುಕ್ರವಾರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.</p>.<p>ಇಂಡಿಯನ್ ಕೌನ್ಸಿಲ್ ಫಾರ್ ಚೈಲ್ಡ್ ವೆಲ್ಫೇರ್ (ಐಸಿಸಿಡಬ್ಲ್ಯೂ) ಮೂರು ವರ್ಷಗಳ ನಂತರ ನಡೆಸಿದ ಈ ಪ್ರಶಸ್ತಿಯನ್ನು ವಿವಿಧ ರಾಜ್ಯಗಳ 56 ಮಕ್ಕಳಿಗೆ ನೀಡಲಾಯಿತು.</p>.<p>2020ರ ಸಾಲಿನ 22 ಪ್ರಶಸ್ತಿ ವಿಜೇತರು, 2021ರ ಸಾಲಿನ 16 ಹಾಗೂ 2022ರ ಸಾಲಿನ 18 ಮಂದಿ ಪ್ರಶಸ್ತಿ ವಿಜೇತರನ್ನು ಶುಕ್ರವಾರ ಸನ್ಮಾನಿಸಲಾಯಿತು ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.</p>.<p>ಐಸಿಸಿಡಬ್ಲ್ಯೂ ಮಾರ್ಕಂಡೇಯ ಪ್ರಶಸ್ತಿ, ಪ್ರಹ್ಲಾದ ಪ್ರಶಸ್ತಿ, ಏಕಲವ್ಯ ಪ್ರಶಸ್ತಿ, ಅಭಿಮನ್ಯು ಪ್ರಶಸ್ತಿ, ಶ್ರವಣ್ ಪ್ರಶಸ್ತಿ, ಧ್ರುವ ಪ್ರಶಸ್ತಿ ಸೇರಿದಂತೆ ಐಸಿಸಿಡಬ್ಲ್ಯೂನ ಇತರ ಆರು ವಿಶೇಷ ಪ್ರಶಸ್ತಿಗಳು ಸೇರಿವೆ.</p>.<p>ಚಿರತೆಯೊಂದಿಗೆ ಹೋರಾಡಿ ತನ್ನ ಸ್ನೇಹಿತನ ಜೀವ ಉಳಿಸಿದ 18 ವರ್ಷದ ಮೋಹಿತ್ ಚಂದ್ರ ಉಪ್ರೇಟಿ ಅವರಿಗೆ 2020ನೇ ಸಾಲಿನ ಮಾರ್ಕಂಡೇಯ ಪ್ರಶಸ್ತಿ ಪ್ರದಾನ ಮಾಡಲಾಯಿತು.</p>.<p>2021ನೇ ಸಾಲಿನ ಇದೇ ಪ್ರಶಸ್ತಿಯನ್ನು ಛತ್ತೀಸಗಢದ 16 ವರ್ಷದ ಅಮನ್ ಜ್ಯೋತಿ ಜಾಹಿರೆ ಎಂಬ ಬಾಲಕನಿಗೆ ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ: ನೀರಿನಲ್ಲಿ ಮುಳುಗುತ್ತಿದ್ದ ಜನರನ್ನು ರಕ್ಷಿಸಿದ ಇಬ್ಬರು ಯುವಕರು, ಬೆಂಕಿ ಹೊತ್ತಿಕೊಂಡ ವಾಹನದಿಂದ ನಾಲ್ವರು ಮಕ್ಕಳನ್ನು ರಕ್ಷಿಸಿದ ಪಂಜಾಬ್ ಬಾಲಕಿಗೆ ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡುವ ಸಂಸ್ಥೆಯೊಂದು ಶುಕ್ರವಾರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.</p>.<p>ಇಂಡಿಯನ್ ಕೌನ್ಸಿಲ್ ಫಾರ್ ಚೈಲ್ಡ್ ವೆಲ್ಫೇರ್ (ಐಸಿಸಿಡಬ್ಲ್ಯೂ) ಮೂರು ವರ್ಷಗಳ ನಂತರ ನಡೆಸಿದ ಈ ಪ್ರಶಸ್ತಿಯನ್ನು ವಿವಿಧ ರಾಜ್ಯಗಳ 56 ಮಕ್ಕಳಿಗೆ ನೀಡಲಾಯಿತು.</p>.<p>2020ರ ಸಾಲಿನ 22 ಪ್ರಶಸ್ತಿ ವಿಜೇತರು, 2021ರ ಸಾಲಿನ 16 ಹಾಗೂ 2022ರ ಸಾಲಿನ 18 ಮಂದಿ ಪ್ರಶಸ್ತಿ ವಿಜೇತರನ್ನು ಶುಕ್ರವಾರ ಸನ್ಮಾನಿಸಲಾಯಿತು ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.</p>.<p>ಐಸಿಸಿಡಬ್ಲ್ಯೂ ಮಾರ್ಕಂಡೇಯ ಪ್ರಶಸ್ತಿ, ಪ್ರಹ್ಲಾದ ಪ್ರಶಸ್ತಿ, ಏಕಲವ್ಯ ಪ್ರಶಸ್ತಿ, ಅಭಿಮನ್ಯು ಪ್ರಶಸ್ತಿ, ಶ್ರವಣ್ ಪ್ರಶಸ್ತಿ, ಧ್ರುವ ಪ್ರಶಸ್ತಿ ಸೇರಿದಂತೆ ಐಸಿಸಿಡಬ್ಲ್ಯೂನ ಇತರ ಆರು ವಿಶೇಷ ಪ್ರಶಸ್ತಿಗಳು ಸೇರಿವೆ.</p>.<p>ಚಿರತೆಯೊಂದಿಗೆ ಹೋರಾಡಿ ತನ್ನ ಸ್ನೇಹಿತನ ಜೀವ ಉಳಿಸಿದ 18 ವರ್ಷದ ಮೋಹಿತ್ ಚಂದ್ರ ಉಪ್ರೇಟಿ ಅವರಿಗೆ 2020ನೇ ಸಾಲಿನ ಮಾರ್ಕಂಡೇಯ ಪ್ರಶಸ್ತಿ ಪ್ರದಾನ ಮಾಡಲಾಯಿತು.</p>.<p>2021ನೇ ಸಾಲಿನ ಇದೇ ಪ್ರಶಸ್ತಿಯನ್ನು ಛತ್ತೀಸಗಢದ 16 ವರ್ಷದ ಅಮನ್ ಜ್ಯೋತಿ ಜಾಹಿರೆ ಎಂಬ ಬಾಲಕನಿಗೆ ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>