<p><strong>ನವದೆಹಲಿ: </strong>‘ಗೌತಮ್ ಅದಾನಿ ನೇತೃತ್ವದ ಸಮೂಹದ ಉದ್ಯಮದಲ್ಲಿ ಈಗ ಎದ್ದಿರುವ ಬಿರುಗಾಳಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನೇ ದುರ್ಬಲಗೊಳಿಸಬಹುದು’ ಎಂದು ಅಮೆರಿಕದ ಶ್ರೀಮಂತ ಉದ್ಯಮಿ ಜಾರ್ಜ್ ಸೊರೊಸ್ ಹೇಳಿದ್ದಾರೆ.</p>.<p>ತೀವ್ರ ಚರ್ಚೆಗೆ ಗ್ರಾಸವಾಗಿರುವ ಅದಾನಿ ಉದ್ಯಮ ಕುರಿತ ಬೆಳವಣಿಗೆಗೆ ಸಂಬಂಧಿಸಿದ ಈ ಹೇಳಿಕೆಗೆ ಆಡಳಿತರೂಢ ಬಿಜೆಪಿ ಕಟುವಾಗಿ ಟೀಕಿಸಿದೆ. ‘ಅದಾನಿ ಸಮೂಹದ ಬೆಳವಣಿಗೆ, ಜಾರ್ಜ್ಗೆ ಸಂಬಂಧಪಡದ ವಿಷಯ’ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.</p>.<p>ಷೇರು ಮೌಲ್ಯದ ನಿಗದಿಯಲ್ಲಿ ವಂಚನೆ ಕುರಿತಂತೆ ಅಮೆರಿಕ ಮೂಲದ ಹಿಂಡನ್ಬರ್ಗ್ ರಿಸರ್ಚ್ ವರದಿಯ ಬಳಿಕ ಅದಾನಿ ಸಮೂಹವು ತೀವ್ರ ಒತ್ತಡದಲ್ಲಿದೆ. ಇನ್ನೊಂದೆಡೆ, ಈ ವರದಿಯ ಆರೋಪವನ್ನು ಸಮೂಹವು ‘ಆಧಾರರಹಿತ’ ಎಂದು ನಿರಾಕರಿಸಿದೆ.</p>.<p>ಮ್ಯುನಿಚ್ ಸೆಕ್ಯೂರಿಟಿ ಕಾನ್ಫರೆನ್ಸ್ನಲ್ಲಿ ಮಾತನಾಡಿದ ಸೊರೊಸ್ ಅವರು, ‘ಅದಾನಿ ಸಮೂಹದ ಬೆಳವಣಿಗೆಗಳಿಗೆ ಸಂಬಂಧಿಸಿ ವಿದೇಶಿ ಹೂಡಿಕೆದಾರರ ಪ್ರಶ್ನೆಗಳು ಮತ್ತು ಸಂಸತ್ತಿನಲ್ಲಿ ವ್ಯಕ್ತವಾಗಿರುವ ಆರೋಪ ಕುರಿತಂತೆ ಮೋದಿ ಅವರು ‘ಉತ್ತರಿಸಲೇಬೇಕು’ ಎಂದಿದ್ದಾರೆ.</p>.<p>‘ಪ್ರಧಾನಿ ಮೋದಿ ಮತ್ತು ಉದ್ಯಮಿ ಅದಾನಿ ಆತ್ಮೀಯರು. ಅವರ ಹಣೆಬರಹ ಪರಸ್ಪರ ಬೆಸೆದುಕೊಂಡಿದೆ. ಷೇರು ಮೌಲ್ಯ ವಿರೂಪಗೊಳಿಸಿದ ಆರೋಪ ಆದಾನಿ ಮೇಲಿದೆ. ಅವರ ಕಂಪನಿಯ ಷೇರುಗಳ ಮೌಲ್ಯ ಕಾಗದದ ಮನೆಯಂತೆ ಕುಸಿದಿದೆ. ಈ ಬೆಳವಣಿಗೆ ಕುರಿತು ಮೋದಿ ಮೌನ ತಳೆದಿದ್ದಾರೆ. ಆದರೆ, ಅವರು ಉತ್ತರಿಸಲೇಬೇಕಿದೆ’ ಎಂದು ಸೊರೊಸ್ ಹೇಳಿದರು.</p>.