ನಂತರ ಮಾತನಾಡಿದ ಆತಿಶಿ, ‘ಕೇಜ್ರಿವಾಲ್ ಅವರ ಅಕ್ರಮ ಬಂಧನವನ್ನು ಖಂಡಿಸಿ ಎಎಪಿಯ ಎಲ್ಲಾ ಶಾಕಸರು ಪ್ರತಿಭಟಿಸುತ್ತಿದ್ದಾರೆ. ದೇಶದಿಂದ ಪ್ರಜಾಪ್ರಭುತ್ವವನ್ನು ತೊಲಗಿಸುವ ಯತ್ನ ನಡೆಯುತ್ತಿದೆ. ಭಾರತ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಹಾಲಿ ಮುಖ್ಯಮಂತ್ರಿಯನ್ನು ಬಂಧಿಸಲಾಗಿದೆ, ಅದೂ ಲೋಕಸಭಾ ಚುನಾವಣೆಗೂ ಕೆಲವೇ ದಿನ ಮುನ್ನ’ ಎಂದು ಆಕ್ರೋಶ ವ್ಯಕ್ತಪಡಿಸಿದರು.