<p><strong>ನವದೆಹಲಿ</strong>: ಸರ್ಕಾರಿ ಸೇವೆಯು ಡಿಜಿಟಲೀಕರಣಗೊಂಡಿದೆ. ವಿಳಂಬ ತಪ್ಪಿಸಲು ಏಕ ಗವಾಕ್ಷಿ ಪದ್ಧತಿ ಅನುಷ್ಠಾನಗೊಂಡಿದೆ. ಕ್ಲೇಮು ಪಡೆಯಲು ಅಮೌಖಿಕ ಮೌಲ್ಯಮಾಪನ (ಫೇಸ್ಲೆಸ್ ಅಸೆಸ್ಮೆಂಟ್) ವ್ಯವಸ್ಥೆ ರೂಪಿಸಲಾಗಿದೆ. ಆದರೂ, ಕಚೇರಿಗಳಲ್ಲಿ ಭ್ರಷ್ಟಾಚಾರ ಮುಂದುವರಿದಿದೆ ಎಂದು ಲೋಕಲ್ ಸರ್ಕಲ್ ಸಂಸ್ಥೆ ವರದಿ ತಿಳಿಸಿದೆ.</p>.<p>ಲಂಚದ ಹಾವಳಿ ತಡೆಗೆ ಹಲವು ಕ್ರಮಕೈಗೊಂಡಿದ್ದರೂ ಕಳೆದ ಒಂದು ವರ್ಷದ ಅವಧಿಯಲ್ಲಿ ಮೂವರು ಉದ್ಯಮಿಗಳ ಪೈಕಿ ಇಬ್ಬರು ಉದ್ಯಮಿಗಳು ತಮ್ಮ ಯೋಜನೆಗಳಿಗೆ ಒಪ್ಪಿಗೆ ಪಡೆಯಲು ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂದು ಹೇಳಿದೆ. </p>.<p>ಸಂಸ್ಥೆಯು ದೇಶದ 159 ಜಿಲ್ಲೆಗಳಲ್ಲಿ ನಡೆಸಿರುವ ಸಮೀಕ್ಷೆಯಲ್ಲಿ ಈ ಸಂಗತಿ ಬಯಲಿಗೆ ಬಂದಿದೆ. ಸಮೀಕ್ಷೆಯಲ್ಲಿ 18 ಸಾವಿರ ಪ್ರತಿಕ್ರಿಯೆಗಳನ್ನು ಸ್ವೀಕರಿಸಲಾಗಿದೆ.</p>.<p>ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ ಕಂಪನಿಗಳ ಪೈಕಿ ಶೇ 66ರಷ್ಟು ಕಂಪನಿಗಳು ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿವೆ. ಈ ಪೈಕಿ ಶೇ 41ರಷ್ಟು ಕಂಪನಿಗಳು ಕಚೇರಿಗಳಲ್ಲಿ ಸರಾಗವಾಗಿ ತಮ್ಮ ಕೆಲಸ ಮಾಡಿಸಿಕೊಳ್ಳಲು ಹಲವು ಬಾರಿ ಲಂಚ ನೀಡಿವೆ. ಶೇ 21ರಷ್ಟು ಕಂಪನಿಗಳು ಒಂದು ಅಥವಾ ಎರಡು ಬಾರಿ ಲಂಚ ನೀಡಿವೆ ಎಂದು ವಿವರಿಸಿದೆ.</p>.<p>ಸರ್ಕಾರಿ ಕಚೇರಿಗಳಲ್ಲಿ ಯೋಜನೆಗೆ ಒಪ್ಪಿಗೆ, ವಹಿವಾಟಿಗೆ ಅನುಮತಿ ಪಡೆಯಲು, ಸಂಬಂಧಪಟ್ಟ ಇಲಾಖೆಯಿಂದ ಪರವಾನಗಿಯ ನಕಲಿ ಪ್ರತಿ ಪಡೆಯಲು ಲಂಚ ನೀಡಿವೆ ಎಂದು ಹೇಳಿದೆ.</p>.<p>ಕಾನೂನು, ಮಾಪನಶಾಸ್ತ್ರ, ಆಹಾರ, ಔಷಧ, ಆರೋಗ್ಯ ಇಲಾಖೆ, ಜಿಎಸ್ಟಿ ಅಧಿಕಾರಿಗಳು, ವಾಯುಮಾಲಿನ್ಯ ನಿಯಂತ್ರಣ ಮಂಡಳಿ, ಪುರಸಭೆ ಮತ್ತು ವಿದ್ಯುತ್ ಕಚೇರಿಗಳ ಅಧಿಕಾರಿಗಳಿಗೆ ಲಂಚ ನೀಡಲಾಗಿದೆ ಎಂದು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಸರ್ಕಾರಿ ಸೇವೆಯು ಡಿಜಿಟಲೀಕರಣಗೊಂಡಿದೆ. ವಿಳಂಬ ತಪ್ಪಿಸಲು ಏಕ ಗವಾಕ್ಷಿ ಪದ್ಧತಿ ಅನುಷ್ಠಾನಗೊಂಡಿದೆ. ಕ್ಲೇಮು ಪಡೆಯಲು ಅಮೌಖಿಕ ಮೌಲ್ಯಮಾಪನ (ಫೇಸ್ಲೆಸ್ ಅಸೆಸ್ಮೆಂಟ್) ವ್ಯವಸ್ಥೆ ರೂಪಿಸಲಾಗಿದೆ. ಆದರೂ, ಕಚೇರಿಗಳಲ್ಲಿ ಭ್ರಷ್ಟಾಚಾರ ಮುಂದುವರಿದಿದೆ ಎಂದು ಲೋಕಲ್ ಸರ್ಕಲ್ ಸಂಸ್ಥೆ ವರದಿ ತಿಳಿಸಿದೆ.</p>.<p>ಲಂಚದ ಹಾವಳಿ ತಡೆಗೆ ಹಲವು ಕ್ರಮಕೈಗೊಂಡಿದ್ದರೂ ಕಳೆದ ಒಂದು ವರ್ಷದ ಅವಧಿಯಲ್ಲಿ ಮೂವರು ಉದ್ಯಮಿಗಳ ಪೈಕಿ ಇಬ್ಬರು ಉದ್ಯಮಿಗಳು ತಮ್ಮ ಯೋಜನೆಗಳಿಗೆ ಒಪ್ಪಿಗೆ ಪಡೆಯಲು ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂದು ಹೇಳಿದೆ. </p>.<p>ಸಂಸ್ಥೆಯು ದೇಶದ 159 ಜಿಲ್ಲೆಗಳಲ್ಲಿ ನಡೆಸಿರುವ ಸಮೀಕ್ಷೆಯಲ್ಲಿ ಈ ಸಂಗತಿ ಬಯಲಿಗೆ ಬಂದಿದೆ. ಸಮೀಕ್ಷೆಯಲ್ಲಿ 18 ಸಾವಿರ ಪ್ರತಿಕ್ರಿಯೆಗಳನ್ನು ಸ್ವೀಕರಿಸಲಾಗಿದೆ.</p>.<p>ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ ಕಂಪನಿಗಳ ಪೈಕಿ ಶೇ 66ರಷ್ಟು ಕಂಪನಿಗಳು ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿವೆ. ಈ ಪೈಕಿ ಶೇ 41ರಷ್ಟು ಕಂಪನಿಗಳು ಕಚೇರಿಗಳಲ್ಲಿ ಸರಾಗವಾಗಿ ತಮ್ಮ ಕೆಲಸ ಮಾಡಿಸಿಕೊಳ್ಳಲು ಹಲವು ಬಾರಿ ಲಂಚ ನೀಡಿವೆ. ಶೇ 21ರಷ್ಟು ಕಂಪನಿಗಳು ಒಂದು ಅಥವಾ ಎರಡು ಬಾರಿ ಲಂಚ ನೀಡಿವೆ ಎಂದು ವಿವರಿಸಿದೆ.</p>.<p>ಸರ್ಕಾರಿ ಕಚೇರಿಗಳಲ್ಲಿ ಯೋಜನೆಗೆ ಒಪ್ಪಿಗೆ, ವಹಿವಾಟಿಗೆ ಅನುಮತಿ ಪಡೆಯಲು, ಸಂಬಂಧಪಟ್ಟ ಇಲಾಖೆಯಿಂದ ಪರವಾನಗಿಯ ನಕಲಿ ಪ್ರತಿ ಪಡೆಯಲು ಲಂಚ ನೀಡಿವೆ ಎಂದು ಹೇಳಿದೆ.</p>.<p>ಕಾನೂನು, ಮಾಪನಶಾಸ್ತ್ರ, ಆಹಾರ, ಔಷಧ, ಆರೋಗ್ಯ ಇಲಾಖೆ, ಜಿಎಸ್ಟಿ ಅಧಿಕಾರಿಗಳು, ವಾಯುಮಾಲಿನ್ಯ ನಿಯಂತ್ರಣ ಮಂಡಳಿ, ಪುರಸಭೆ ಮತ್ತು ವಿದ್ಯುತ್ ಕಚೇರಿಗಳ ಅಧಿಕಾರಿಗಳಿಗೆ ಲಂಚ ನೀಡಲಾಗಿದೆ ಎಂದು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>