<p><strong>ಸಂಬಂಧಪಡದ ವಿಷಯ: ಜೈರಾಮ್ ರಮೇಶ್<br />ನವದೆಹಲಿ</strong>: ಅದಾನಿ ಸಮೂಹದ ಬೆಳವಣಿಗೆಯು ಭಾರತದಲ್ಲಿ ಸರ್ಕಾರದ ಬದಲಾವಣೆಗೆ ಕಾರಣವಾಗಲಿದೆಯೇ ಎಂಬುದು ಪೂರ್ಣವಾಗಿ ಕಾಂಗ್ರೆಸ್ ಮತ್ತು ಇತರೆ ವಿರೋಧಪಕ್ಷಗಳಿಗೆ ಸಂಬಂಧಿಸಿದ್ದಾಗಿದೆ. ಇದು, ಉದ್ಯಮಿ ಜಾರ್ಜ್ ಸೊರೊಸ್ ಅವರಿಗೆ ಸಂಬಂಧಿಸಿದ್ದಲ್ಲ ಎಂದು ಕಾಂಗ್ರೆಸ್ ಪಕ್ಷ ಪ್ರತಿಕ್ರಿಯಿಸಿದೆ.</p>.<p>ಸೊರೊಸ್ ಅವರ ಹೇಳಿಕೆ ಹಿನ್ನೆಲೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಟ್ವೀಟ್ ಮಾಡಿದ್ದು, ಅದಾನಿ ಸಮೂಹದ ಬೆಳವಣಿಗೆ ಆಡಳಿತ ಬದಲಾವಣೆಗೆ ಕಾರಣವಾಗಲಿದೆಯೇ ಎಂಬುದು ಸಂಪೂರ್ಣವಾಗಿ ಆಂತರಿಕವಾದುದು ಎಂದು ಪ್ರತಿಪಾದಿಸಿದ್ದಾರೆ.</p>.<p>ನಮ್ಮ ಚುನಾವಣಾ ಫಲಿತಾಂಶಗಳನ್ನು ನಿರ್ಧರಿಸಲು ನೆಹರೂ ಪರಂಪರೆಯೂ ಸೊರೊಸ್ ಅಂತಹವರಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.</p>.<p><strong>ವಿದೇಶಿ ಶಕ್ತಿ ಸೋಲಿಸುತ್ತೇವೆ: ಸ್ಮೃತಿ ಇರಾನಿ<br />ನವದೆಹಲಿ</strong>: ‘ಸೊರೊಸ್ ಅವರು ಪ್ರಧಾನಿ ಮೋದಿ ಅವರನ್ನಷ್ಟೇ ಅಲ್ಲ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಗುರಿಯಾಗಿಸಿ ಟೀಕಿಸುತ್ತಿದ್ದಾರೆ‘ ಎಂದು ಬಿಜೆಪಿ ಕಟುವಾಗಿ ಪ್ರತಿಕ್ರಿಯಿಸಿದೆ.</p>.<p>ಭಾರತದ ವಿರುದ್ಧ ಯುದ್ಧದ ಒತ್ತಡ ಹೇರಲಾಗುತ್ತಿದೆ. ಈ ಒತ್ತಡ ಮತ್ತು ಭಾರತದ ಹಿತಾಸಕ್ತಿಯ ನಡುವೆ ಮೋದಿ ಇದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಪ್ರತಿಕ್ರಿಯಿಸಿದರು.</p>.<p>‘ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳುಗೆಡವಲು ಸೊರೊಸ್ ಬಯಸಿದ್ದಾರೆ. ತಾವು ಬಯಸಿದ ಕೆಲವರು ಇಲ್ಲಿ ಸರ್ಕಾರ ರಚಿಸಬೇಕು ಎಂದು ಅವರು ಬಯಸುತ್ತಿದ್ದಾರೆ. ನಾವು ಇಂಥ ವಿದೇಶಿ ಶಕ್ತಿಗಳನ್ನು ಹಿಂದೆಯೂ ಸೋಲಿಸಿದ್ದೇವೆ. ಮತ್ತೆ ಸೋಲಿಸಲಿದ್ದೇವೆ‘ ಎಂದು ಅವರು ಪ್ರತಿಪಾದಿಸಿದ್ದಾರೆ.</p>.<p>‘ನಾನು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗುರಿಯಾಗಿಸಿ ದಾಳಿ ಮಾಡುತ್ತೇನೆ. ಮೋದಿ ಅವರೇ ನನ್ನ ದಾಳಿಯ ಕೇಂದ್ರ ಬಿಂದುವಾಗಿರುತ್ತಾರೆ ಎಂದು ಸೊರೊಸ್ ಹೇಳಿದ್ದಾರೆ. ಅವರು ಭಾರತದ ಹಿತಾಸಕ್ತಿಯ ರಕ್ಷಣೆಯಲ್ಲ, ತನ್ನ ಹಿತಾಸಕ್ತಿ ರಕ್ಷಿಸುವವರು ಕೇಂದ್ರದಲ್ಲಿ ಇರಬೇಕು ಎಂದು ಬಯಸುತ್ತಾರೆ‘ ಎಂದಿದ್ದಾರೆ.</p>.<p>ಆದರೆ, ತಮ್ಮ ಈ ಮಾತುಗಳಿಗೆ ಪೂರಕವಾಗಿ ಅವರು ಯಾವುದೇ ಅಂಶವನ್ನು ಉಲ್ಲೇಖಿಸಲಿಲ್ಲ. ಈ ಬೆಳವಣಿಗೆಯು ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಮೋದಿ ಅವರು ಹೊಂದಿರುವ ಹಿಡಿತ ದುರ್ಬಲಗೊಳಿಸಿದೆ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>‘ಗೌತಮ್ ಅದಾನಿ ನೇತೃತ್ವದ ಸಮೂಹದ ಉದ್ಯಮದಲ್ಲಿ ಈಗ ಎದ್ದಿರುವ ಬಿರುಗಾಳಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನೇ ದುರ್ಬಲಗೊಳಿಸಬಹುದು’ ಎಂದು ಅಮೆರಿಕದ ಶ್ರೀಮಂತ ಉದ್ಯಮಿ ಜಾರ್ಜ್ ಸೊರೊಸ್ ಹೇಳಿದ್ದಾರೆ.</p>.<p>ತೀವ್ರ ಚರ್ಚೆಗೆ ಗ್ರಾಸವಾಗಿರುವ ಅದಾನಿ ಉದ್ಯಮ ಕುರಿತ ಬೆಳವಣಿಗೆಗೆ ಸಂಬಂಧಿಸಿದ ಈ ಹೇಳಿಕೆಗೆ ಆಡಳಿತರೂಢ ಬಿಜೆಪಿ ಕಟುವಾಗಿ ಟೀಕಿಸಿದೆ. ‘ಅದಾನಿ ಸಮೂಹದ ಬೆಳವಣಿಗೆ, ಜಾರ್ಜ್ಗೆ ಸಂಬಂಧಪಡದ ವಿಷಯ’ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.</p>.<p>ಷೇರು ಮೌಲ್ಯದ ನಿಗದಿಯಲ್ಲಿ ವಂಚನೆ ಕುರಿತಂತೆ ಅಮೆರಿಕ ಮೂಲದ ಹಿಂಡನ್ಬರ್ಗ್ ರಿಸರ್ಚ್ ವರದಿಯ ಬಳಿಕ ಅದಾನಿ ಸಮೂಹವು ತೀವ್ರ ಒತ್ತಡದಲ್ಲಿದೆ. ಇನ್ನೊಂದೆಡೆ, ಈ ವರದಿಯ ಆರೋಪವನ್ನು ಸಮೂಹವು ‘ಆಧಾರರಹಿತ’ ಎಂದು ನಿರಾಕರಿಸಿದೆ.