ಬೆಂಗಳೂರು: ಮಿಚಾಂಗ್ ಚಂಡಮಾರುತದಿಂದ ತತ್ತರಿಸಿರುವ ಚೆನ್ನೈ ಮಹಾನಗರದಲ್ಲಿ ಎಲ್ಲಿ ನೋಡಿದರಲ್ಲಿ ನೀರು. ಪರಿಹಾರ ಕಾರ್ಯಾಚರಣೆ ತ್ವರಿತವಾಗಿ ನಡೆಯುತ್ತಿದ್ದು, ಜೀವ ಹಾನಿ ಹಾಗೂ ನೂರಾರು ಕೋಟಿ ರೂಪಾಯಿಯಷ್ಟು ಆಸ್ತಿ–ಪಾಸ್ತಿ ಹಾನಿಯಾಗಿದೆ.
ಚಂಡಮಾರುತದಿಂದ ಸೃಷ್ಟಿಯಾಗುವ ಮಳೆ ಹಾಗೂ ಮಾನ್ಸೂನ್ ಮಳೆಯಲ್ಲಿ ನಮ್ಮ ದೇಶಗಳಲ್ಲಿನ ಡಾಂಬರು, ಸಿಮೆಂಟ್ ರಸ್ತೆಗಳು ನೀರು ಹಿಡಿದಿಟ್ಟುಕೊಳ್ಳದೇ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡುತ್ತವೆ. ಇದರಿಂದ ನಗರಗಳಲ್ಲಿ ಪ್ರವಾಹ ಸೃಷ್ಟಿಯಾಗಿ ಎಲ್ಲೆಂದರಲ್ಲಿ ನೀರು ನುಗ್ಗುತ್ತದೆ.
ಇದಕ್ಕೆ ಖ್ಯಾತ ಉದ್ಯಮಿ ಆನಂದ್ ಮಹೀಂದ್ರ ಅವರು ಪರಿಹಾರವೊಂದನ್ನು ಸೂಚಿಸಿದ್ದು ಅವರು ವಿದೇಶದಲ್ಲಿರುವ ತಂತ್ರಜ್ಞಾನದಿಂದ ಪ್ರಭಾವಿತರಾಗಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ.