<p><strong>ನವದೆಹಲಿ:</strong> ದೆಹಲಿ ರಾಷ್ಟ್ರೀಯ ಜೈವಿಕ ಉದ್ಯಾನದಲ್ಲಿದ್ದ ಆಫ್ರಿಕನ್ ಆನೆ ಶಂಕರ್ ವೈರಾಣು ಸೋಂಕಿನಿಂದ ಮೃತಪಟ್ಟಿದೆ. ಹೃದಯಕ್ಕೆ ಸೋಂಕು ತಗುಲಿದ ಪರಿಣಾಮ ಆನೆ ಮೃತಪಟ್ಟಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.</p><p>ಇಎಂಸಿವಿ ಎನ್ನುವ ಸೋಂಕು ಹೃದಯ ಸ್ನಾಯುಗಳ ಉರಿಯೂತಕ್ಕೆ ಕಾರಣವಾಗಿದೆ. ಇದರಿಂದ ಆನೆ ಮೃತಪಟ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಸೆಪ್ಟೆಂಬರ್ 17 ರಂದು ಆನೆ ಮೃತಪಟ್ಟಿತ್ತು.</p><p>ಈ ಹಿಂದೆ ಹೃದಯ ವೈಫಲ್ಯದಿಂದ ಆನೆ ಮೃತಪಟ್ಟಿರುವುದಾಗಿ ಉದ್ಯಾನದ ಅಧಿಕಾರಿಗಳು ಹೇಳಿದ್ದರು.</p><p>ಇಎಂಸಿವಿ ಸೋಂಕು ಇಲಿಗಳಿಂದ ಹರಡುತ್ತವೆ. ಸೋಂಕು ಹೃದಯ ಸ್ನಾಯುಗಳ ಉರಿಯೂತಕ್ಕೆ ಕಾರಣವಾಗುತ್ತದೆ ಮತ್ತು ಹೃದಯ ವೈಫಲ್ಯಕ್ಕೆ ಕಾರಣವಾಗುತ್ತದೆ ಎಂದು ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ ಹೇಳಿದೆ.</p><p>ಆಫ್ರಿಕನ್ ಆನೆಯನ್ನು 1998 ರಲ್ಲಿ ಜಿಂಬಾಬ್ವೆ ಭಾರತಕ್ಕೆ ಉಡುಗೊರೆಯಾಗಿ ನೀಡಿತ್ತು. ಅದಕ್ಕೆ ಮಾಜಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಅವರ ಹೆಸರನ್ನು ಇಡಲಾಗಿತ್ತು.</p>.ಆಫ್ರಿಕನ್ ಆನೆ ಬಗ್ಗೆ ನಿರ್ಲಕ್ಷ: ದೆಹಲಿ ಝೂ ಸದಸ್ಯತ್ವ ಅಮಾನತುಗೊಳಿಸಿದ WAZA.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ದೆಹಲಿ ರಾಷ್ಟ್ರೀಯ ಜೈವಿಕ ಉದ್ಯಾನದಲ್ಲಿದ್ದ ಆಫ್ರಿಕನ್ ಆನೆ ಶಂಕರ್ ವೈರಾಣು ಸೋಂಕಿನಿಂದ ಮೃತಪಟ್ಟಿದೆ. ಹೃದಯಕ್ಕೆ ಸೋಂಕು ತಗುಲಿದ ಪರಿಣಾಮ ಆನೆ ಮೃತಪಟ್ಟಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.</p><p>ಇಎಂಸಿವಿ ಎನ್ನುವ ಸೋಂಕು ಹೃದಯ ಸ್ನಾಯುಗಳ ಉರಿಯೂತಕ್ಕೆ ಕಾರಣವಾಗಿದೆ. ಇದರಿಂದ ಆನೆ ಮೃತಪಟ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಸೆಪ್ಟೆಂಬರ್ 17 ರಂದು ಆನೆ ಮೃತಪಟ್ಟಿತ್ತು.</p><p>ಈ ಹಿಂದೆ ಹೃದಯ ವೈಫಲ್ಯದಿಂದ ಆನೆ ಮೃತಪಟ್ಟಿರುವುದಾಗಿ ಉದ್ಯಾನದ ಅಧಿಕಾರಿಗಳು ಹೇಳಿದ್ದರು.</p><p>ಇಎಂಸಿವಿ ಸೋಂಕು ಇಲಿಗಳಿಂದ ಹರಡುತ್ತವೆ. ಸೋಂಕು ಹೃದಯ ಸ್ನಾಯುಗಳ ಉರಿಯೂತಕ್ಕೆ ಕಾರಣವಾಗುತ್ತದೆ ಮತ್ತು ಹೃದಯ ವೈಫಲ್ಯಕ್ಕೆ ಕಾರಣವಾಗುತ್ತದೆ ಎಂದು ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ ಹೇಳಿದೆ.</p><p>ಆಫ್ರಿಕನ್ ಆನೆಯನ್ನು 1998 ರಲ್ಲಿ ಜಿಂಬಾಬ್ವೆ ಭಾರತಕ್ಕೆ ಉಡುಗೊರೆಯಾಗಿ ನೀಡಿತ್ತು. ಅದಕ್ಕೆ ಮಾಜಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಅವರ ಹೆಸರನ್ನು ಇಡಲಾಗಿತ್ತು.</p>.ಆಫ್ರಿಕನ್ ಆನೆ ಬಗ್ಗೆ ನಿರ್ಲಕ್ಷ: ದೆಹಲಿ ಝೂ ಸದಸ್ಯತ್ವ ಅಮಾನತುಗೊಳಿಸಿದ WAZA.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>