</p>.<p>ಮ್ಯುನಿಚ್ ಸೆಕ್ಯೂರಿಟಿ ಕಾನ್ಫರೆನ್ಸ್ನಲ್ಲಿ ಮಾತನಾಡಿದ ಸೊರೊಸ್ ಅವರು, ‘ಅದಾನಿ ಸಮೂಹದ ಬೆಳವಣಿಗೆಗಳಿಗೆ ಸಂಬಂಧಿಸಿ ವಿದೇಶಿ ಹೂಡಿಕೆದಾರರ ಪ್ರಶ್ನೆಗಳು ಮತ್ತು ಸಂಸತ್ತಿನಲ್ಲಿ ವ್ಯಕ್ತವಾಗಿರುವ ಆರೋಪ ಕುರಿತಂತೆ ಮೋದಿ ಅವರು ‘ಉತ್ತರಿಸಲೇಬೇಕು’ ಎಂದಿದ್ದಾರೆ.</p>.<p>‘ಪ್ರಧಾನಿ ಮೋದಿ ಮತ್ತು ಉದ್ಯಮಿ ಅದಾನಿ ಆತ್ಮೀಯರು. ಅವರ ಹಣೆಬರಹ ಪರಸ್ಪರ ಬೆಸೆದುಕೊಂಡಿದೆ. ಷೇರು ಮೌಲ್ಯ ವಿರೂಪಗೊಳಿಸಿದ ಆರೋಪ ಆದಾನಿ ಮೇಲಿದೆ. ಅವರ ಕಂಪನಿಯ ಷೇರುಗಳ ಮೌಲ್ಯ ಕಾಗದದ ಮನೆಯಂತೆ ಕುಸಿದಿದೆ. ಈ ಬೆಳವಣಿಗೆ ಕುರಿತು ಮೋದಿ ಮೌನ ತಳೆದಿದ್ದಾರೆ. ಆದರೆ, ಅವರು ಉತ್ತರಿಸಲೇಬೇಕಿದೆ’ ಎಂದು ಸೊರೊಸ್ ಹೇಳಿದರು.</p>.<p><strong>ಸಂಬಂಧಪಡದ ವಿಷಯ: ಜೈರಾಮ್ ರಮೇಶ್<br />ನವದೆಹಲಿ</strong>: ಅದಾನಿ ಸಮೂಹದ ಬೆಳವಣಿಗೆಯು ಭಾರತದಲ್ಲಿ ಸರ್ಕಾರದ ಬದಲಾವಣೆಗೆ ಕಾರಣವಾಗಲಿದೆಯೇ ಎಂಬುದು ಪೂರ್ಣವಾಗಿ ಕಾಂಗ್ರೆಸ್ ಮತ್ತು ಇತರೆ ವಿರೋಧಪಕ್ಷಗಳಿಗೆ ಸಂಬಂಧಿಸಿದ್ದಾಗಿದೆ. ಇದು, ಉದ್ಯಮಿ ಜಾರ್ಜ್ ಸೊರೊಸ್ ಅವರಿಗೆ ಸಂಬಂಧಿಸಿದ್ದಲ್ಲ ಎಂದು ಕಾಂಗ್ರೆಸ್ ಪಕ್ಷ ಪ್ರತಿಕ್ರಿಯಿಸಿದೆ.</p>.<p>ಸೊರೊಸ್ ಅವರ ಹೇಳಿಕೆ ಹಿನ್ನೆಲೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಟ್ವೀಟ್ ಮಾಡಿದ್ದು, ಅದಾನಿ ಸಮೂಹದ ಬೆಳವಣಿಗೆ ಆಡಳಿತ ಬದಲಾವಣೆಗೆ ಕಾರಣವಾಗಲಿದೆಯೇ ಎಂಬುದು ಸಂಪೂರ್ಣವಾಗಿ ಆಂತರಿಕವಾದುದು ಎಂದು ಪ್ರತಿಪಾದಿಸಿದ್ದಾರೆ.</p>.<p>ನಮ್ಮ ಚುನಾವಣಾ ಫಲಿತಾಂಶಗಳನ್ನು ನಿರ್ಧರಿಸಲು ನೆಹರೂ ಪರಂಪರೆಯೂ ಸೊರೊಸ್ ಅಂತಹವರಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.</p>.<p><strong>ವಿದೇಶಿ ಶಕ್ತಿ ಸೋಲಿಸುತ್ತೇವೆ: ಸ್ಮೃತಿ ಇರಾನಿ<br />ನವದೆಹಲಿ</strong>: ‘ಸೊರೊಸ್ ಅವರು ಪ್ರಧಾನಿ ಮೋದಿ ಅವರನ್ನಷ್ಟೇ ಅಲ್ಲ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಗುರಿಯಾಗಿಸಿ ಟೀಕಿಸುತ್ತಿದ್ದಾರೆ‘ ಎಂದು ಬಿಜೆಪಿ ಕಟುವಾಗಿ ಪ್ರತಿಕ್ರಿಯಿಸಿದೆ.</p>.<p>ಭಾರತದ ವಿರುದ್ಧ ಯುದ್ಧದ ಒತ್ತಡ ಹೇರಲಾಗುತ್ತಿದೆ. ಈ ಒತ್ತಡ ಮತ್ತು ಭಾರತದ ಹಿತಾಸಕ್ತಿಯ ನಡುವೆ ಮೋದಿ ಇದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಪ್ರತಿಕ್ರಿಯಿಸಿದರು.</p>.<p>‘ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳುಗೆಡವಲು ಸೊರೊಸ್ ಬಯಸಿದ್ದಾರೆ. ತಾವು ಬಯಸಿದ ಕೆಲವರು ಇಲ್ಲಿ ಸರ್ಕಾರ ರಚಿಸಬೇಕು ಎಂದು ಅವರು ಬಯಸುತ್ತಿದ್ದಾರೆ. ನಾವು ಇಂಥ ವಿದೇಶಿ ಶಕ್ತಿಗಳನ್ನು ಹಿಂದೆಯೂ ಸೋಲಿಸಿದ್ದೇವೆ. ಮತ್ತೆ ಸೋಲಿಸಲಿದ್ದೇವೆ‘ ಎಂದು ಅವರು ಪ್ರತಿಪಾದಿಸಿದ್ದಾರೆ.</p>.<p>‘ನಾನು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗುರಿಯಾಗಿಸಿ ದಾಳಿ ಮಾಡುತ್ತೇನೆ. ಮೋದಿ ಅವರೇ ನನ್ನ ದಾಳಿಯ ಕೇಂದ್ರ ಬಿಂದುವಾಗಿರುತ್ತಾರೆ ಎಂದು ಸೊರೊಸ್ ಹೇಳಿದ್ದಾರೆ. ಅವರು ಭಾರತದ ಹಿತಾಸಕ್ತಿಯ ರಕ್ಷಣೆಯಲ್ಲ, ತನ್ನ ಹಿತಾಸಕ್ತಿ ರಕ್ಷಿಸುವವರು ಕೇಂದ್ರದಲ್ಲಿ ಇರಬೇಕು ಎಂದು ಬಯಸುತ್ತಾರೆ‘ ಎಂದಿದ್ದಾರೆ.</p>.<p>ಆದರೆ, ತಮ್ಮ ಈ ಮಾತುಗಳಿಗೆ ಪೂರಕವಾಗಿ ಅವರು ಯಾವುದೇ ಅಂಶವನ್ನು ಉಲ್ಲೇಖಿಸಲಿಲ್ಲ. ಈ ಬೆಳವಣಿಗೆಯು ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಮೋದಿ ಅವರು ಹೊಂದಿರುವ ಹಿಡಿತ ದುರ್ಬಲಗೊಳಿಸಿದೆ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>